Showing posts with label ಪ್ರೇಮ ಪತ್ರಗಳು. Show all posts
Showing posts with label ಪ್ರೇಮ ಪತ್ರಗಳು. Show all posts

Monday, 13 February 2017

ಲೇಖನಿಗೆ ಶಾಹಿಯಾದನು ..

      ಪ್ರೇಮಿ ಕಡಲ ತಡಿಯಲ್ಲಿ ಕೂತಿದ್ದಾನೆ, ತನ್ನ ಗೆಳತಿಗಾಗಿ ಹಂಬಲಿಸುತ್ತಿದ್ದಾನೆ, ಅವಳಿನ್ನೂ ಬಂದಿಲ್ಲ, ರವಿ ನಿಧಾನವಾಗ ಮುಳುಗುತ್ತಿದ್ದಾನೆ, ಬೆಳಕು ಕಡಿಮೆಯಾಗಿ ಕತ್ತಲೆಯ ಛಾಯೆ ಆವರಿಸುತ್ತಿದೆ, ಜೊತೆಗೆ ಅವನ ಮೊಗದಲ್ಲೂ ಆತಂಕದ ಛಾಯೇ, ಗೆಳತಿ ಬೇಗನೇ ಆಗಮಿಸು, ಮನದ ರೋಧನೆ ದೂರಾಗಿಸೆಂದು ಆತನ ಹೃದಯ ನಿವೇದಿಸುತ್ತಿದೆ, ಮೆತ್ತನೇ ಯಾವುದೋ ಧ್ಯಾನದಲ್ಲಿ ಕೈಬೆರಳುಗಳನ್ನು ಮರಳು ರಾಶಿಯಲ್ಲಿ ಆಡಿಸುತ್ತಾ ಏನೋ ಬರೆಯುತ್ತಾನೆ, ಬರೆಯಲು ಹಾತೊರೆಯುತ್ತಾನೆ, ನಿಧಾನವಾಗಿ ಏನು ಬರೆದೆ ಎಂದು ನೋಡುತ್ತಾನೆ, ಅದು ಅವಳದೇ ಹೆಸರು, ಅವನಿಗೆ ಅರಿವಿಲ್ಲದೆಯೂ ಬರೆವ ಪದವು ಅವಳದೇ ಹೆಸರಾಗಿದೆ, ಕಾರಣ ಮನದ ಮನೆಯಲ್ಲಿ ಅಚ್ಚಾದವಳ ಹೆಸರೇ ಅವನು ಕನಸಲ್ಲೂ ಬರೆವ ಪದವಾಗಿರುತ್ತದೆ, ಮತ್ತೆ ಮತ್ತೆ ಅವಳಾಗಮಿಸುವ ದಿಕ್ಕನ್ನು ನೋಡುತ್ತಾನೆ, ಕದಲೇ ಕತ್ತು ಆ ದಿಕ್ಕಿನ್ನೇ ವೀಕ್ಷಿಸುತಿದೆ, ಇದೆಲ್ಲಾ ಅವಳ ಪ್ರೀತಿಯ ಮಾಯೆಯಲ್ಲಿ ಬಂಧಿಯಾದವನ ಕಾತರ. ಕಾತರಿಸುವ ಮನದ ತಳಮಳ. ಈ ಸಮಯದಲ್ಲಿ ಮೆತ್ತನೆ ಸಾಗರದಲ್ಲಿ ಮುಳುಗುತ್ತಿರುವ ರವಿಗೂ ಕೊಂಚ ಮುಜುಗರ, ಕಡಲತಡಿಯಲ್ಲಿ ಮುಳುಗುವ ರವಿಯ ಮೊಗದಲ್ಲೂ ದುಗುಡ, ಅದಕೇ ಆತ ಕೆಂಪಾಗಿ ಕೋಪದಲ್ಲಿ ಮುಳುಗುತ್ತಿದ್ದಾನೆ, ಈ ಒಂಟಿತನ ಸಾದುವೇ, ಈ ಒಳ್ಳೆಯ ಹುಡುಗನಿಗೇಗೆ ಈ ಶಿಕ್ಷೆ..? ಪಾಪ ಆತನ ಪ್ರೇಯಸಿಗೇನು ತೊಂದರೆಯಾಯಿತೋ..? ಎಂದು ವಿಧಿಯನ್ನು ರವಿ ಶಪಿಸುತ್ತಿದ್ದಾನೆ, ನಂತರ ರವಿ ಮರೆಯಾಗಿ ನಿದಾನವಾಗಿ ನೀಲಿ ಬಾನಲ್ಲಿ ಶಶಿಯಾಗನವಾಗುತ್ತದೆ. ಚಂದಿರ ನೋಡುತ್ತಾನೆ, ಹುಡುಗ ತನ್ನ ಪ್ರೇಯಸಿಯನ್ನು ಬೇಡುತ್ತಾ ಹಪಿಹಪಿಸುವ ಅವನ ನೋವನ್ನು ಕಂಡು ಆತನಿಗೂ ಮುಜುಗರ. ತಂಗಾಳಿ ಬೀಸುತ್ತಿದೆ, ಆದರೂ ಹುಡುಗನ ಮನಕೆ ಹಿತವಿಲ್ಲ, ಬಿಸಿಗಾಳಿ ಬಂದು ಕೊರೆದಂತೆ ಒದ್ದಾಡುತ್ತಾನೆ, ದೇವರಲ್ಲಿ ಕೇಳುತ್ತಾನೆ, ಈ ನೋವು ಸಾದುವೇ..? ಅವಳೇಕೆ ಇನ್ನೂ ಆಗಮಿಸಿಲ್ಲ, ಅವಳಿಗೇನಾಯಿತೋ, ಏನೋ, ಏನೇ ಆಗಲಿ ಅವಳು ಚೆನ್ನಾಗಿರಲಿ ಎಂದು ಒದ್ದಾಡುತ್ತಾನೆ. ಕಡಲಲೆಯ ಸಾವರಿಸಿ ಬರುವ ತಂಗಾಳಿಯಲ್ಲೂ ಆತನಿಗೆ ಹಿತವೆನಿಸುವುದಿಲ್ಲ, ಕಡಲಲೆಗಳ ಸದ್ದು ಆತನಿಗೆ ಕೊರೆತವೆನ್ನಿಸುತ್ತದೆ, ಮೋಡಗಳ ನಡುವೆ ಓಡೋಡಿ ಬರುವ ಚಂದಿರನನ್ನು ನೋಡುತ್ತಾ ಹಾಗೇ ಕಡಲ ತೀರಲದಲಿ ಮಲಗಿದ್ದಾನೆ. ಮತ್ತೆ ಮರಳು ರಾಶಿಯಲ್ಲಿ ಏನೋ ಗೀಚುತ್ತಾನೆ, ಅವಳನ್ನೇ ನೆನೆಯುತ್ತಾ ಬರೆಯುತ್ತಾನೆ, ಅವಳ ಪ್ರೀತಿಯ ಅಯಸ್ಕಾಂತತ ಗುಣದಲ್ಲಿ ಈತ ಲೀನವಾಗಿದ್ದಾನೆ, ಅವಳ ಪ್ರೀತಿಯ ಹೊನಲಿನಲ್ಲಿ ಹುಡುಗ ಒದ್ದೆಯಾಗಿದ್ದಾನೆ. ಒಲವ ಜಲಧಿಯು ಆತನೆದೆಯಲ್ಲಿ ಎದ್ದೆದ್ದು ಕುಣಿದಂತೆ ಅನುಭೂತಿ.
ಅಷ್ಟರಲ್ಲಿ ಆತ ಅಲ್ಲಲ್ಲಿ ಮೂಡುತ್ತಿರುವ ಚುಕ್ಕಿಗಳನ್ನು ಎಣಿಸುತ್ತಾ ಹಾಗೆಯೇ ಕಡಲತಡಿಯಲ್ಲಿ ವಿರಮಿಸುತ್ತಿದ್ದಾನೆ. ತಾರೆಗಳ ನಡುವಲ್ಲಿ ಚಂದಿರ ಮೊಗದಲ್ಲಿ ತನ್ನ ಗೆಳತಿ ಕಂಡಂತೆ ಆತನಿಗೆ ಭಾಸವಾಗುತ್ತದೆ, ಚಂದಿರನ ಮೊಗದಲ್ಲೂ ತನ್ನ ಗೆಳತಿ ಮೂಡಿದಂತೆ, ಆಕೆ ನಗುತಾ ನಾಚಿದಂತೆ, ಈತ ಕೈಯನ್ನು ಮುಗಿಲೆಡೆ ತನ್ನ ಅರಿವಿಲ್ಲದೇ ಚಾಚುತ್ತಾನೆ, ನೋಡುತ್ತಾನೆ, ತನ್ನ ಕೈ ಎಟುಕದು, ಚಂದಿರ ಓಡುತ್ತಿದ್ದಾನೆ ಹಾಗೆಯೇ..ಮತ್ತೆ ಹುಡುಗ ಕಾತರಿಸುತ ಅವಳಾಗನದ ಜಾಡು ಹಿಡಿದು ಕೂರುತ್ತಾನೆ, ಬೀಸುವ ತಂಗಾಳಿ ಬೇಡುತ್ತಾ ಕೇಳುತ್ತಾನೆ ನೀ ಬರುವಾಗ ಕಂಡಿರಾ ಅವಳನು ಎಂದೂ..? ಬಾನಲ್ಲಿ ಚಂದಿರ ನಗುತ್ತಾನೆ, ಹುಡುಗ ಹಾಗೆಯೇ ಸಮಯ ದೂಡಲಾಗದೇ ತಾರೆಗಳ ಎಣಿಕೆಗೆ ಹಠವಿಡಿದು ಎಣಿಸುತ್ತಿದ್ದಾನೆ..ಅಷ್ಟರಲ್ಲಿ ಭಜದ ಮೇಲೆ ಏನೋ ನವಿರು ಸ್ಪರ್ಷ...ನೋಡುತ್ತಾನೆ ಗೆಳತಿ ಬಂದಿದ್ದಾಳೆ, ಆತನ ಚಡಪಡಿಕೆಗೆ ಅವಳು ಬಂದಿದ್ದು ಗೊತ್ತಾಗಲಿಲ್ಲ, ಅಷ್ಟೊತ್ತು ಅವಳಾಗಮನದ ದಿಕ್ಕನ್ನು ಗುರಿಯಿಟ್ಟು ಕಾದರೂ ಕಾಣದವಳು ಈಗ ಇವನಿಗೆ ಒಲವ ದೇವತೆಯಾಗಿ ಕಾಣುತ್ತಿದ್ದಾಳೆ. ತಾರೆಗಳ ಎಣಿಕೆಯಲ್ಲಿ ನಿರತನಿಗೆ ನೈಜತಾರೆ ಧರೆಗಿಳಿದು ನಗುತ್ತಿದ್ದಾಳೆ, ಒಲವ ದೇವತೆಯು ಹಾರೈಸಿದ್ದಾಳೆ, ಒಲವ ದೊರೆ ಚಂದಿರ ನಗುತಾ ಬೆಳುದಿಂಗಳು ಚೆಲ್ಲುತ್ತಿದ್ದಾನೆ, ಈ ನೈಜ ಪ್ರೇಮಿಗಳು ನೂರು ವರುಷ ಸಂತಸದಿಂದಿರಲಿ, ನೂರು ವರುಷಕೂ ಸವೆಯದ ಪ್ರೀತಿ ಇವರದಾಗಲಿ ಎಂದು ಬಯಸುತ್ತಾನೆ. ಬೀಸುವ ತಂಗಾಳಿಯಲ್ಲಿ ಒಲವಾರಾಧನೆ ಘಮಲು ಈಗ ಗಟ್ಟಿಯಾಗುತ್ತಿದೆ, ಕಡಲಲೆಗಳ ಗಾನದಲ್ಲಿ ಒಲವಗಾಥೆಯು ಗುನುಗುತಿದೆ, ಸಾಗರದ ತೀರದಲ್ಲಿ ಒಲವ ಜಲಧಿ ಉಕ್ಕಿದ ಸಂಭ್ರಮ, ಪ್ರೇಮಿಯ ಮನದಲ್ಲಿ ಪ್ರೀತಿಯ ಮೇನೆಯಲ್ಲಿ ನಲಿದ ಸಡಗರ, ಎಲ್ಲವೂ ಅವಳಾಗನದ ನಲಿವು, ಅವಳಾಗನದ ಬಲವು. ಈಗ ಆತ ಮರಳರಾಶಿಯಲ್ಲಿ ಬರೆದ ಪದಗಳನ್ನು ನೋಡುತ್ತಾನೆ ಅದೆಲ್ಲ ಅವಳದೇ ಹೆಸರು, ಅವಳದೇ ನೆನಪು.. ಪ್ರತಿಸಾಲುಗಳು ಅವಳಿಗಾಗಿ ಬರೆದ ಪ್ರಾರ್ಥನೆ. ಈಗ ಹುಡುಗಿ ನೋಡುತ್ತಾಳೆ, ಅವನ ಕಣ್ಣಲ್ಲಿ ಕಣ್ಣಿಟ್ಟು.. ಮೆತ್ತನೇ ಅವನ ಕಿವಿಯಲ್ಲಿ ಪಿಸುಗುಡುತ್ತಾಳೆ..ನಿನ್ನನ್ನು ಕಾಯಿಸಿದ್ದಕ್ಕೆ ಕ್ಷಮಿಸು ಎಂದು ಕೆಂಗುಲಾಬಿಯನ್ನು ನೀಡುತ್ತಾಳೆ. ಹುಡುಗಾ ಕಾತರದಲ್ಲಿ ಅಷ್ಟೊತ್ತು ನೊಂದರೂ ಯಾವುದನ್ನೂ ಲೆಕ್ಕಿಸದೇ ಅವಳ ಒಲವಸೆರೆಯಲ್ಲಿ ಆತನ ಮನ ರಮಿಸುತ್ತದೆ, ಪ್ರೇಮಿ ಮನದಲ್ಲಿ ಒಲವಕಾವ್ಯ ಪಳಿಸುತ್ತದೆ. ಅಷ್ಟರಲ್ಲಿ ಆಕೆ ಕಡಲತೀರ ತುಂಬಾ ಬರೆದ ತನ್ನ ಹೆಸರಿನ ಜೊತೆ ಇವನ ಹೆಸರನ್ನು ಬರೆಯುತ್ತಾಳೆ, ಮೇಲೆ ಬಾನಲ್ಲಿ ಚಂದಿರ ನಗುತ್ತಾ, ಬೆಳುದಿಂಗಳು ಚೆಲ್ಲುತ್ತಾ ಹಾರೈಸುತ್ತಾನೆ, ಅವಳು ಈ ತನ್ನ ಹುಡುಗ ಬರೆದ ತನ್ನ ಪ್ರತಿ ಹೆಸರಿನ ಜೊತೆಯಲ್ಲಿ ಇವಳ ಹೆಸರನ್ನು ಜೋಡಿಸಿದ ಸಂಭ್ರಮದಲ್ಲಿ ನಲಿಯುತ್ತಾಳೆ, ಇತ್ತ ಹುಡುಗ ಇವಳ ಒಲವಸೆಲೆಯಲ್ಲಿ ಮರಳುರಾಶಿಯಲ್ಲಿ ಬರೆಯುತ್ತಾನೆ.. 
“ನಗುತ ಚಂದಿರ 
ಬೆಳದಿಂಗಳು ಚೆಲ್ಲಿದ 
ಕವಿತೆ ಬರೆಯಲು 
ಲೇಖನಿಗೆ ಶಾಹಿಯಾದನು 
ಒಲವ ಕವಿತೆ ಬರೆಯಲು.”

          ರಾಮಚಂದ್ರ ಸಾಗರ್

Saturday, 14 January 2017

ನೀ ತರುವ ನಗುವಿಗಾಗಿ..

     ತಂಪಲೆಯ ತಂಪು ಇಂದೇಕೊ ನನ್ನ ತನುವಿಗೆ ತಣಿಸುತಿಲ್ಲ ಹುಡುಗಾ ನೀ ಬಾರದ ಈ ಘಳಿಗೆ, ನೀ ಜೊತೆಯಿದ್ದು ಹೆಜ್ಜೆ ಹಾಕಿದ ಘಳಿಗೆ ಬಿಸಿಗಾಳಿಯಲ್ಲೂ ತನು ಮನಕೆ ತಂಪೆನಿಸುತ್ತಿತ್ತು ಜೊತೆಗೆ ನನ್ನೇ ನಾ ಮರೆಯುತ್ತಿದ್ದೆ, ನಿನ್ನ ಸಾನಿಧ್ಯದ ಒಲುಮೆಯಲ್ಲಿ ಮನಕೆ ಸಂತಸದ ಹೊನಲೇ ಆಸರೆಯಾಗಿತ್ತು ಆ ಪ್ರೀತಿಯ ನದಿಯಲ್ಲಿ ನೀನು ಮತ್ತು ನಾನು ದೋಣಿಯಲ್ಲಿ ಸಾಗುವ ರಸಘಳಿಗೆ ಮತ್ತು ಒಂದೇ ಸಮನೆ ನಿನ್ನ ಕಣ್ಣೋಟದಲ್ಲಿ ಮುಳುಗೆದ್ದು ಒದ್ದೆಯಾದ ನನ್ನ ಮನ ನಿನ್ನಲ್ಲಿ ಲೀನವಾದ ಈ ಮುಗ್ದೆಯ ಮನದಲ್ಲಿ ನೀ ವಿರಾಜಿಸಿದ್ದೆ. ಆ ಕ್ಷಣವೇ ಮನದರಸನಾದ ನೀನು ಎಂದಿಗೂ ನನ್ನಿಂದ ಮರೆಯಲಾಗದ ಜೀವವಾದೆ ನೀನು. ನಿನ್ನ ಕಣ್ಣೋಟದಲ್ಲೇ ನನ್ನ ಕಣ್ಣೋಟ ಸದಾ ಬೆಸುಗೆಯಾಗಲೆಂಬ ಹಂಬಲದ ಹಠ ತಂದವನು ನೀನಾದೆ. ಎಂದಿಗೂ ಸಹಿಸಿಕೊಳ್ಳುವ ನವಿರು ನೋವು ನೀಡುವ ಅದರಲ್ಲೇ ಸುಖವೆಂಬ ಅನುಭೂತಿ ಕಲ್ಪಿಸಿದವನು ಮನಕೆ ಅಮಲು ಹಿಡಿಸಿದ ಹುಡುಗನೂ ನೀನಾದೆ.. 

       ತಂಗಾಳಿಯ ತಂಪಲ್ಲಿ ಒಲವ ಸೌಗಂಧ ತಂದು ನಿನ್ನ ಪ್ರೀತಿಯ ಕೈಗಳಿಂದ ನನ್ನ ಮೊಗವ ನೇವರಿಸಿ ಕೆಂಗುಲಾಬಿ ಕೊಟ್ಟವನು ಪ್ರೀತಿಯ ನಾವೆಯಲ್ಲಿ ಬಿಗಿದಪ್ಪಿ ಸಾವಿರ ವರುಷಕೂ ಅಳಿಯದ ಪ್ರೀತಿ, ಮಮತೆಗಳನು ನೀಡುವೆನೆಂದು ವಚನಕೊಟ್ಟವನು ನೀನು. ಬೆಳದಿಂಗಳ ಇರುಳಲ್ಲಿ ಸರೋವರದ ನೀರಿನಲ್ಲಿ ಇಣುಕಿ ನೋಡುವ ಚಂದಿರನಂತೆ ನನ್ನ ಮನದ ಮನೆಯ ಕಿಟಕಿಯಲ್ಲಿ ನೀ ಇಣುಕಿದೆ ಆ ಕ್ಷಣವೇ ಶರಣಾದ ನಾನು ಎಂದಿಂದಿಗೂ ನಿನ್ನನೂ ಮರೆಯಲಾಗದ ನಿನ್ನವಲಂಬಿಯಾದೆ ಗೆಳೆಯಾ. ನಿನ್ನ ಮನದಲ್ಲೂ ಹೀಗೇನೆ ಎಂಬುದು ನಿನ್ನೆದೆಯ ನೇವರಿಸಿ ತಂಪಿರುಳ ನದಿ ತಟದಲ್ಲಿ ನಿನ್ನೆದೆಯ ಸದ್ದನ್ನು ಆಲಿಸಿ ಅರಿತವಳು ನಾನು. ನಿನ್ನೆದೆಯ ಕೂಗು ಬಿಡುವು ನೀಡದೇ ಗುನುಗುತಿರುವುದು ನನ್ಹೆಸರು ಎಂಬುದನ್ನು ಅರಿತೊಡನೆ ಗೆಳೆಯ ಅದುವೇ ನಾ ಜೀವನದಲ್ಲಿ ಗಳಿಸಿದ ಅತೀ ಅಮೂಲ್ಯ ಘಳಿಗೆ.. ಅತೀ ಪ್ರೀತಿಯ ಕ್ಷಣ. ಅಂದು ನಿನ್ನೆದೆಯೂ ಅದೆಷ್ಟು ಹಿತವಾಗಿ ನನ್ನನ್ನೇ ಕೂಗುತ್ತಿತ್ತು. ಆಗಲೇ ನಾನು ವಿಸ್ಮಿತಳಾಗಿ ನಿನ್ನಲ್ಲಿ ಲೀನವಾಗಿದ್ದೆ. ನನ್ನ ಮೊಗವನ್ನು ನೀನು ಗುಲಾಬಿ ಎಸಳಿಂದ ನೇವರಿಸಿ ದುಂಡುಮಲ್ಲಿಗೆಯ ಮೊಗದವಳೆಂದು ನೀನು ಮುದ್ದಾಗಿ ಕಿವಿಯಲ್ಲಿ ಪಿಸುಗುಟ್ಟಿದ್ದು ನನಗೆ ಅತೀ ಇಷ್ಟವೆನಿಸುವ ಪದವಾಗಿದೆ. ಅರಳಿದ ನೈದಿಲೆ ಪ್ರೀತಿಸಿ ನಗುವ ಚಂದಿರನಂತೆ ನೀನು ನನಗೆಂದೇ ನಗುಮೊಗದಿಂದ ನಲಿಯುತಿರುವುದನ್ನು ಕಂಡು ನನ್ನ ಮನ ನವಿಲಂತೆ ಕುಣಿಯುತ್ತಿತ್ತು. ಸರೋವರದ ಹಂಸದಂತೆ ನೀ ನಡೆದರೆ ನನ್ನೊಂದಿಗೆ ಬೆಳದಿಂಗಳ ಪಥವೂ ಸಾರ್ಥಕ. ಒಲವದೊರೆ ಶಶಿಗೂ ಮನತೃಪ್ತಿಯೆಂದು ನೀನು ಹೇಳುತ್ತಾ ದಾರಿಯುದ್ದಕ್ಕೂ ನನ್ನೊಂದಿಗೆ ಕೈಹಿಡಿದು ಹರಟುತ್ತಾ ಗಂಟೆಗಟ್ಟಲೆ ಮೈಲುಗಟ್ಟಲೇ ಸವೆಸಿದ ಘಳಿಗೆ ನಿಮಿಷದಂತೆ ಕೆಲವೇ ಹೆಜ್ಜೆಗಳಂತೆ ಕರಗಿಹೋಯಿತು. ಆದರೆ ಅದು ಮುಧುರ ಪಯಣವಾಗಿ ನಿತ್ಯ ಕಾಡತೊಡಗಿದೆ. ಪ್ರೀತಿಯಿಂದ ನೀನು ಕೈಹಿಡಿದು ಕುಸುಮಗಳ ವನದಲ್ಲಿ ನನ್ನ ಜೊತೆಯಾಗಿ ನಡೆವಾಗ ಮೆಲುಗಾಳಿಗೆ ನಲಿವ ಹೂಗಳು ನನ್ನ ನೋಡಿ ನಾಚುತ್ತಿವೆ ಎಂದು ನೀನು ನನ್ನನು ಹೇಳಿದ್ದು ಜೊತೆಗೆ ನನ್ನ ಮೊಗದಲ್ಲಿ ತುಸು ನಗುವು ಹೆಚ್ಚಿಸಿ ನನ್ನ ವಿಸ್ಮಿತಗೊಳಿಸಿ ನಲಿವ ಕುಸುಮಗಳ ಜೊಂಪಲಿ ನಗುವ ಚೆಲುವೆ ನೀನೆಂದು ನನ್ನನ್ನು ಪದೇ ಪದೇ ಹೊಗಳಿದವನು ನೀನು. ಮನಕೆ ಸಿಹಿ ನೆನಪುಗಳನ್ನು ಹೊರೆಯಾಗಿ ನೀಡಿದವನು ನೀನು. 

      ಆದರೆ ಇಂದು ನೀ ಕಾಣದೇ ಮನ ಸೊರಗುತಾ ಉಳಿದೆ..ಮನ  ಎಡೆಬಿಡದೇ ನಿನ್ನ ಸೆರೆಯಲ್ಲಿ ನಿತ್ಯ  ಜಪಿಸುತ್ತಿದ್ದೆ. ಮನದ ದಿಟ ಹಠವೊಂದೇ ಆಗಿದೆ. ಅದೂ ನೀ ಬಂದು ನನ್ನ ಕಾಣುವ ಘಳಿಗೆ. ಮನವು ಹೇಳುತಿದೆ.. 

‘ನೀ ಒಪ್ಪುವುದಾದರೆ ನನ್ನ ಒಪ್ಪಿಬಿಡು
ನಾ ವಿಧಿಯ ಅಪ್ಪುವ ಮುನ್ನಾ…
ಕಾಯಲಾರೆನು ಇನ್ನೂ ಕಡಲತಡಿಯಲಿಂದು’ 

     ಎಂದು ಮನ ಜಪಿಸುತಿದೆ ನಿನ್ನನೂ. ಸಾವಿರ ನೆನಪುಗಳ ಭಾರವನು ನನ್ನ ಹೆಗಲೇರಿಸಿ  ಏಕೆ ಮರೆಯಾದೆ ಇಂದು. ಸಾಗರ ನೇವರಿಸಿ ಬೀಸುವ ತಂಗಾಳಿಯು ನನ್ನ ಅಪ್ಪಿದರೂ ಮನ ತಣಿಯುತ್ತಿಲ್ಲ. ತನುವಿಗೆ ದಣಿವು ಕರಗುತ್ತಿಲ್ಲ. ತಂಗಾಳಿಗೂ ನನ್ನ ರೋಧನ ಕಂಡು ವ್ಯಸನವಾಗಿದೆ ಗೆಳಯಾ..ನನಗೇಕೆ ಹೀಗೆ..? ಎಲ್ಲಾ ನಿನ್ನಿಂದಲೇ ನೀ ಇರದ ನೋವಿಂದಲೇ.. ಮುಸ್ಸಂಜೆ ರಂಗಲ್ಲಿ ಇನನು ಮುಳುಗುವಾಗ ಅವನು ನನ್ನ ದುಗುಡವನ್ನು ಕಂಡು ದುಂಖಿಸಿದಂತೆ ಭಾವ ಅವನಲ್ಲಿ..ಆದರೆ ನಿನಗೇಕೆ ಅಂಜಿಕೆ ಪ್ರೀತಿಯ ಹುಡುಗಾ.. ನಾ ಕಾದಿದ್ದೇನೆ ನೀ ಬರುವ ಸವಿಘಳಿಗೆ ಕಾದು..ಕಾದು..ನೊಂದಿದ್ದೇನೆ. ಬೇಗನೇ ಅಂಜಿಕೆ ಮರೆತು ಆಗಮಿಸಿ ಕಡಲ ತಡಿಯಲ್ಲಿ ಸಿಹಿ ಮಾತುಗಳಿಂದ ನನ್ನ ಮನ ರಂಜಿಸು. ಮುದುಡಿದ ಕುಸುಮವಾಗಿದ ನನ್ನ ಮನವನ್ನು ನೀನು ನಗುವ ಗುಲಾಬಿಯನ್ನಾಗಿಸು.. ಸದಾ ಜೊತೆಯಾಗಿ ನೀ ನಗು ಗೆಳೆಯಾ.. ಬೀಸುವ ಕಡಲಲೆಗಳ ಎಣಿಸೀ.. ಎಣಿಸೀ..ನನ್ನ ನಯನವು ಮಬ್ಬು ಕವಿದಿದೆ, ನಿನ್ನಾಗಮನವನು ಬಯಸುತಾ. ನೀ ಬಂದು ನನ್ನ ನಯನಗಳ ಸಂತೈಸು ಗೆಳೆಯಾ. ಮುಸ್ಸಂಜೆಯ ರಂಗಲ್ಲಿ ಒವಲ ರಂಗೋಲಿ ಹಾಕೋಣ ಬಾ ಗೆಳೆಯಾ..

ನಾ ಕಾದಿರುವೆ ನಿನಗಾಗಿ..ನೀ ತರುವ ನಗುವಿಗಾಗಿ..

      ರಾಮಚಂದ್ರ ಸಾಗರ್


ನೋವಿನ ಶರಧಿ ಕರಗುವುದೇ..

      ಚೂರಾದ ಕನಸು ನನಸಾಗಬೇಕಿದೆ, ಮಾಯವಾದ ಸ್ವರ್ಗವು ಕೈಸೆರೆಯಾಗಬೇಕು, ನಗುವು ಮರೆತ ಮೊಗವು ನಗಬೇಕು, ತಿಳಿ ಸರೋವರದಲ್ಲಿ ಎದ್ದ ಅಲೆಗಳು ನಿಲ್ಲಬೇಕು, ಅದರಲ್ಲಿ ಪ್ರಶಾಂತ ತಂಪಿರುಳಲ್ಲಿ ನಿನ್ನ ಮೊಗವನ್ನು ನೋಡಬೇಕು. ಸಾಲು ಸಾಲು ನಿತ್ತು ಗಹಗಹಿಸುವ ಕಹಿ ನೆನಪುಗಳನ್ನು ನಿನ್ನಾಸರೆಯಲ್ಲಿ ಕರಗಿಸಿ ದೂರಕ್ಕೆಸೆಯಬೇಕು. ಮತ್ತೆ ಅವು ನನ್ನ ತಿರುಗಿ ನೋಡದಷ್ಟು ದೂರ ಎಸೆಯಬೇಕು, ಎಲ್ಲಕ್ಕೂ ನಿನ್ನಾಗಮನವಾಗಬೇಕು, ಮುನಿಸು ಕರಗಬೇಕು, ನೋವಿನ ಶರಧಿಯು ದೂರಾಗಬೇಕು, ಒಲವ ಅಲೆಯ ಬೀಸಬೇಕು. ಎದೆಯಾಳದಿಂದ ಅರಳಿದ ಪದ ನಿನಗೆ ಮೀಸಲಾಗಿ ಅವಿತಿರುವುದು ನನ್ನ ಅಧರದಿಂದ ಗುನುಗಬೇಕು, ನೀ ಬರಬೇಕು, ಮಧುರ ಪದಗಳೆಂದು ನುಡಿಯಬೇಕು. ಮಧುರವಲ್ಲದಿದ್ದರೂ ನಿನಗೆ ಬೇಸರವಾಗದಿದ್ದರೆ ಸಾಕು. ಬೆಳುದಿಂಗಳ ರಾತ್ರಿಯ ತಣ್ಣನೆಯ ಹವೆಯೂ ಬಿಸಿ ಬೇಸಿಗೆಯಂತೆ ಸುಟ್ಟರೆ ನಿನಗದುವು ಸಾಧುವೇ ಗೆಳೆಯಾ.? ಇದೇ ಕಂಪನ, ತಲ್ಲಣದಲ್ಲಿ ದಿನ ಕಳೆಯುವುದು ಹೇಗೆ ಗೆಳೆಯಾ.? ಮನದಲ್ಲಿ ನೀ ಬರುವ ಸೂಚನೆ ಸುಳಿವು ಸಿಗದಾಗಿದೆ, ಆದರೂ ವಿಧಿಯಿಲ್ಲ ನೀ ಬರುವ ಘಳಿಗೆಗಾಗಿ ತಂಪಿರುಳಲ್ಲಿ ಬೆಳುದಿಂಗಳ ಧಾರೆಯಲ್ಲೂ ನೋವಲ್ಲಿ ನಡುಗುವ ತನುವು ನನ್ನದಾಗಿದೆ, ಯಾವೂರು ನೀ ತಲುಪಿದರೂ ಯಾವ ಅಂತರ ನೀ ಮುಟ್ಟಿದರೂ ನೀ ನನ್ನ ಮರೆಯಲಾನೆಂಬ ಜಂಬದಲ್ಲಿ ನನ್ನ ಮನ ತುಂಬಿದೆ. ಏನೆಂದು ಹೆಸರಿಡಬೇಕು ಈ ನನ್ನ ಹುಚ್ಚು ಮನಕ್ಕೆ ..? ಇಲ್ಲೆಲ್ಲಾ ನಿನ್ನ ನೆನಪುಗಳ ಚಟುವಟಿಕೆಯ ಹಾವಳಿ. ನಿತ್ಯ ಕಾಡುವ ಸಲ್ಲಾಫದ ಜಾತ್ರೆಯಲ್ಲಿ ನೀ ಕೊಟ್ಟ ಒಲವ ಒಸಗೆಯ ಗುನುಗು ಇಡೀ ರಾತ್ರಿ ಕಳೆದರೇ ನಾ ಹಗಲು ಅದರಲ್ಲಿ ವ್ಯಯಿಸಿದರೆ ಏನೆಂದು ಕರೆಯಬೇಕು ನನ್ನಾವ್ಯಸಕೆ ಗೆಳೆಯಾ. ಹೊತ್ತಿಲ್ಲ ಗೊತ್ತಿಲ್ಲದೆ ನಿನ್ನ ವಶವಾದ ಮನದ ತಳಮಳಕ್ಕೆ ವಿರಹದ ನೋವೇ ವಾದ್ಯವಾಗಿದೆ, ವಿರಹದ ಗೀತೆಯೇ ಹಾಡಾಗಿದೆ. ಒಲವ ಗೀತೆ ಹೆದರಿ ದೂರಾಗಿದೆ. ಸುರಿವ ಬೆಳುದಿಂಗಳಲ್ಲಿ ನಲಿವ ನೈದಿಲೆಯಲ್ಲಿ ನಾ ದಿಟ್ಟಿಸಿದಾಗ ಮನದಲ್ಲಿ ಉಲ್ಲಾಸವಿಲ್ಲ, ನಿನ್ನ ಕಣ್ಣ ಸಂಭಾಷಣೆಯ ನೈವೇದ್ಯ ಬೇಕಿರಲು ಜಗದೆಲ್ಲ ಸೊಬಗು ಗೌಣ, ಬರೀ ಮೌನ, ರಂಗು ತುಂಬಿದ ಜಗವು ಬೆಳ್ಳಿ ಸೊಬಗು ನೀನಿಲ್ಲದೇ ಕಪ್ಪು ಗೆಳೆಯಾ. ನಮ್ಮಿಬ್ಬರ ಖಾಸಗೀ ಸಂಭ್ರಮಕೆ ಬೇಕಿರುವುದು ನಮ್ಮಿಬ್ಬರ ಮನಗಳ ಮಿಲನವೇ ಹೊರತು ಉಳಿದೆಲ್ಲ ಸೊಬಗು ಗೌಣ ಗೆಳೆಯಾ. ನೆನಪಿನ ಕಿಟಕಿಯ ತೆರೆದು ನೀನೊಮ್ಮೆ ನೋಡು ಗೆಳೆಯಾ. ನಮ್ಮ ಪ್ರೀತಿಯ ಹೊನಲಿನಲ್ಲಿ ಅರಳಿದ ಕುಸುಮವನ್ನಾದರೂ ಕೇಳಿ ನೋಡು, ಒಲವು ಜೀವಂತವಿದೆಯೆಂದು ನೀ ಅರಿತು ನೋಡು, ನೆನೆದು ನೊಂದು ನಿನಗೆಂದು ಮೀಸಲಾದ ಹೃದಯ ರೋಧನ ದೂರದಿಂದಲಾದರು ಒಮ್ಮೆ ದಿಟ್ಟಿಸಿ ನೋಡು. ಒಲವ ನಾವೆ ಮುಳುಗದೇ ಸಾಗಬೇಕು, ಒಲವತೀರ ತಲುಪಬೇಕು, ಅದರಲ್ಲಿ ನಾನು ನೀನು ನಗುತಾ ಸಾಗಬೇಕು. ವಿಧಿಯ ಹಗೆತನವೆಷ್ಟೇ ಕ್ರೂರಿ ಎಂದು ಹಠ ಹಿಡಿದರೂ ಹುಡುಗ ನಾನಿನ್ನ ಕಣ್ಣಲ್ಲಿ ಕದಲದೇ ಕಾಪಿಡುವೆ. ಕಣ್ಣೀರಿಗೂ ಜಾಗವಿರದಂತೆ ಕಾಪಿಡುವೆ ಇದು ದಿಟ. ಚಿನ್ನದಂತ ಕನಸುಗಳು ತುಕ್ಕು ಹಿಡಿದ ಹಳೆಯ ದಾತುವಿನಂತೆ ಕಳೆಗುಂದಿವೆ. ನನ್ನ ಮನದೆಲ್ಲಾ ಆಸೆಯು ಮುದುಡಿವೆ ನಿನ್ನಾಗಮನದ ಜಾಡು ಬಯಸುತಾ ಅರಸುತಾ ನಿನ್ನ ಸ್ಥುತಿಸುವ ಕಾಯಕದಲ್ಲಿ ನೊಂದು ಬೆಂದ ಮನದಲ್ಲಿ ಸಾವರಿಸದ ಮನದಲ್ಲಿ ವಿರಹದ ಬಿರುಗಾಳಿ ಎದ್ದಿದೆ. ಎಷ್ಟೇ ನಾ ಸಂತೈಸಿದರೂ ಅದು ನಿಲ್ಲುತ್ತಿಲ್ಲ, ಕದಲದೇ ಕಾಡುವ ನಿನ್ನ ನೆನಪುಗಳು ನನ್ನ ಪದೇ ಪದೇ ಬೆದರಿಸುತ್ತಿವೆ. ನನ್ನ ಕಡುಕೆಂಪು ಕೆನ್ನೆ ಕಪ್ಪಿಟ್ಟಿದೆ, ನಯನಗಳು ಮಂಜು ಕವಿದಿವೆ, ಮಾತು ಮರೆತು ಮೌನ ತಾಳಿದೆ. ಜೀವದ ಉಸಿರಲ್ಲೂ ಏರು ಪೇರು, ಎಲ್ಲಾ ನಿನ್ನಮಲಿನಲ್ಲಿ ಲೀನವಾದ ವ್ಯಸನ. ಹುಚ್ಚು ಮನದ ಸ್ಥಿರತೆಗೆ ಬೇಕಿದೆ ಗೆಳೆಯ ನಿನ್ನೊಲವ ಸಾನಿಧ್ಯ. ನಿನ್ನ ನಗುವ ಮೊಗದ ದರ್ಶನ. ಜಾತಿ ಮತದ ಗೌಜಿಗೆ , ಸಂಪತ್ತು ಸಿರಿಯ ಅಂತರವ ಎಣಿಸದೆ, ಸಾಧುವಲ್ಲದ ಮಾತುಗಳಿಗೆ ಸಿಲುಕಿ ನಲುಗದೆ, ಅನ್ಯರಿಗೆ ಅಂಜದೇ ನೀ ನನ್ನೆಡೆ ಬಾ ಹುಡುಗಾ. ಉಪವಾಸದ ಮನಸು ನಿನ್ನೊಲವ ಸಾಂಗತ್ಯದಲ್ಲಿ ನಗುತ ಹಸಿವು ದೂರಾಗಿಸಿಕೊಳ್ಳಬೇಕು. ನಿನ್ನ ಮನವನ್ನು ಗೆದ್ದು ಬೀಗಿದ ಹೃದಯ ನನ್ನದು, ನಿನ್ನ ಮನಕೆ ಒಡತಿಯೂ ನಾನು. ನೀ ಎಲ್ಲೇ ಇದ್ದರೂ ನಿನ್ನ ಹೃದಯ ನನ್ನಲ್ಲಿ ಸೆರೆಯಾಗಿದೆ. ನಾ ಇಲ್ಲದೇ ಸಾಗದ ಜೀವ ನೀನು, ಕಂಡಿತಾ ಸಾಗಲಾರೆ ಬಹುದೂರ, ಬಹು ಸಮಯವೆಂಬುದು ನನ್ನ ಕಿವಿಗೆ ಅಪ್ಪಳಿಸಿ ಹೇಳುತ್ತಿದೆ ಬೀಸುವ ತಂಗಾಳಿಯ ಮೊರೆತದ ಪ್ರತೀ ಸದ್ದು. ಒಲವಗರಿಯಿಂದ ನಿನ್ನೆದೆಯಲ್ಲಿ ನಾ ಬರೆದ ಸಾಲು ನಿನ್ನ ಹೃದಯದಿಂದ ಹೊರಬರಲಾರವು ಎಂಬ ದಿಟ ನಂಬಿಕೆಯಲ್ಲೇ ನಿನ್ನಾಗಮನಕ್ಕಾಗಿ ಹಾತೊರೆಯುತಾ ಜಂಬದಲ್ಲೇ ಕುಳಿತಿರುವೆ..!! ಚೂರಾದ ಮನಸು ಒಂದಾಗಿಸುವವನೇ ಬೇಗನೇ ಬಾ..ನೋವಿನ ಶರಧಿಯ ಕರಗಿಸುವವನೇ ಬೇಗನೇ ಬಾ. ಜೊತೆಗೆ ನೀನು ನಗಬೇಕು, ಒಲವ ಪಥದಲಿ ನನ್ನೊಂದಿಗೆ ನಗುತಾ ಸಾಗು.
ಗೆಳೆಯಾ..ನೀ ಬರುವುದನು ಮರೆದಿರು..
ಬರುವಾಗ ತರಲು ಮರೆದಿರೊಂದು ಕೆಂಗುಲಾಬಿಯನೂ..

         ರಾಮಚಂದ್ರ ಸಾಗರ್

Sunday, 8 January 2017

ಜಗವನ್ನೇ ಶತ್ರುವಾಗಿಸಿ ನಡೆದಳು..

drinking is injurious to health
      ಏ ಹುಡುಗಿ..ಈ ನೋವಲ್ಲಿ ಸುಟ್ಟ ಮನದ ಸಂಕಟ ನಿನಗೇನು ಗೊತ್ತು, ಸುಮ್ಮನೇ ಸದ್ದಿಲ್ಲದೇ ಸಾಗುತ್ತಿದ್ದ ನನ್ನ ಬದುಕಲ್ಲಿ ನೀನ್ಯಾಕೆ ಬಂದೆ, ಏನೋ ತಣ್ಣೀರು ಕುಡಿದರೂ ಅಮೃತ ಕುಡಿದಂತೆ ನೆಮ್ಮದಿಯಲ್ಲಿ ನಗುತಿದ್ದೆ ಅಂದು ನಾನು, ಬಿಸಿಗಾಲದ ಶೆಕೆಯಲ್ಲಿ ಬೆವರಿಳಿದು ಬೇಯುವವಧಿಯಲ್ಲಿ ಇರುಳು ಬಿಸಿಯ ಹವೆಯೆಬ್ಬಿಸಿ ಕುಣಿದರೂ ಸಾವದಾನದಲ್ಲಿ ಕಣ್ಣುಗಳನ್ನು ನೆಮ್ಮದಿಯಿಂದ ಮುಚ್ಚಿ ಯಾವುದೇ ಆತಂಕವಿಲ್ಲದೇ  ನಿರಾಳವಾಗಿ ನಿದ್ರಿಸುತಿದ್ದೆ, ಹೃದಯದ ರೋಧನೆ, ನೋವಿಲ್ಲದೇ ನಿರಮ್ಮಳವಾಗಿದ್ದೆ. ರಾತ್ರಿ ಅನ್ನ ಉಣ್ಣದಿದ್ದರೂ ಸಂತೋಷದಲ್ಲಿರುತ್ತಿದ್ದೆ, ಬೆಳಿಗ್ಗೆ ರವಿ ಉದಯಿಸಿ ಬಿಸಿಲು ಮುಖಕ್ಕೆ ಬಡಿಯುವವರೆಗೂ ನಿರಾಳವಾಗಿ ನಿದ್ರಿಸುತ್ತಿದ್ದೆ, ಒಂಟಿ ಬದುಕಾದರೂ ಹೃದಯವು ನೆಮ್ಮದಿಯ ಸೆಲೆಯಲ್ಲಿ ಆಶ್ರಮ ಪಡೆದಿತ್ತು. ಎಲ್ಲವೂ ದೇವರ ಕೊಟ್ಟ ಬದುಕು ಬಡತನವಾದರೇನು ಮೂರು ಹೊತ್ತಲ್ಲದಿದ್ದರೂ ಎರಡು ಹೊತ್ತು ಊಟ, ನೆಮ್ಮದಿಯ ನಿದ್ರೆ ಮಾಡಿ ಹಾಯಾಗಿದ್ದವನ ಬದುಕಲ್ಲಿ ನೀ ಬಂದು ಪ್ರೀತಿಯ ಜಗದಲ್ಲಿ ನನ್ನ ಕೈಹಿಡಿದು ನೀನು ಇನ್ನೊಂದು ಜಗವಿದೆ ಎಂದು ಕರೆದೆ, ಪ್ರೀತಿಗೆ ಸೋಲದ ಮನವೆಲ್ಲಿದೆ, ಜಗದ ಮೂಲೆ, ಮೂಲೆಯೂ ಪ್ರೀತಿಯ ಬಂಧದಲ್ಲಿದೆಯೆಂದು ನನ್ನನ್ನು ನೀ ನಂಬಿಸಿದೆ, ನಾನು ನಂಬಿದೆ, ಜಗದೆಲ್ಲವೂ ಪ್ರೀತಿಯ ಸೆಲೆಯ ಬಲದ ಕೃಪೆಯೇ.. 
     
   ಪ್ರೀತಿಯ ಹಂದರಲ್ಲಿಯೇ ಜಗದ ಜೀವ ಉಳಿದಿದೆ, ಪ್ರೀತಿಯಿಲ್ಲದೇ ಜಗದಲ್ಲಿ ಯಾವುದಿದೆ, ಅರಳುವ ಹೂವು ತಂಗಾಳಿಯ ಪ್ರೀತಿಯಲ್ಲಿ ನಗುತಿದೆ ನೋಡು ಎಂದು ನನ್ನ ಮನಸ್ಸನ್ನು ನೀ ಗೆದ್ದೆ, ಸರೋವರದ ತಾವರೆಯ ತೋರಿ ನೀನಂದು ಸರೋವರ ಮತ್ತು ತಾವರೆ ನಡುವೆ ಪ್ರೀತಿಬಂಧವೆಂದೆ. ಸರೋವರವಿಲ್ಲದೇ ತಾವರೆ ಉಳಿವುದೇ, ತಾವರೆಯಿಲ್ಲದೇ ಸರೋವರ ಪಳಿಸುವುದೇ..? ನೀ ಯೋಚಿಸು ಎಂದು ಮನಕ್ಕೆ ನೀ ಲಗ್ಗೆಯಿಟ್ಟೆ, ಜಗದೆಲ್ಲವನ್ನು ಅಷ್ಟೊಂದು ಹತ್ತಿರದಿಂದ ಮನಕ್ಕೆ ಪರಿಚಯಿಸಿ ಪ್ರತಿ ವಸ್ತುವಿನಲ್ಲೂ ಪ್ರೀತಿಯ ಬಂಧವನ್ನು, ಒಲವಿನ ಸಾರವನ್ನು ಅರ್ಥೈಸಿದೆ, ಅರ್ಜುನನಿಗೆ ಸಾರಥಿಯಾದ ಕೃಷ್ಣನ ಉಪದೇಶದಂತೆ ಬದುಕಿನ ಪ್ರತಿದಿನವೂ, ಪ್ರತಿಘಟ್ಟದಲ್ಲೂ, ನನಗೆ ಪ್ರಿತಿಯ ಬಂಧದ ಪರಿಚಯವನ್ನೇ ಮಾಡಿಸುವುದನ್ನು ನೀ ಕಾಯಕವಾಗಿಸಿಕೊಂಡೆ, ನಿನ್ನ ಒಲವ ಉಪದೇಶಗಳಿಗೆ ನಾನು ಕೇಳುವ ಪ್ರಶ್ನೆಗಳಿಗೆ ನಿನ್ನ ಮುದ್ದಾದ ಉತ್ತರಕ್ಕೆ ನಾ ಶರಣಾಗಿ ಹೋದೆ. ನಿನ್ನ ತುಂಟ ನಗುವಿಗೆ ನಾ ಸೋತು ಹೋಗಿದ್ದೆ. ಪ್ರೀತಿಯ ಉಪದೇಶವನ್ನು ಮುಂಜಾನೆಯ ರವಿಯಿಂದ ಆರಂಭಿಸಿ ಮುಸ್ಸಂಜೆಯ ರವಿ ಮರೆಯಾಗುವವರೆಗೂ ನೀಡಿ, ರಾತ್ರಿ ಚಂದಿರನ್ನೂ ತೋರಿಸಿ ಬಿಡುವಿರದೇ, ಅಮವಾಸ್ಯೆಯಂದು ಹೊಳೆವ ತಾರೆಗಳ ಬೆಳಕಲ್ಲೂ ತುಸು ಬಿಡುವೂ ನೀಡದೇ ಎಲ್ಲೆಲ್ಲೂ ಪ್ರೀತಿಯೇ ಎಂದು ಒಲವೋಪದೇಶ ಮಾಡಿದೆ, ಹೊಳೆವತಾರೆಗಳಿಗೆ ಭುವಿಯ ಕುಸುಮಗಳ ಒಲವೆಂದೆ, ನಗುವ ಚಂದಿರನಿಗೆ ನಗುವ ನೈದಿಲೆ ಬೇಕೆಂದೆ ಅದಕಾಗ್ಗೆ ಅವನ ಕಾತರವೆಂದೆ, ಎಲ್ಲವನ್ನೂ ನಾ ಮರುಪ್ರಶ್ನೆ ಹಾಕದೇ ನಿನ್ನ ಮಾತುಗಳನ್ನು ನಂಬಿದೆ ಜೊತೆಗೆ ಸದ್ದಿಲ್ಲದೇ ನಿನ್ನಲಿ ವಶವಾದೆ. 

     ಪ್ರೀತಿಯ ಜಗದಲ್ಲಿ ನನ್ನ ಮನಸ್ಸಿಗೆ ಒಲವ ರಂಗು ಸಾಕಷ್ಟು ಲೇಪಿಸಿದೆ, ಎಷ್ಟೆಂದರೇ ನಾನಿಂದು ಎಷ್ಟೇ ಪ್ರಯತ್ನಿಸಿ ಯಾವ ಶರಧಿಯಲ್ಲಿ ಮುಳುಗೆದ್ದರೂ ನಿನ್ನೊಲ ರಂಗು ಕರಗುತ್ತಿಲ್ಲ ಕಣೇ, ಅಂದು ನಾನು ನೀನು ಕಡಲತಡಿಯ ಬಂಡೆಗಳ ಮೇಲೆ ಕುಳಿತು ಗಂಟೆಗಟ್ಟಲೆ ಮಾತನಾಡಿದ್ದೆವು, ಇಂದು ನಾನಲ್ಲಿ ನಡೆದು ಹೋದರೇ ಆ ಬಂಡೆಗಳೇ ಬಂದು ನನ್ನ ಎದೆಗೊರಗಿದಂತೆ ನೋವಾಗುತ್ತಿದೆ, ಜಗದೆಲ್ಲಾ ವಸ್ತುಗಳಲ್ಲಿ ಪ್ರೀತಿಯನ್ನೇ ತೋರಿಸಿ ನೀ ಏನೋ ನಡೆದೆ, ಸದ್ದಿಲ್ಲದೇ ಸಾಗಿಹೋದೆ. ನೀನಿಲ್ಲದೇ ಒಂಟಿಯಾಗಿ ನೋಡುವ ನನ್ನ ಕಣ್ಣಿಗೂ ಸರಿಯಾಗಿ ಕೆಲಸವಿಲ್ಲ, ಮಬ್ಬು ತುಂಬಿದೆ ಸಾಕಷ್ಟು, ಚಿಂತೆಗಳ ಸುರಿಮಳೆಯ ಕೊರೆತದಲ್ಲಿ ಕೊರಗುತಾ, ಮಬ್ಬು ತುಂಬಿದ ಕಣ್ಣಿನಿಂದ ಸರಿಯಾಗಿ ನಾ ಏನೂ ನೋಡಲಿ, ಕಂಡಲ್ಲೆಲ್ಲಾ ನೀ ಮುದ್ದಾಗಿ ತೋರಿಸಿದ ವಸ್ತುಗಳೇ ಕಾಡುತಿರುವಾಗ, ನಾ ನೋಡುವುದೇಗೆ, ದೇವರೇ ನನ್ನನ್ನು ಶಾಶ್ವತವಾಗಿ ಕುರುಡನನ್ನಾಗಿಸು ಎಂಬುದೊಂದೇ ದೇವರಲ್ಲಿ ಪ್ರಾರ್ಥನೆಯಾಗಿದೆ, ಒಂದಂತೂ ಸತ್ಯ ಅವಳಿಲ್ಲದೇ ನಾನೀಗ ಅಕ್ಷರಶಃ ಕುರುಡ, ಮಬ್ಬು ಆವರಿಸಿರಲು ನನ್ನ ತನುವು ನಿಯಂತ್ರಣ ತಪ್ಪಿ ಬಂಡೆಗೊರಗಿ ಬೀಳುತಿದ್ದೆ, ಒಡೆದ ಹಣೆಯಲ್ಲಿ  ಸುರಿವ ರಕ್ತದಲ್ಲಿ ಕೊರೆವ ಛಳಿಗಾಳಿಯಲ್ಲೇ ಇಂದು ನಾನು ಸಾಗುತ್ತಿರುವೆ. ಎಷ್ಟೇ ಬೇಡವೆಂದು ಒದ್ದರೂ ಹೋಗದ ನಿನ್ನ ನೆನಪುಗಳ ಹಾವಳಿ ಎದೆಯನ್ನು ಅವಿರತ ಸುಡುತಿದೆ, ಕೈಲಿದ್ದ ಸರಾಯಿ ಬಾಟಲಿ ನೋಡಿ ಎರಡು ಎಣಿಸುವುದರೊಳಗಾಗಿ ಹೊಟ್ಟೆ ಸೇರುತಿದ್ದೆ, ನೋಡು ನೋಡುತಿದ್ದಂತೆಯೇ ಕರಗುತಿದ್ದೆ, ಕರಗುತ್ತಾ ಯಾವುದೋ ಮಂಪರು ಜಗದಲ್ಲಿ ನಿನ್ನ ಮರೆಯುತ್ತಾ ವಾಲಾಡುತ್ತಿದ್ದೆ. ಇನ್ನು ಅನ್ನದ ಚಿಂತೆಯೆಲ್ಲಿ..? ತಣ್ಣೀರು ಕುಡಿದರೂ ಅಮೃತವೆಂದಿದ್ದ ನನ್ನ ಮನವಿಂದು ಎದುರು ಅಮೃತ ತಂದಿಟ್ಟರೂ ಕುಡಿಯಲು ಒಪ್ಪಿಗೆ ನೀಡುತ್ತಿಲ್ಲ. ಎಲ್ಲವೂ ನಿಶೆಯಲ್ಲೇ, ನಿನ್ನೊಲವ ಅಮಲಿನ ಅಪ್ಪುಗೆಯಲ್ಲಿ ಸರಾಯಿ ಸಹವಾಸದಲ್ಲೇ ವಾಸವಾಗಿದೆ, ಮನ ಸದ್ದಿಲ್ಲದೇ ತನಗೆ ಅರಿವಿಲ್ಲದ ಎಲ್ಲಾ ದುಶ್ಚಟಗಳ ತಾಣವಾಗಿದೆ. ನೋವಿನ ಹಂಗು ನಿನಗೇನು ಗೊತ್ತು, ಅನುಭವಿಸುವ ಮನದ ರೋಧನೆ ನಿನಗೇನು ಕೇಳಿಯಾತು, ಸುರಿವ ಹನಿಗಳಲಿ ನೀನು ಬಿಂಬವಾಗಿ ಕುಣಿಯುತಿರುವೆ ನಿತ್ಯ, ಹಗಲು ಇರುಳು ರೋಧಿಸಿ ನಾ ಹರಿಸಿದ ಕಣ್ಣೀರ ಹೊನಲಿನಲ್ಲಿ ನಿನದೇ ರೂಪ ಬಿಂಬವಾಗಿ ಕಾಡುತಿದೆ, ಇರಬಹುದು ಅದು ನೀನು ನನ್ನ ಕೊನೆಯನ್ನೇ ಬಯಸಿದಂತಿದೆ. ಅಂದು ನೀ ಪ್ರೀತಿಯಿಂದ ನನ್ನ ಮುದ್ದಾಗಿ ಕರೆದೊಯ್ಯತಿದ್ದ ಸಾಗರ ತೀರದ ದಾರಿಯಲ್ಲಿ ಇಂದು ನಾನೊಬ್ಬನೇ ರೋಧಿಸುವ ಮನದೊಂದಿಗೆ ಸಾಗುತಿದ್ದೇನೆ, ಕಣ್ಣೀರು ನನ್ನ ಅನುಮತಿ ಕೇಳದೇ ಸದ್ದಿಲ್ಲದೇ ನೆಲಮುಟ್ಟುತ್ತಿವೆ, ಏನೇ ಆಗಲಿ ಅದು ನೀ ಕೊಟ್ಟ ಕೊಡುಗೆ, ಅದು ಕ್ಷಯವಾಗುವುದುಂಟೇ. 
      
     ಇಂದು ಬಾನಲ್ಲಿ ನಗುವ ಚಂದಿರನನ್ನ ನಾ ನೋಡಿದರೇ ಕಣ್ಣಿಗೆ ಸೂಜಿ ಚುಚ್ಚಿದಂತೆ, ನಗುವ ನೈದಿಲೆಯ ನೋಡಿದರೆ ಕಣ್ಣಿಗೆ ಸುಣ್ಣಬಿದ್ದಂತೆ, ತಂಗಾಳಿ ಮೈಸೋಕಿದರೆ ಬಿಸಿನೀರನ್ನು ಮೈಮೇಲೆ ಚೆಲ್ಲಿದಂತೆ ಭಾಸ. ನೋವಿನ ಸಾಮ್ಯಾಜ್ಯಕ್ಕೆ ನನ್ನನ್ನು ಅಧಿಪತಿಯಾಗಿಸಿ ನೀ ನಡೆದೆ. ಅಂದು ಇದೇ ಸಾಗರದ ತೀರದಲ್ಲಿ ಉರಿವ ಜ್ವಾಲೆಯ ಹೊತ್ತಿಸಿ ಮೈಕಾಯಿಸಿಕೊಂಡಿದ್ದೆವು. ಇಂದು ಯಾರೋ ಹೊತ್ತಿಸಿ ಹೋದ ಬೆಂಕಿಯಲ್ಲಿ ನಾನೊಮ್ಮೆ ನೋಡಿದರೂ ಅಲ್ಲಿಯೂ ನಿನದೇ ನೆನಪು, ನಿನದೇ ಬಿಂಬದ ಕುಣಿತ. ನಿನ್ನ ಹೊರತಂದು ನಾ ಪ್ರಶ್ನಿಸಬೇಕೆಂದು ನಾನು ಹಠವಿಡಿದು ಉರಿವ ಜ್ವಾಲೆಯಲ್ಲಿ ಕೈಸುಟ್ಟುಕೊಂಡು ನೋಯುತ್ತಿದ್ದೇನೆ.. ಕೈಲಿರುವ ಸರಾಯಿ ಬಾಟಲಿ ಕಾಲಿಯಾಗುತಿದೆ, ನಾನು ಕುಡಿದಲ್ಲ ನೋಡಿದರೂ ಸಾಕು, ತಂಪು ಹವೆಯಲ್ಲೂ ನನ್ನ ತನುವು ಬೆವರು ಹನಿಗಳ ಕಣಜವಾಗಿದೆ. ಅಂದು ನಿನ್ನೊಲವ ಸೆರೆಯಲ್ಲಿ ನಿನ್ನ ತಬ್ಬಿ ಹಿಡಿದಾಗ ನಡುಗುತ್ತಾ ಬೆವರಿದ್ದೇ. ಇಂದು ಅದೇ ನೆನಪು ಸಾಕು ನಾನು ಕೊನೆಯಾಗುವವರೆಗೂ ಬೆವರಿಳಿಸಿಕೊಳ್ಳಲು.. 
     
       ಯಾರೋ ನನ್ನ ಬಗ್ಗೆ ಹೇಳಿದ ತಪ್ಪು ಮಾತಿಗೆ ನೀ ಬೆಲೆಕೊಟ್ಟು, ಅವರ ಮಾತು ನಂಬಿ, ನಿರ್ಮಲ ನನ್ನ ಪ್ರೀತಿಯನ್ನು ನೀ ತ್ಯಾಗ ಮಾಡಿದ್ದೂ ಸರಿಯೇ.. ಪ್ರತ್ಯಕ್ಷವಾಗಿ ಕಂಡರೂ ಇನ್ನೊಮ್ಮೆ ಪರಿಶೀಲಿಸಿ ನೋಡೆಂಬ ಮಾತನ್ನು ನೀ ಮರೆತೆಯೇಕೇ..? ನಮ್ಮ ಪ್ರಿತಿಯನ್ನು ಬಯಸದ ವಿಕೃತಿಗಳು ನಮ್ಮೊಲವನು ಬೂಧಿ ಮಾಡಿ, ಒಲವ ಕಣ ಕಣವನ್ನು  ಕರುಣೆಯಿಲ್ಲದೇ ಕೊಂದರು, ಅವರ ಮಾತುಗಳಿಗೆ ನೀ ತುಸು ಎಣಿಸದೇ, ಯೋಚಿಸದೇ ನಡೆದದ್ದು ವಿಧಿಯೇ.  ಅವರಸರದ ಆಟವನ್ನು ನೀನು ಆಡಿಬಿಟ್ಟೆ, ನನ್ನ ಬದುಕು ಈಗ ಕೇಲವ ನೀನಿಲ್ಲದೇ ನಿನ್ನ ಬೇಡವೆಂದರೂ ಕಾಡುವ ನೆನಪುಗಳ ಜೊತೆಗೆ, ಕೈಲಿ ಸರಾಯಿ ಬಾಟಲಿಯ ಹಿಡಿದೂ ಅದೇ ದಾರಿಯಲ್ಲಿ, ನೀನಂದು ಪ್ರೀತಿಯಿಂದ ಕೈಹಿಡಿದು ನಡೆಸುತ್ತಿದ್ದ ದಾರಿಯಲ್ಲಿ ಒಂಟಿಯಾಗಿ ತೂರಾಡುತ್ತಾ, ಸುರಿವ ಕಣ್ಣೀರು ಹನಿಗಳ ಸಂತೈಸುವಿಕೆಗೂ ಒಪ್ಪದೇ  ಸಾಗುತಿದ್ದೇನೆ..ಒಂದಂತೂ ಸತ್ಯ, ನನಗೀಗ ಇಡೀ ಜಗವೇ ಶತ್ರುವಾಗಿ ಕಾಣುತಿದೆ, ಏನನ್ನು ನಾ ಕಂಡರೂ ಹಿತವೆನಿಸುತಿಲ್ಲ..ಯಾವುದೂ ಬೇಡವಾಗಿದೆ, ನೀನೇ ನನ್ನನ್ನು ತಿರಸ್ಕರಿಸಿದ ಮೇಲೆ..ಜಗವೇ ಶತ್ರುವಾಗಿದೆ..

          ರಾಮಚಂದ್ರ ಸಾಗರ್

Friday, 6 January 2017

ಶುಭಕೋರೋಣ ಬಾ ಗೆಳತೀ..

     ನನ್ನದೊಂದು ಆಸೆ ಗೆಳತಿ, ಪ್ರತಿ ಮುಂಜಾನೆ ನಾವು ಎಂದಿಗೂ ಉದಯಿಸುವ ರವಿಗೆ ಸ್ವಾಗತ ಕೋರಬೇಕು, ನೀನು ಮದುವಣಗಿತ್ತಿಯಂತೆ ಸಿದ್ದಗೊಳ್ಳದಿದ್ದರೂ ತುಸುನಗುವಲಿ ಕರೆದರೆ ಸಾಕು ನಾ ಬರುವೆ ನಿನ್ನೊಂದಿಗೆ ಮರುಮಾತಿಲ್ಲದೇ, ಪ್ರೀತಿಯ ಹಂದರದಲ್ಲಿ ನಗುತಾ ನಾವಿಬ್ಬರೂ ಉದಯಿಸುವ ರವಿಗೆ ಸ್ವಾಗತ ಕೋರೋಣ, ಕೈ ಆಗಷ್ಟೇ ಅರಳಿದ ಒಂದೆರಡು ಹೂಗಳನ್ನು ಹಿಡಿದಿರೋಣ ಸಾಕು, ಅವನಿಂದ ಬರುವ ಹೊನ್ನಿನ ಕದಿರು ನನ್ನ ನಿನ್ನ ಮೊಗದ ಮೇಲೆ ಪಳಿಸಲಿ, ಆತನ ಹಿತದಲ್ಲಿ ನಮ್ಮ ಮನದ ಬೆಸುಗೆ ಮತ್ತಷ್ಟು ಗಟ್ಟಿಯಾಗಲಿ, ರವಿ ಕಿರಣಗಳು ಬೆಳ್ಳಿತಟ್ಟೆಯಲ್ಲಿ ಬರುವವರೆಗೂ ನಾವಿಬ್ಬರು ಮುಂಜಾನೆಯ ಸೊಬಗಲ್ಲಿ ನಲಿಯೋಣ, ಆಗಲಷ್ಟೇ ಅರಳಿ ನಗುವ ಕುಸುಮಗಳಿಗೂ ತುಸು ನಾಚಿಸೋಣ, ಅರಳಿ ನಗುವ ಹೂಗಳ ನಡುವೆ ನಾನು ನೀನು ಕೈಹಿಡಿದು ಸಾಗೋಣ, ಪಿಸುಮಾತುಗಳು ಬಿಡುವಿಲ್ಲದೇ ವಿನಿಮಯವಾಗುತಿರಲಿ, ಸುಳಿದಾಡುವ ತಂಗಾಳಿಯಲ್ಲಿ ನಲಿವ ಕುಸುಮವೊಂದನ್ನು ತಂದು ನಿನ್ನ ಮುಡಿಯ ಮೇಲಿಡಬೇಕು ನಾನು ನಿತ್ಯ, ನೀ ನಗುತ ಆ ಘಳಿಗೆಯಲಿ ಸವಿ ಮುತ್ತೊಂದನ್ನು ನೀಡಬೇಕು, ಮೆತ್ತನೇ ಮೆತ್ತನೇ ನೀ ಹೂಬನದ ಹೂಗಳನು ನೇವರಿಸುತಾ ನಲಿಯಬೇಕು, ಅವುಗಳೊಂದಿಗೆ ಸೌಂದರ್ಯದ ಕದನ ನೀ ನಡೆಸಬೇಕು, ಎಲ್ಲವನ್ನು ನೋಡುತಾ ನನ್ನ ಮನ ನೀ ರಮಿಸಬೇಕು. ಹಸಿರೆಲೆಯ ಮೇಲೆ, ಹೂಗರಿಯ ಮೇಲೆ ನಗುವ ಮುಂಜಾನೆಯ ಮಂಜಿನ ಹನಿಗಳನ್ನು ನಾನು ತಂದು ನಿನ್ನ ಮೊಗವ ನೇವರಿಸಬೇಕು, ಮಂಜಿನ ಹನಿಗಳಲಿ ನಾನೂ ನೀನು ಎರಚಾಟವಾಡಬೇಕು, ನಮ್ಮ ಸಂತಸವನ್ನು ಕಂಡು ಕೆಂಪಾದ ರವಿಯ ಮೊಗವು ಇನ್ನೂ ಕೆಂಪಾಗಲಿ ಎನ್ನಬೇಕು, ಮುಂಜಾನೆಯ ಹಾದಿಯಲ್ಲಿ ನಾವಿಬ್ಬರೂ ಒಂದಾಗಿ ಒಲವಗಾಥೆಯ ಗುನುಗುತಾ ಮೈಲುದ್ದ ಸಾಗಬೇಕು, ನೀ ಸಾರಥಿಯಾಗಿ ಗೆಳತಿ ನನ್ನ ಕೈಹಿಡಿದು ರಮಿಸುತಾ ನಡೆಸಬೇಕು, ಸಾಗುವ ಪ್ರತಿ ಘಳಿಗೆಯು ನಿನ್ನ ಕಾಲ್ಗೆಜ್ಜೆಯ ನಾದ ನನ್ನೆದೆಯ ಲಾಲಿಸಬೇಕು, ನೀ ಜೊತೆಯಾಗಿ ನಗುವ ನೈದಿಲೆಯಂತೆ ನಗುತಾ, ಒನಪು ನಗುವು ಚೆಲ್ಲುತಾ ಸಾಗಬೇಕು, ಜೊತೆಗೆ ಕರೆದೊಯ್ಯಬೇಕು ನನ್ನ ಮನವನ್ನೂ...

     ಮುಂಜಾನೆ ತಂಗಾಳಿಗೆ ಕುಣಿವ ನಿನ್ನ ಮುಂಗುರುಳು ನನ್ನನೇ ಬಾ ಎನ್ನಬೇಕು, ಆ ಕುಣಿವ ಮುಂಗುರುಳು ಕರೆಗೆ ನಾ ಓಡೋಡಿ ಬರಬೇಕು, ನಲಿವ ಹೂಗರಿಯೊಂದನ್ನು ಮುಂಜಾನೆಯ ಸೊಬಗಲ್ಲಿ ನಿನ್ನ ಹಣೆಯ ಮೇಲಿಟ್ಟು ಒಲವಗಾಥೆಯ ಪದಗಳು ನಾ ನಿತ್ಯ ನಿನಗಾಗಿ ಗುನುಗಬೇಕು, ನೀನು ನಿತ್ಯ ಹೊಸತರಂತೆ ಆಲಿಸಬೇಕು, ನಿತ್ಯ ನಾವು ಹೊಸತರಂತೆ ಕಂಗೊಳಿಸಬೇಕು, ಪ್ರತಿ ಮುಂಜಾನೆಯು ನಮ್ಮಲ್ಲಿ ಹೊಸತನ ಉದಯಿಸಬೇಕು, ಮನದ ಉಲ್ಲಾಸ ಹೆಚ್ಚಬೇಕು, ಒಲವ ಉಲ್ಲಾಸವು ಒಲವ ಹೊನಲಾಗಿ ಹರಿಯಬೇಕು, ನಾನು ನೀನು ನಗುತಾ ಒಲವ ಹೊನಲಿನಲ್ಲಿ ಮಿಂದು ನಗಬೇಕು, ಮೈ ಮನ ತಣಿಯಬೇಕು. ದಿನವಿಡೀ ನೋವು ಬವಣೆಗಳನ್ನು ಮುಂಜಾನೆಯ ಸವಿ ಘಳಿಗೆಯ ಹಿತದಲ್ಲಿ ಎಲ್ಲವೂ ಸಿಹಿಯಂತೆ ಭಾಸವಾಗಬೇಕು. ದಿನವು ಕ್ಷಣದಂತೆ ಕರಗಬೇಕು. ಪ್ರೀತಿಯ ಹಂದರವು ನಮ್ಮನ್ನು ದಿನವಿಡೀ ರಕ್ಷಿಸಬೇಕು. ಉದಯಿಸುವ ರವಿಯು ಜಗವೆಲ್ಲಾ ಬೆಳಗಿದಂತೆ ನಿತ್ಯ ನಮ್ಮೊಲವ ದೀವಟಿಗೆ ಇಂಧನವನ್ನು ತುಂಬಬೇಕು, ಪ್ರೀತಿಯ ಚಿಲುಮೆಯಂತೆ ಅವನು ನಮಗೆ ಉಲ್ಲಾಸನಾಗಿ ಹರಸಬೇಕು. ಒಲವೋಲ್ಲಾಸದ ವರ್ಷದಲ್ಲಿ ನಾವಿಬ್ಬರೂ ನಲಿಯುತಾ, ಮುಂಜಾನೆಯ ಮಂಜು ಕವಿದ ದಾರಿಯಲ್ಲಿ ನಾನು ನೀನು ಜಗದ ಯಾರ ಹಂಗಿಲ್ಲದೆ ಬಾಯಿ ತುಂಬಾ ಹರಟೆಹೊಡೆಯುತ್ತಾ ಸಾಗಬೇಕು. ಸಾಗುವ ದಾರಿಯು ಪ್ರಿತಿ ಮತ್ತು ಸ್ನೇಹದ ಪ್ರೇಮವಾಗಿರಲಿ, ಅದುವು ನಿತ್ಯ ಬಾಳಿನಲ್ಲಿ ಸವಿಯಾಗಿರಲಿ, ಮತ್ತು ಎಂದಿಗೂ ಬೇಸರವೆನಿಸದ ಪಯಾಣವಾಗಲಿ, ಮಧುರ ಪಥವು ಎಂದಿಗೂ ಚಿರಾಯುವಾಗಿರಲಿ..ಮೂಡಣದಲ್ಲಿ ಮೂಡುವ ರವಿಯು ನಮ್ಮೊಲವಿಗೆ ನಿತ್ಯ ಪ್ರೇರಣೆಯಾಗಿರಲಿ..ನಾವಿಬ್ಬರೂ ದಿನವೂ ಆತನನ್ನು ಶುಭಕೋರಿ ಸ್ವಾಗತಿಸುವುದನ್ನು ಎಂದಿಗೂ ಮರೆಯುವುದೂ ಬೇಡ ಗೆಳತೀ.. 
ಶುಭಕೋರುವುದು ಸಾಗಲಿ ನಮ್ಮ ಬಾಳಿನುದ್ದಕೂ. ನಮ್ಮ ಒಲವ ಪಥದುದ್ದಕೂ..

       ರಾಮಚಂದ್ರ ಸಾಗರ್

Thursday, 5 January 2017

ಲಾಲಿಸುತಿದೆ ಮನ ಅವನನೂ...

     ಅಂದು ನಾ ನಡೆವ ಹಾದಿಯಲ್ಲಿ ಮಳೆಹನಿಗಳು ಒಂದೊಂದೇ ಉದುರುತ್ತಿದ್ದವು, ಗಾಳಿಯು ಜೋರಾಗಿ ಬೀಸಲು ಆರಂಭಿಸಿತು, ಬೇಗನೇ ಮನೆಯೆಡೆ ನನ್ನ ಕಾಲುಗಳು ಹೆಜ್ಜೆ ಹಾಕತೊಡಗಿದವು, ಬಾನೆಡೆ ನಾ ಇಣುಕಿ ನೋಡಿದೆ, ಎಲ್ಲೆಲ್ಲೂ ಕರಿಮೋಡಗಳು, ಕಾರ್ಗಾಲದ ವೇಳೆಯಲ್ಲಿ ರವಿಗೇಗೆ ಅವರಸರವೋ ಎಷ್ಟು ಬೇಗನೇ ಮರೆಯಾದನೋ ಎಂದು ದುಗುಡದ ಮನದಲ್ಲಿ ನಾ ತುಸು ಜೋರಾಗಿಯೇ ಸಾಗುತ್ತಿದ್ದೆ, ಸಾಧ್ಯವಾದಾಗ ಎರಡು ಹೆಜ್ಜೆ ಓಡುತ್ತಿದ್ದೆ, ಈ ದಾವಂತದಲ್ಲಿ ಹಾರಿದ ನನ್ನ ದುಪಟ್ಟಾ ತೂರಿ ಹೋಯಿತು, ಗಾಳಿಯಲ್ಲಿ ಬಹು ದೂರ ತೂರಿ ಹೋಯಿತು, ಮನದ ದುಗುಡ ಇನ್ನಷ್ಟು ಏರಿತು, ಆತಂಕದ ಎಲ್ಲೆಯು ಮೀರಿತು, ಓಡುವ ದುಪಟ್ಟಾ ಹಿಡಿಯಲು ನಾ ಓಡುತ್ತಿದ್ದೆ, ಗಿಡದ ಮೇಲೆ ಕೂತು ನಗುವ ದುಪಟ್ಟಾ ಹಿಡಿಯಲು ಇನ್ನೇನು ನನ್ನ ಕೈ ಮುಂದಾದಾಗ ಮಾಯಾಜಿಂಕೆಯಂತೆ ಅದು ಅಲ್ಲಿಂದ ಕ್ಷಣಮಾತ್ರದಲ್ಲಿ ನಾನು ಕಣ್ಣು ಮಿಟುಕಿಸಿ ಬಿಡುವುದರಲ್ಲಿ ಅದು ಅಲ್ಲಿಂದಲೇ ಮಾಯಾ..ಎಲ್ಲೆಲ್ಲಿ ಎಂದು ಮತ್ತು ನನ್ನ ಭಯದ ಮನ ಕಾತರಿಸುತಾ, ದುಪಟ್ಟಾ ಅರಸುತ್ತಾ ಸಾಗುತಿತ್ತು, ಓ ದೇವಾ ಈ ಸಂಜೆ ಹೊತ್ತಲ್ಲಿ ಇದೆಂತಾ ಅವಘಡವಾ ತಂದಿಟ್ಟೆ ಎಂದು ಪರಿತಪಿಸುವುದಾಗಿತ್ತು, ಆ ಕ್ಷಣವನ್ನು ಶಪಿಸುತ್ತಾ, ಆಗಾಗ ಅಬ್ಬರಿಸುತ್ತಿದ್ದ ಗುಡುಗು ಜೊತೆಗೆ ಕಾಣುವ ಮಿಂಚು ಮನದಲ್ಲಿ ಇನ್ನಷ್ಟು ಭಯ ತುಂಬಿತ್ತು, ಬೇಗನೇ ಮನೆಯೆಡೆ ಸಾಗಲಾರದೇ, ದುಪಟ್ಟ ಕೈಸೇರಲೂ ಇರದೇ, ನಾ ಕಾತರಿಸುವ ಸಮಯದಲ್ಲಿ ಯಾರೋ ದೂರದಲ್ಲಿ ನನ್ನ ಕಡು ನೀಲಿ ದುಪಟ್ಟಾ ಹಿಡಿದು ಓಡಿ ನನ್ನೆಡೆಯೇ ಬಂದಂತೆ ಎನಿಸಿತು, ಮಿಂಚಿನ ಬೆಳಕಲ್ಲಿ ಇನ್ನಷ್ಟು ಸ್ಪಷ್ಟವಾಗಿ ಮೂಡಿತು, ಬಂದು ನನ್ನ ಕೈಲಿಟ್ಟಂತೆ ಎನಿಸಿತು, ನೋಡಿದೆ ಹೌದು ಅದೂ ನನ್ನದೇ ದುಪಟ್ಟಾ, ನಾನು ಪರಿತಪಿಸುತ್ತಿದ್ದ ದುಪಟ್ಟಾ, ಅಯ್ಯೋ ಈ ಗಾಳಿ, ಮಳೆಯಲ್ಲಿ ದೇವರು ಕರುಣಿಸಿದವರೆಂದು ಬೇಗನೇ ಕ್ಷಣ ಕರಗುವುದರೊಳಗಾಗಿ ಮೈಮೇಲೆ ಹೊದ್ದು ನಿಂತೆ, ದುಪಟ್ಟ ಕೊಟ್ಟು ಮೆತ್ತನೇ ನನ್ನೆಡೆಯಿಂದ ಏನನ್ನು ನುಡಿಯದೇ ಹೋಗುವ ಅವನಾರೆಂದು ನೋಡಿದೆ, ಆತನಾರು, ಎಲ್ಲಿಂದ ಬಂದನೆಂದು ತಡವರಿಸಿದರೂ ದೇವರೇ ನಿನಗೂ ನಾ ಋಣಿ ಎನ್ನುತ್ತಾ, ಏನೇ ಆದರೂ ನಾ ಕಷ್ಟ ಪಡುವಾಗ ನನ್ನ ದುಪಟ್ಟಾ ಹಿಡಿದು ಕೊಟ್ಟವನಿಗೆ ಒಮ್ಮೆ ಧನ್ಯವಾದ ಹೇಳಬೇಕೆಂದು ಮನ ಹೇಳುತ್ತಿದ್ದಾರೂ ಕೊಂಚ ಹೆದರಿಕೆ ಕಾಡಿತು, ಈ ಸಮಯದಲ್ಲಿ ಬೇಗನೇ ಮನೆ ಸೇರೋಣವೆಂದು ಮತ್ತೆ ಬೇಗನೇ ಸಾಗತೊಡಗಿದೆ, ಆತನು ನಾ ನಡೆವ ದಾರಿಯಲ್ಲಿ ತುಸು ದೂರದಲ್ಲಿ ಮಬ್ಬಾಗಿ ಕಾಣುತ್ತಿದ್ದ. ನಾನೂ ಅವಸರವಾಗೇ ನಡೆಯುತಿದ್ದೆ, ಸಂಜೆಯೂ ನಿಧಾನವಾಗಿ ಕತ್ತಲೆಯೆಡೆ ಸಾಗುತ್ತಿತ್ತು, ರವಿಗೂ ಕಾರ್ಗಾಲದಲ್ಲಿ ಮರೆಯಾಗಲು ಅದೇನು ದಾವಂತವೋ ಎನೋ, ಒಮ್ಮೊಮ್ಮೆ ಮೋಡಗಳು ಕಡಿಮೆಯಾದಾಗ ಇಣುಕುವ ಚಂದಿರನ ಸೊಬಗೇನೋ ಹಿತ, ಕೊಂಚ ತಿಳಿ ನೀಲಿ ಬೆಳಕಾದರೂ ದಾರಿಯಾಗುವುದೇ ಎನ್ನುತ್ತಾ ತಡಬಡಿಸುತ್ತಿದ್ದೆ. 

     ಮಳೆಗಾಳಿಯು ಒಮ್ಮೆಲೇ ಜೋರಾಯಿತು, ಮುಂದೆ ಸಾಗುವುದು ಕಠಿಣವಾಯಿತು, ಎಷ್ಟು ದೂರ ಮಳೆಯಲ್ಲಿ ಸಾಗುವುದೆಂದು ಅರಿವಾಗದೇ ಮೊದಲೇ ಭಯದಲ್ಲಿ ನಡುಗುತ್ತಾ ಸಾಗುತ್ತಾ ನಡೆವಾಗ ಮೈಯೆಲ್ಲಾ ಒದ್ದೆಯಾಗಿ ಮತ್ತೆ ತಡವರಿಸುವಾಗ, ಮಳೆಹನಿಗಳು ಮತ್ತೆ ಮತ್ತೆ ಜೋರಾಗತೊಡಗಿದವು, ಹನಿಗಳ ಹೊಡೆತಕ್ಕೆ ನಾನು ಕಣ್ಣು ಬಿಡುವುದು ಕಠಿಣವೆನಿಸಿತು, ಅದರಲ್ಲಿ ತನುವು ಚಳಿ ಗಾಳಿಯ ಕೊರೆತಕೆ ನಡುಗಲಾರಂಭಿಸಿತು, ನಡುಗುವ ತನುವಲ್ಲಿ ಮತ್ತೆ ಹೆದರುತ್ತಾ ಸಾಗುವುದು, ಮತ್ತೆ ಮತ್ತೆ ಮನದಲ್ಲಿ ದಾರಿಬೇಗನೇ ಕ್ರಮಿಸಲೆಂದು ಬೇಡುವುದು ಆ ಘಳಿಗೆಯಲ್ಲಿ ಅನಿವಾರ್ಯವಾಗಿತ್ತು. ತುಸು ದೂರನಡೆಯುತಿದ್ದಂತೆ ಮಳೆ ನೀರಿನಲ್ಲಿ ನಾನು ಒಮ್ಮೆಲೇ ಜಾರಿದೇ, ಜೊತೆಗೆ ಜೋರಾಗಿ ಕಿರುಚಿದೆ, ಯಾರೋ ಪಕ್ಕದಲ್ಲಿ ಮಿಂಚಂತೆ ಬಂದು ನಾನು ನೆಲಮುಟ್ಟುವುದರೊಳಗಾಗಿ ಬಂದು ನನ್ನ ಮೇಲೆತ್ತಿದ್ದರು, ಹಾಗೆಯೇ ತುಸುವೂ ವಿರಮಿಸದೇ ಬಡಿಯುತಿದ್ದ ಹೃದಯ ಬಡಿತ ನಾಲ್ಕು ಪಟ್ಟು ಜೋರಾಯಿತು, ನಡುಗುವ ತನುವು ಒಮ್ಮೆ ಬಿಗಿಯಾಯಿತು, ಆರ್ಭಟದ ಗುಡುಗಿನ ಜೊತೆಯಲ್ಲಿ ಜಿಗದ ಮಿಂಚು ಬೆಳಕಲ್ಲಿ ನಾ ನೋಡಿದೆ, ನನ್ನನ್ನು ಗಟ್ಟಿಯಾಗಿ ಹಿಡಿದೆತ್ತಿದವನ ಮೊಗವ, ಅದೂ ಅವನೇ ನನ್ನ ದುಪಟ್ಟಾ ಎತ್ತಿ ಕೊಟ್ಟವನೂ, ನಾನೂ ಕೇಳಿದೆ..ತುಸು ಸಾವರಿಕೊಳ್ಳುತ್ತಾ..ನನ್ನ ದುಪಟ್ಟಾ ತಂದು ಕೊಟ್ಟವರಲ್ಲವೇ ಎಂದೆ.. ಹೌದು ಎಂದ, ತುಸು ದೂರ ಜೊತೆಯಲ್ಲಿ ನಡೆದು ಹೋದೆ, ಏನೇನೋ ಎನ್ನುತ್ತಲೇ ಮನ ಸಾಗಿತು, ಜೊತೆಗೆ ನಡುಗುವ ತನುವಿನೊಂದಿಗೆ, ಊರು ಸನಿಹವಾಗಿ ಮನೆಯ ಹಾದಿಯು ಹತ್ತಿರವಾದಾಗ ಪಕ್ಕದಲ್ಲೇ ಸಾಗಿ ಬರುತ್ತಿದ್ದ ಆತನಿಗೆ ಮತ್ತೊಮ್ಮೆ ಧನ್ಯವಾದವೆಂದೆ.. ಆತನೂ ನನ್ನನ್ನೇ ಮೀರಿಸುವಂತ ನಾಚಿಕೆ ನಂಟಿನವನೇನೋ..ಏನು ಹೆಚ್ಚು ನುಡಿಯದೇ ಬರುವೆಯೆಂದು ನುಡಿದ.. ಮತ್ತೆ ಕಣ್ಣೆತ್ತಿ ಬಾನೆಡೆ ನೋಡಿದೆ, ಅಲ್ಲಿ ಮೋಡಗಳು ಕಡಿಮೆಯಾಗಿವೆ, ಮೆತ್ತನೇ ಚಂದಿರ ನಗುತ್ತಿದ್ದಾನೆ, ನೀಲಿ ಬೆಳಕನ್ನು ನನ್ನೆಡೆ ತೂರುತ್ತಿದ್ದಾನೆ, ಈ ಕಡೆ ನೋಡಿದೆ, ದುಪಟ್ಟಾ ಕೊಟ್ಟವನು  ಮಳೆ ನೀರಲ್ಲಿ ಜಾರಿದಾಗ ಮೇಲಿತ್ತಿದ್ದವನೂ ಮೆತ್ತನೇ ಸಾಗುತ್ತಿದ್ದ. ಒಮ್ಮೆ ಗಟ್ಟಿಯಾಗಿ ಥ್ಯಾಂಕ್ ಕಣ್ರೀ ಎಂದು ಕೂಗಿದೆ. ಮತ್ತೆ ಗಟ್ಟಿಯಾಗಿ ಕೂಗಿದೆ, ಆತ ತಿರುಗಿ ನೋಡಿ ತುಸು ನಕ್ಕು ನಡೆದ..ಮನೆಗೆ ಬಂದು ತುಸು ಕಿಟಕಿಯಲ್ಲಿ ಬಾನೆಡೆ ನೋಡಿದೆ, ಓಡುವ ಮೋಡಗಳು ಕಡಿಮೆಯಾಗಿ ಚಂದಿರ ನಗುತ್ತಿದ್ದಾನೆ, ಮನದಲ್ಲಿ ಮೆತ್ತನೆ ಅವನ ನೆನಪು ಲಾಲಿಸುತಿದೇ..ಏಕೋ ಅರಿವಾಗುತ್ತಿಲ್ಲ..ಏನೆಂದು ತಿಳಿಯುತ್ತಿಲ್ಲ..

      ರಾಮಚಂದ್ರ ಸಾಗರ್

Saturday, 24 December 2016

ಸುರಿವ ಮಳೆಯಲ್ಲಿ ನಲಿಯೋಣ ಬಾ ಗೆಳತಿ..

  ಗೆಳತೀ..ಕಾರ್ಮೋಡ ಬಾನಲ್ಲಿ ಒತ್ತರಿಸಿ ಬರುತಿದೆ, ಗುಡುಗು ಮಿಂಚುಗಳ ಆರ್ಭಟವೇರುತ್ತಿದೆ, ಮನದಲ್ಲಿ ನಿನ್ನ ನೆನಪುಗಳ ಆರ್ಭಟವೂ ಏರುತ್ತಿದೆ, ನೀ ಬರುವ ಸವಿ ಘಳಿಗಾಗಿ ಎದುರು ನೋಡುತ್ತಾ ಮನಸ್ಸು ಸಿಹಿಯಾಗುತ್ತಿದೆ ಗೆಳತಿ, ನೀ ಬರುವ ಹಾದಿಯನ್ನು ಕಣ್ಣು ಮಿಟುಕಿಸದೇ ನೋಡುತ್ತಿದೆ, ಬೇಗನೇ ಬಾ ಗೆಳತಿ, ಸುರಿವ ತುಂತುರು ಮಳೆಯಲ್ಲಿ ಕೈ ಗಟ್ಟಿಯಾಗಿ ಹಿಡಿದು ಎರಡು ಹೆಜ್ಜೆ ಕುಣಿದು ಬಿಡೋಣ, ಜಗದೆಲ್ಲ ಬವಣೆಗಳನ್ನು ದೂರಾಗಿಸಿಕೊಳ್ಳೋಣ, ನಾಳೆಯ ಚಿಂತೆಗಳನ್ನು ನಮ್ಮ ಹರ್ಷದಿಂದಲೇ ಬೆದರಿಸೋಣ, ಅಂತೆ ಕಂತೆಗಳ ಸಂತೆಯಲ್ಲಿ ನಾನೂ ನೀನು ಕಳೆದು ಹೋಗುವುದು ಬೇಡ, ಪ್ರೀತಿಯಲ್ಲಿ ನಗುತಾ ನಿನ್ನ ಕಣ್ಣಾಲಿಯಲ್ಲಿ ನನ್ನ ಕಣ್ಣಾಲಿಯನು ನಾ ನೋಡುತಾ, ನನ್ನ ಕಣ್ಣಾಲಿಯಲ್ಲಿ ನಿನ್ನ ಕಣ್ಣಾಲಿಯನು ನೀ ನೋಡುತಾ ಸಂಭ್ರಮಿಸೋಣ, ಈ ಸಂಭ್ರಮದಲ್ಲೇ ಒಲವ ತೇರು ಎಳೆಯೋಣ, ಪ್ರೀತಿಯ ಓರಣದಲ್ಲಿ ನಗುತ್ತಾ ಕುಣಿಯೋಣ, ನೀ ಆಗಮಿಸಬೇಕು, ಆದಷ್ಟು ಬೇಗನೇ ನಿನ್ನ ದರ್ಶನವಾಗಬೇಕು, ಸುರಿವ ಹನಿಗಳು ತೊಟ್ಟಿಕ್ಕುತಿವೆ ಆಗಲೇ. ಮಳೆ ನಿಂತ ಮೇಲೆ ಬಂದರೇನು ನವಿರುತನ ಉಳಿದೀತು ಗೆಳತಿ, ಸುರಿವ ಮಳೆಯಲ್ಲಿ ನಾಲ್ಕು ಹೆಜ್ಜೆ ಕುಣಿದು ಬಿಡೋಣ ಬಾ. ನೊಂದ ಮನಸ್ಸುಗಳು ಸುರಿವ ವರ್ಷಧಾರೆಯಲ್ಲಿ ರಮಿಸಿ ಆನಂದದ ಉಯ್ಯಾಲೆಯಲ್ಲಿ ತೇಲಬೇಕಿದೆ, ಕಂಡಿತಾ ತೇಲುತ್ತವೆ, ಎಲ್ಲದಕ್ಕೂ ನಿನ್ನಾಗಮನವಾಗಬೇಕು, ನಿನ್ನ ನಗುಮೊಗದ ಸಿರಿಯ ದರ್ಶನವಾಗಬೇಕು. ಸಾಂಗತ್ಯದ ಬಲದಲ್ಲಿ ಜಗಗೆಲ್ಲುವ ಛಲದಲ್ಲಿ ಒಂದಾಗಿ ನಾವು ಸಾಗಬೇಕು. ಗುಡುಗುವ ಸದ್ಧಿಗೆ ನೀ ಬೆದರಬೇಕು, ಬೆದರಿ ನನ್ನನ್ನು ಆದಷ್ಟೂ ಬಿಗಿಯಾಗಿ ಹಿಡಿದು ಅಪ್ಪಿಕೊಳ್ಳಬೇಕು, ನಾನು ನಿನಗೆ ಸಂತೈಸಬೇಕು, ಗುಡುಗು ಗರ್ಜನೆಗೆ ಬೆದರುವ ನಿನ್ನ ಮೊಗದ ಆತಂಕವನ್ನು ನಾ ದೂರಾಗಿಸಿ ಸಂಭ್ರಮಿಸಬೇಕು, ಜೊತೆಯಲ್ಲಿ ನಾನಿರುವೆ ಹೆದರಿಕೆಯೇಕೆ ಎಂದು ನಾನು ಜಂಬ ಕೊಚ್ಚಕೊಳ್ಳಬೇಕು, ಗರ್ಜಿಸುವ ಗುಡುಗು ಮರೆಯಾಗುವುದರೊಳಗೆ ಬೇಗನೇ ಆಗಮಿಸು ಗೆಳತಿ, ಮಿಂಚಿನ ಬೆಳಕಿನಲ್ಲಿ ಗುಡುಗು ಸದ್ಧಿಗೆ ಬೆದರಿದ ನಿನ್ನ ಮೊಗದವನ್ನು ನಾನು ನೋಡಬೇಕು, ಹೊಳೆವ  ನಿನ್ನ ಕಣ್ಣುಗಳಲ್ಲಿ ಧೈರ್ಯವರಳುವ ಘಳಿಗೆಯನ್ನು ನಾ ನೋಡಬೇಕು,

ನನ್ನಾಸರೆಯಲ್ಲಿ ನೀನು ನಗುತಿರಬೇಕು, ಪಿಸುಮಾತಗಳನ್ನು ನೀನು ಆದಷ್ಟು ಗಟ್ಟಿಯಾಗಿ ಮಳೆಹನಿಗಳ ಸದ್ದಿಗೆ ಸೋಲಿಸುವಂತೆ ನೀ ನುಡಿಯುತಿರಬೇಕು, ಮಳೆಹನಿಗಳ ಸದ್ದು ನಮ್ಮ ಸವಿ ಸಲ್ಲಾಫದ ಸಂಭಾಷಣೆಗೆ ಕೊಂಚ ಅಡ್ಡಿಪಡಿಸಿದರೂ ನಾವು ಪ್ರೀತಿಯ ನುಡಿಗಳನ್ನು ಗಟ್ಟಿಯಾಗಿ ಪಿಸುಗುಟ್ಟೋಣ, ಪ್ರಿತಿಯ ಸುಖವನ್ನು ಆನಂದಿಸೋಣ, ಮಳೆ ಹನಿಗಳು ಆಗಲೇ ಒಂದೊಂದು ತೊಟ್ಟಿಕ್ಕುತಿವೆ, ಮಳೆ ಮುಗಿದು ಹೋಗುವುದರೊಳಗಾಗಿ ನೀ ಬಾ ಗೆಳತಿ..ನಿನ್ನ ನಗುಮೊಗದ ಸಿರಿಯ ದರ್ಶನ ನೀಡು..ಹರಿವ ಮಳೆ ನೀರಲ್ಲಿ ನಾನು ನೀನು ಕಾಲನ್ನು ಬೀಸುತ್ತಾ ಕೈ ಹಿಡಿದು ಜೊತೆಯಾಗಿ ಮೈಲುದ್ದ ಅಂದಿನಂತೆ ಸಾಗೋಣ, ಹರಿವ ನೀರನ್ನು ಇಬ್ಬರೂ ಒಬ್ಬರಿಗೊಬ್ಬರು ಎರಚುತ್ತಾ ಒಂದು ಘಳಿಗೆ ಆಟವಾಡಬೇಕು, ಜಗದೆಲ್ಲ ನೋವು ಮರೆಯಬೇಕು, ನೀರೆರೆಚಾಟದಲ್ಲಿ ನಾ ಮುಂದು ನೀ ಮುಂದು ಎನ್ನುತ್ತಾ ನಾವಿಬ್ಬರೂ ಕಾದಾಡಬೇಕು, ಆ ಕಾದಾಟದಲ್ಲಿ ನಾ ಗೆಲ್ಲುವವನಿದ್ದರೂ ಸೋಲುವೆ.. ನಿನ್ನ ಗೆಲುವು ನೋಡಿ ಸಂಭ್ರಮಿಸುವೆ ನೀ ಬೇಗನೇ ಆಮಿಸು ಒಲವೇ.. ನಿನ್ನ ನಗುಮೊಗದ ಸಿರಿಯ ಹೊತ್ತು ತಾ ಗೆಳತಿ, ಮಳೆಹನಿಗಳು ಮುಗಿದು ಹೋಗುವುದರೊಳಗಾಗಿ ಹರಿವ ನೀರು ಮುಗಿದುಹೋಗುವುದರೊಳಗಾಗಿ ನೀ ಬರುವುದನು ಮರೆಯದಿರು, ಕಾಗದದ ದೋಣಿಯನ್ನು ನಿನಗಾಗಿ ಆಗಲೇ ಸಿದ್ದಪಡಿಸಿ ತಂದಿದ್ದೇನೆ, ನೀನು ನಗುತ್ತಾ ಕಾಗದದ ದೋಣಿಯನ್ನು ಹರಿವ ನೀರಿನಲ್ಲಿ ತೇಲಿ ಬಿಟ್ಟು, ಜೊತೆಯಾಗಿ ಸಾಗಲಿ ಎಂದು ನೀನು ಪ್ರಾರ್ಥಿಸುವ ಸವಿ ಘಳಿಗೆಯನ್ನು ನಾನು ಕಣ್ತುಂಬಿಕೊಳ್ಳಬೇಕು, ಮೈಯೆಲ್ಲಾ ಒದ್ದೆಯಾದರೂ ಬೀಸುವ ತಣ್ಣನೆ ಗಾಳಿಯಲ್ಲಿ ತನುವೊಡ್ಡಿ ಮೈಯೊಣಗಿಕೊಳ್ಳುತ್ತಾ ತಾಸುಗಟ್ಟಲೇ ಹರಟೆ ಹೊಡೆಯತ್ತಾ ಸಾಗಬೇಕು, ಸಾಗುವಾಗ ನೀನು ನಾನು ಒಲವಗಾಥೆಯನು ದಾರಿಯುದ್ದಕ್ಕೂ ಗುನುಗಬೇಕು, ವರ್ಷಕಾಲದ ಸವಿಯ ಸಂಭ್ರಮಿಸಬೇಕು, ನಿನ್ನೊಂದಿಗೆ ನನ್ನ ಮನ ರಮಿಸಬೇಕು..ನೀ ಬರುವುದನು ಮರೆದಿರು ಗೆಳತಿ..ನೀ ಬಂದಾಗ ನೀಡಲು ತಂದಿರುವೆ ನಿನಗೆಂದು ಒಂದು ಚೆಲುವಾದ ಕೆಂಗುಲಾಬಿ. 

“ಮಳೆ ಹನಿಗಳು ಮುಗಿದು ಹೋಗುವುದರೊಳಗಾಗಿ ನೀ ಆಗಮಿಸು
ಸುರಿವ ಹನಿಗಳಲಿ ನನ್ನೊಂದಿಗೆ ಜೊತೆಯಾಗಿ ಮನ ರಮಿಸು...”

           ರಾಮಚಂದ್ರ ಸಾಗರ್

Tuesday, 20 December 2016

ನೀ ಕೊಟ್ಟ ಸಂದೇಶ..

    ಬಿಸಿಲುದಾರಿಯಲ್ಲಿ ನೆರಳನು ತಂದವನು, ನಾ ನಡೆವ ಹಾದಿಯಲ್ಲಿ ಕೈ ಹಿಡಿದು ನಗುತ ನಡೆದವನು, ದಣಿವೆನ್ನಿಸುವ ಸಮಯದಲ್ಲಿ ನಗುತ ಜಗದೆಲ್ಲ ಬವಣೆಗಳ ಹಂಗೇಕೆ ಎನ್ನುತ್ತಾ ನನ್ನೊಂದಿಗೆ ಸಾಗಿದ ಗೆಳೆಯಾ, ಪ್ರೀತಿಯ ಸಂದೇಶಗಳನ್ನು ಸದಾ ನಗುಮೊಗದಿಂದ ನೀಡುತ್ತಿದ್ದ ನೀನು ಇಂದು ನನಗೆ ನೆನಪಾದರೂ ನೀನು ನಿತ್ಯ ಅರಳಿ ನನ್ನೆದೆಯಲ್ಲಿ ಬಾಡದೇ ಉಳಿವ ಕುಸುಮ ನೀನು. ಪ್ರೀತಿಯ ಹಂದರದಲ್ಲಿ ಜಗವೆಲ್ಲ ಮರೆತು ನಮ್ಮ ಮನಗಳು ನಗುತಾ ಸಾಗುವ ಸವಿ ಘಳಿಗೆಯಲ್ಲಿ ನೀ ದೂರವಾದೆ, ನೀ ಪ್ರೀತಿಯ ಕನಸುಗಳನು ಉಳಿಸಿಯೇ ಹೋದೆ. ನೀ ಬರುವ ಘಳಿಗೆಗೆ ನಾ ಕಾಯುವುದು ಸಾದುವಲ್ಲ, ನೀ ಬಾರದಷ್ಟು ದೂರ ಕ್ರಮಿಸಿಯಾಗಿದೆ, ಆದರೆ ನಿನ್ನ ನೆನಪುಗಳ ಸವಿ ಭಾರವನ್ನು ನಾ ಇಳಿಸಲಾರಳಾದೆ, ಮನದಿಂದ ಹೊರ ನೂಕಲಾರಳಾದೆ, ಎಲ್ಲವೂ ನಿರ್ಮಲ ಪ್ರೀತಿಯ ಹಂದರದಲ್ಲಿ ಅರಳಿದ ಒಲವಿಗೆ ಸಾವಿಲ್ಲ, ನಿರ್ಮಲ ಪ್ರೇಮವು ಸದಾ ಉಕ್ಕುವ ಜಲದ ಸೆಲೆಯಂತೆ, ಅದು ನೀರಡಿಕೆ ಕರಿಗಿಸುವ ದಿವ್ಯಾ ಮೂಲವನ್ನು ಮನದ ದುಗುಡವನ್ನು ಮಾಯವಾಗಿಸುವ ಎಂದೂ ಮುಸುಕಾಗದ ನಿತ್ಯ ನಿರಂತ ಒಲವ ಸೆಲೆ ಗೆಳೆಯಾ. ಹಿಮಗಿರಿಯಲ್ಲಿ ಜಾರುವ ಹಿಮದ ರಾಶಿಯಂತೆ ಮೆತ್ತನೆ ಅರಳುವ ಅನುರಾದಲೆಗಳ ಜೊಂಪಲ್ಲಿ ನಗುತ ವಿರಮಿಸುವ ಆ ಘಳಿಗೆ ಮತ್ತೆ ಮತ್ತೆ ಕಾಡುತ್ತದೆ, ಬಿಸಿಲು ಧಗೆಯಲ್ಲು ಆ ಘಳಿಗೆಯನು ನೆನೆದರೆ ಮನಕ್ಕಂತೂ ತಣಿವು ನೀ ಇಲ್ಲದಿದ್ದರೂ ಜೊತೆಯಲ್ಲಿ, ಬೀಸುವ ಮರದೆಲೆಗಳ ಗಾನದಲ್ಲೂ ನೀ ನುಡಿವ ಗೀತೆಗಳ ಗುಣಗಾನದ ಮೊರೆತವನ್ನೇ ಆಲಿಸಿದಂತೆ ಕರ್ಣಗಳಿಗೇನೋ ತೃಪ್ತಿ, ಇರಲಿ ಸದಾ ಕಾಡುವ ನಿನ್ನ ನೆನಪು ನನ್ನ ಬಳಿ, ಇರಲೇಬೇಕೆಂಬ ಹಠವು ನನ್ನದು. ನಿನ್ನ ಧ್ಯಾನದಲ್ಲಿ ದಿನ ಕಳಿಯುವ ಮುನ್ನ ಮುಸ್ಸಂಜೆಯ ರಂಗಲ್ಲಿ ನೀ ಗುನುಗಿದ ಗೀತೆಯಂತೂ ನನಗೆ ಕಾಡುವುದು ನಿತ್ಯವಿಂದು ಸತ್ಯ ಗೆಳೆಯಾ. ಏನೇ ಆಗಲಿ ನೀನೊಂದು ಕಮರಿದ ಕನಸನ್ನು ಬಣ್ಣ ತುಂಬಿ ನಲಿಸುವ ಕಲೆಗಾರನಾಗಿದ್ದೆ, ರಂಗು ತುಂಬಿದ ಜಗದಲಿ ಒಲವ ಚಿತ್ತಾರ ಬಿಡಿಸುತ್ತಾ ಮನದ ಮನೆಯೆದುರು ಒಲವ ರಂಗೋಲಿ ನನ್ನ ಕೈಯಲ್ಲಿ ನಾ ಬಿಡಿಸುತ್ತಿದ್ದೆ, ನಾ ನಿನ್ನಲಿ ವಶವಾಗಿ, ಎಲ್ಲವೂ ನಿನದೇ ಮಾಯೇ. ಒಲವ ಸೆಲೆಯ ಕೃಪೆ. ನದಿ ದಂಡೆಯಲ್ಲಿ ಅರಳಿ ನಗುವ ಹೂಗಳಿಗೂ ನದಿ ಬತ್ತಿದಾಗ ನಗುವು ಉಳಿವುದೇ..? ಸರೋವರ ಸಾವರಿಸಿ ಬೀಸುವ ಗಾಳಿಯು, ಸರೋವರದಲ್ಲಿ ಬಿಸಿ ಧಗೆ ಉಕ್ಕಿದರೆ ತಣಿವುದೇನು..? ತಂಗಾಳಿಯು ಉಳಿವುದೇನು..? ಹಾಗೇಯೇ ನೀ ಇಲ್ಲದೇ ನಾನು ಉಳಿವೆಯೇನು..?
     ಏನೇ ಆಗಲಿ ನಿನಗೆ ನಾ ಕೊಟ್ಟ ಮಾತನ್ನು ಉಳಿಸಲೇಬೇಕಿದೆ, ಜಗದೆಲ್ಲ ಬವಣೆಗಳಿಗೆ ನಾನು ಬೆದರದೇ ನಗುತ ಸಾಗುವುದೇ ಅದು ನಿನಗೆ ನಾನು ಕೊಡುವ ಗೌರವ, ನಿನ್ನೊಲವ ಆರಾಧನೆಯ ಸಾರ್ಥಕತೆಯು ಗೆಳೆಯಾ. ಒಂದು ಹನಿ ಕಣ್ಣೀರು ಜಾರಿದರೆ ಅದುವೇ ಒಲವಿಗೆ ಅಳಿವು ಎಂದು ನೀ ನುಡಿದ ನುಡಿಗೆ ನಾ ಎಂದಿಗೂ ಬದ್ಧ, ಒಲವ ಪಾರಿವಾಳ ಮೌನವಾದರೂ ನಿನ್ನ ಪ್ರೀತಿ ತುಂಬಿದ ಮಾತುಗಳಲ್ಲಿ ಲೀನವಾದ ಈ ಮನಸು ಎಂದಿಗೂ ಧೈರ್ಯದಿಂದ ಜಗದ ನೋವುಗಳಿಗೆ ಬೆದರದೇ, ಜೀವನವನ್ನು ಗೆಲ್ಲುತ್ತಾ ನಾ ಸಾಗುತ್ತೇನೆ, ನಿನಗೆ ಕೊಟ್ಟ ವಚನವನ್ನು ಉಳಿಸಿಕೊಳ್ಳುವೆ ಗೆಳೆಯಾ..ನಿನ್ನ ಸಾವು ನಮ್ಮಿಬ್ಬರನ್ನು ದೂರಾಗಿಸಿದೆ, ವಿಧಿ ಮಾಡಿದ ಮೋಸವೇ ಇದು, ಏನೇ ಆಗಲಿ ನೀ ಕೊಟ್ಟ ಪ್ರೀತಿಯ ಸಂದೇಶ ಸದಾ ಜೊತೆಯಿದೆ, ಸುರಿವ ಬಿರುಮಳೆಗೂ ಕೊಚ್ಚಿ ಹೋಗದಷ್ಟು, ಗುಡುಗು ಮಿಂಚಿಗೂ ಬೆದರದಷ್ಟು ಗಟ್ಟಿಯದು, ಕಪ್ಪಿರುಳು ಸದ್ದಿನ ಭಯಕೂ ಅಂಜದೇ ದಾರಿತೋರಿಸುವ ದೀಪವದು, ಹಾಗಿರುವಾಗ ನಾನೇಕೆ ಒಂಟಿಯೆನ್ನಲಿ.. ಕಂಡಿತಾ ನಾ ಇನ್ನೆಂದಿಗೂ ರೋಧಿಸುವುದಿಲ್ಲ,  ಒಂದು ಹನಿ ಕಣ್ಣೀರನ್ನು ಸುರಿಸುವುದಿಲ್ಲ ಗೆಳೆಯಾ..
     “ನನ್ನ ಜೊತೆಯಲಿ ನೀನಿರದ ಜಗದಲ್ಲಿ ಒಂಟಿಯಲ್ಲ ನಾನು.. ನಿನ್ನ ನೆನಪುಗಳ ಜೊತೆಯಲ್ಲಿ ರಮಿಸುವ ನಿನ್ನ ಗೆಳತಿ ನಾನು..”

ರಾಮಚಂದ್ರ ಸಾಗರ್

Thursday, 15 December 2016

ಕಾತರತೆಯ ಕಾರ್ಮೋಡ ಕರಗಲಿ..

     ಶರಧಿ ಉಕ್ಕಿ ಒಮ್ಮೆಲೇ ತಡಿಯನು ಅಪ್ಪಿದಂತೆ, ಶರಧಿಗಾಗಿ ಹವಣಿಸುತ್ತಿದ್ದ ತಡಿಯು ಸಂತೃಪ್ತಿಯಲ್ಲಿ ಬೀಗಿದಂತೆ. ತುಂಬು ಚಂದಿರನ ಬೆಳುದಿಂಗಳು ಹರಸಿ ಹಾರೈಸುತಿರಲು, ಹೂಬನದ ದಾರಿಯಲ್ಲಿ ನಾನು ನೀನು ಕೈಹಿಡಿದು ಸಂಭ್ರಮಿಸುತಾ ಸಾಗುವಾಗ ಮೆಲುಗಾಳಿಗೆ ಬಾಗಿ ಬಾಗಿ ನೋಡುವ ಕುಸುಮಗಳು ನಮ್ಮನ್ನೇ ಹಾರೈಸಿದಂತೆ ಭಾಸವಾಗುತ್ತಿತ್ತು, ಪ್ರೀತಿಯ ಸವಿ ಮಳೆಯು ಮನದಲ್ಲಿ ಭೋರ್ಗರೆಯುತ ನಿನ್ನ ಕೈಹಿಡಿದು ನಾ ಸಾಗುತಿರಲು ಗೆಳತಿ ಅಂದು ಜಗದೆಲ್ಲ ಉನ್ನತ ಉಚ್ಛ ಶಿಖರವೇರಿದ ಸಂಭ್ರಮದಲ್ಲಿ ಮನ ತೇಲುತಿತ್ತು, ನಿನ್ನ ಕೆಣಕುವ ನಯನಗಳು ಸಾವಿರ ಕನಸುಗಳನ್ನು ಕಾಣಿಸುತ್ತಾ ನನ್ನ ಕೈ ಹಿಡಿದು ನಡೆಯುತಿದ್ದೆ. ಮನದಲ್ಲಿ ನೆನಪುಗಳ ಜಲಧಿಯು ಅಮಿತವಾಗುತಿರಲು ನೀನೊಂದು ಸುಮಧುರ ಭಾವನೆಗಳ ಕಣಜವಾಗಿ ಕಾಣುತಿದ್ದೆ. ತುಸು ನನ್ನ ನೋಡಿ ನೀ ನಕ್ಕರೆ ಮನದ ಆಯಾಸ ನೀ ಕರಗಿಸಿ ಬಿಡುತಿದ್ದೆ, ನಿನಗಾಗಿ ದಿನವಿಡಿ ಕಾದರೂ ಆಗ ನಿನ್ನ
ಕುಡಿ ನಗು ಎಲ್ಲವನ್ನು ಮಾಯವಾಗಿಸಿ ಬಿಡುತಿತ್ತು, ಎಲ್ಲವೂ ಗೆಳತಿ ನಿನ್ನ ನಗುಮೊಗದ ಮಾಯೆಯಾಗಿತ್ತು. ಪ್ರೀತಿಯ ಹೊನಲು ಹರಿಸುವ ನಿನ್ನ ನವಿರು ನಗುವ ಒಲವ ಶರಧಿಯೆಡೆ ನಾನು ನಿನ್ನೊಂದಿಗೆ ನಲಿಯುತಾ ಸಾಗಲು ಸಂಭ್ರಮಿಸುತಿತ್ತು. ತುಂಬು ಚಂದಿರನ ಮಹಿಮೆಗೆ ಉಕ್ಕುವ ಶರಧಿಯಂತೆ ಮನದಾಸೆಯು ಉಕ್ಕಿ ಬಾನೆತ್ತರ ಹರಡಿತ್ತು, ನಾ ನಿನ್ನ ಕೈ ಹಿಡಿದು ತಡಿಯ ಅಪ್ಪುವ ಶರಧಿಯನ್ನು ಕಣ್ಣು ತುಂಬಿಕೊಳ್ಳಬೇಕೆಂದು ಹಠ ಹಿಡಿದು ನೀನು ನನ್ನೊಂದಿಗೆ ಸಾಗುತಿದ್ದೆ. ದೂರದ ದಿಣ್ಣೆಯ ಮೇಲೆ ತಂಪಿರುಳಲಿ ನಿತ್ತು ಉಕ್ಕುವ ಶರಧಿಯ ನೋಡಿ ಬೆಳುದಿಂಗಳಲ್ಲಿ ಹೊಳೆವ ಅಲೆಗಳ ಬೆಳ್ಳಿಕಾಂತಿಗೆ ನಿನ್ನ ಮೊಗದ ಕಾಂತಿಯು
ಅರಳುತಿತ್ತು, ಜೊತೆಗೆ ನನ್ನೆದೆಯ ಕನಸು ಅರಳುತ್ತಿತ್ತು, ಎಲ್ಲವೂ ಚೆಲುವೆ ನಿನ್ನ ನಗು ಮೊಗದ ಮಾಯೆಯ ಫಲವಾಗಿತ್ತು, ನಿನ್ನ ಸಾಂಗತ್ಯದ ಸುಖದ ಫಲವಾಗಿತ್ತು, ನೀ ಜೊತೆಯಿರುವೆಯೆಂಬ ಜಂಬದ ಗತ್ತಾಗಿತ್ತು, ಏನೇ ಆಗಲಿ ಜಗದಲ್ಲಿನ ಸುಖವೆಲ್ಲಾ ನಮಗೆ ಒಲಿದಂತೆ, ತಂಪಿರುಳ ತಂಪಲ್ಲಿ ತಣಿಸುವ ತಂಗಾಳಿಯಲ್ಲಿ ನಲಿವ ಗುಲಾಬಿ ತೋಟದ ಕುಸುಮಗಳಿಗೂ ನಮ್ಮ ಸಂಭ್ರಮ ಕಂಡು ವಿಸ್ಮಿತ, ಕಡಲತಡಿಯ ಸಮೀಪದ ದಿಣ್ಣೆಗಳ ಮೇಲೆ ನಿತ್ತು, ತುಂಬು ಚಂದಿರನತ್ತಾ ನೋಡುತ್ತಾ, ಕಡಲಲೆಗಳ ಮೋರ್ಗರೆತಕೆ ಪುಟಿದೇಳುತ್ತಾ, ನಲಿವ ನಿನ್ನ ನಗುಧಾರೆಯ ಸೊಬಗಿನೆದುರು ನನ್ನ ಮನಕೆ ಸ್ವರ್ಗದ ಅನುಭೂತಿ. ಗೆಳತಿ ಈ ನಿನ್ನ ಸಂಗದಲ್ಲೇ ಹತ್ತಾರು ಜನುಮವೆಂದಿದ್ದರೂ ಅದು ಹೀಗೆ ನಿನ್ನೊಂದಿಗೆ ನಗುತ ಸಾಗಲಿ ಎಂದು ಮನ ಕೈ ಮುಗಿದು ಒಲವದೊರೆ ಚಂದಿರನಲ್ಲಿ ಬೇಡುತ್ತಿತ್ತು. ಓಡುವ ಮೋಡಗಳ ನಡುವೆ ಓಡುತ್ತಾ ಭುವಿಯಲ್ಲಿ ನಮ್ಮ ಮನದಲ್ಲಿ ಸಾವಿರ ಕನಸುಗಳ ನೂಕುತ್ತಾ ಹರಸುವ ನಿಸ್ವಾರ್ಥಿಯವನ ಪ್ರೀತಿಯು ನಮಗೇ ಹಾರೈಸಿದಂತೆ. ಮನದುಂಬಿ ನಲಿದು ಸಂತೃಪ್ತ ಮನದಲ್ಲಿ ಇನ್ನು ಮನೆಗೆ ಹೋಗೋಣವೆಂದು ನೀ ನುಡಿವಾಗ..ನನಗೆ ಹೀಗೇಕೆ ಎಂದು ಗೊಣಗುವ ಮನದ ಸದ್ದು ಜೋರಾಗುತ್ತಿತ್ತು. ಮೆತ್ತನೆ ನಿನ್ನೊಂದಿಗೆ ಆದಷ್ಟು ಮತ್ತನೆ ಸಾಗುತ್ತಿದ್ದೆ, ಬೇಗನೆ ಹೆಜ್ಜೆ ಹಾಕಿದರೆ ಊರು ಬಂದು ಬಿಟ್ಟಾತು, ನಮ್ಮ ಸಂಭ್ರಮ ನಡಿಗೆ ಮುಗಿದು ಬಿಟ್ಟರೆ ಮತ್ತೆ ಮತ್ತೆ ಕಾಯುವ ಮನಕೆ ಉತ್ತರ ನೀಡುವ ತಾಕತ್ತು, ಸಂತೈಸುವ ಧೈರ್ಯವಿಲ್ಲದೇ ಈ ಹಂದೆ ಮನಸು ಸಾಗುವ ದಾರಿ ಉದ್ದವಾಗಲಿ.. ಇನ್ನೂ ಉದ್ದವಾಗಲಿ..ಊರು ಇನ್ನೂ ಕಾಣದಿರಲಿ ಎಂದು ಹಪಹಪಿಸುತಿತ್ತು. ನಾನು ಬೇಕೆಂತಲೇ ನಿನಗೆ ದಾರಿಯ ಇಬ್ಬಗೆಯಲ್ಲಿ ಹೂ ಅರಳುತಿದೆ ನೋಡು ಗೆಳತಿ ಎನ್ನುತ್ತಿದ್ದೆ.. ನೀನು ಮುದ್ದಾಗಿ ನಗುತ್ತಾ ಆ ಘಳಿಗೆ ಇನ್ನೂ ಬಂದಿಲ್ಲವೆನ್ನುತ್ತಾ ಸಾಗುತ್ತಿದ್ದೆ. ಅರಳುವ ಹೂಮೊಗ್ಗೆ ತಂಗಾಳಿಗೆ ನಲಿವಾಗ ನಿನಗೆ ಮತ್ತೆ ಮತ್ತೆ ತೋರಿಸುತ್ತಾ ನೋಡು ಹೂವು ಅರಳುವುದು ತುಸು ನಿಲ್ಲೋಣವೇ ಗೆಳತಿ ಎನ್ನುತ್ತಿದ್ದೆ.. ನೀ ನಗುತಾ ನೋಡೋಣ ..ನೋಡುತ್ತಲೇ ಸಾಗುತ್ತಾ ಇರೋಣ.. ದಾರಿತುಂಬ ಹೂಗಳಿವೆ, ಎಂದು ನಕ್ಕು ಮೆತ್ತನೆ ಹಿಡಿದಿದ್ದ ಕೈಯನು ಬಿಗಿಯಾಗಿ ಒಮ್ಮೆ ಹಿಡಿದು ಕರೆದೊಯ್ಯುತ್ತಿದ್ದೆ, ನೀ ನಡೆಸುವ ಘಳಿಗೆಯು ರಾಜರಥದಲ್ಲಿ ನಾ ಸಾಗಿದಂದೆ, ನನ್ನೊಡನೆ ರಥದಲ್ಲಿ ನೀ ಕುಳಿತು ಬೀಗಿದಂತೆ ಅನುಭೂತಿ. ಮನಕ್ಕೊಲಿದ ಗೆಳತಿಯಿರಲು ಜೊತೆಯಲ್ಲಿ ಬಾಳೆಲ್ಲಾ ಹೋಗಂಧ ಬೆರೆದ ಜಗವಾಗಿರಲು ಮನಕ್ಕೆ ಕೊರಗೆಂಬುದು ಎಲ್ಲಿಯೂ ಎಳ್ಳಷ್ಟು ಕಾಡದೇ ನನ್ನ ಮನ ಸಂಭ್ರಮಿಸುತ್ತಿತ್ತು. ಊರು ಹತ್ತಿರ ಬಂದಾಗ ನಿನಗೆ ವಿಧಾಯವೇಳಲು ಮನ ರೋಧಿಸುತ್ತಾ ಇರಲು ನೀ ಕುಡಿ ನಗುವಿನಲ್ಲಿ ನನ್ನ ಕೆನ್ನೆಗೆ ಮುದ್ದಾಗಿ ಸ್ಪರ್ಷಿಸಿ ನಾ ಬರುವೆ ಎಂದಾಗ ನಾನು ನಿನ್ನ ನಗುಮೊಗವನ್ನು ಇನ್ನೊಮ್ಮೆ ಕಣ್ತುಂಬಿಕೊಂಡು ಬೀಳ್ಕೊಡುತಿದ್ದೆ.. ಬೀಳ್ಕೊಡುವಾಗ ತಪ್ಪದೇ ನೀಡುತ್ತಿದ್ದೆ ಹೂಬನದ ಸುಂದರ ಗುಲಾಬಿಯನ್ನು.. ನೀ ನುಡಿಯುತಿದ್ದೆ ಇದು ನೀ ಬರುವ ನಾಳೆವರೆಗೂ ನಗುವುದೆಂದು, ಅದೂ ಮುದ್ದು ಮುದ್ದಾಗಿ ನುಡಿಯುತಿದ್ದೆ ಗೆಳತೀ.. ಮರು ದಿನವಿಂದು ಮತ್ತೆ ನಿನ್ನ ಮಡಲಲ್ಲಿ ಸಂಭ್ರಮಿಸಲು ನಿನಗಾಗಿ ಬರೆದ ಹೊಸ ಒಲವಗೀತೆಯೊಂದಿಗೆ ಕಡಲತಡಿಯಲ್ಲಿ ಗುನುಗುತ್ತಿದ್ದೇನೆ..ಕಾರ್ಮೋಡ ಕರಗಿ ನಗುವ ಚಂದಿರ ಹೊರಬರಬೇಕು, ಜೊತೆಗೆ ನೀನು ಬಂದು ನನ್ನ ಕೈ ಹಿಡಿಯಬೇಕು.. ಬೇಗನೇ ಬಾ ಗೆಳತಿ..
ಜಪಿಸುತಿರುವೆ ಗೆಳತಿ ನಿನಗಾಗಿ
ನೀ ತರುವ ನಗುವಿಗಾಗಿ
ನಿನ್ನ ನಗುಮೊಗದ ಸಿರಿಗಾಗಿ...

ರಾಮಚಂದ್ರ ಸಾಗರ್


Thursday, 8 December 2016

ಆಗಮಿಸು ಗೆಳೆಯ..

ಪ್ರೀತಿಯ ಹುಡುಗ...
ಕಡಲತಡಿಯಲ್ಲಿ ಉಸುಕು ಗೋಪುರ ಕಟ್ಟುತ್ತಿದ್ದೇನೆ ಇಂದು ನಾನೊಬ್ಬಳೆ. ಅದೂ ಅಸಹಾಯಕಳಾಗಿ..!  ಅಂದು ಜೊತೆಯಲ್ಲಿ ನೀ ಕಟ್ಟಿದ ಗೋಪುರ ಅಲೆಗಳ ಉಬ್ಬರದಲ್ಲಿ ಕಳಚಿಹೋಗಿದೆ. ಗೋಪುರದ ಕುರುಹು ಕಾಣೆಯಾಗಿದೆ, ಜೊತೆಗೆ ನೀನು ಮರೆಯಾಗಿರುವೆ. ಆದರೆ ಇಂದು ಕಡಲತಡಿಯಲ್ಲೇನೋ ನಿನ್ನ  ಮಧುರ ನೆನಪುಗಳ ಅತಿಶಯ ನನ್ನ ಮನಕೆ ವಿಷವಾಗಿ ಕಾಡುತ್ತಿದೆ. ತಂಪಲೆಗಳ ಹಿತವಂತಿಕೆಯು ನನ್ನ ತ್ವಚೆಗೆ ಹಿತ ನೀಡುತ್ತಿಲ್ಲ. ನೀ ಕಾಣದ ಘಳಿಗೆ ಅವಿಶ್ರಾಂತ ಮನದಲ್ಲಿ ಒಂಟಿ ಎಂಬ ಕೊರಗಲ್ಲಿ ಸಂತೈಸುವ ನಿನ್ನ ಹಿತವಂತಿಕೆಯ ನಗುವಿಲ್ಲದೆ ನಾನು ನೀರಿಂದ ಹೊರಬಿದ್ದ ಮೀನಂತೆ ನನ್ನ ಜೀವವಾಗಿದೆ. ಈ ಮೃದು ಮಸಸ್ಸು ನೀನಿಲ್ಲದೆ ನೋವಲ್ಲಿ ಅವಿರತ ದುಃಖದ ಅಲೆಗೆ ತತ್ತರಿಸಿದೆ. ಆದರೂ ಉಸುಕಿನಲ್ಲಿ ಗೋಪುರ ಕಟ್ಟಿ ಅದರಲ್ಲಿ ನಿನ್ನ ನಗು ಕಾಣುವ ಹಂಬಲ ಅತಿಶಯವಾಗುತ್ತಿದೆ. ಮೌನಿ ನನ್ನ ಮಾತಾಡಿಸಲು ನಿನ್ನ ದನಿ ಇಂದೇಕೋ? ಆಸರೆಯಾಗಿಲ್ಲ. ಇರಲಿ, ನೀ ಬರಬಹುದು ಜೊತೆಗೆ ನಮ್ಮೊಲವ ಗೋಪುರಕ್ಕೂ ನೀ ಒಂದಾಗುವೆ ಎಂಬ ನಂಬಿಕೆ ಪ್ರತಿ ಉಸಿರೆಳೆತದಲ್ಲೂ ನುಡಿಯುತ್ತಿದೆ. ಆದೇನೇ ಆದರು ನಿನ್ನಾಗಮನವಿಲ್ಲದ ಈ ಸಂಜೆ ಸಾಗರದಲ್ಲಿ ಮುಳುಗಲು ರವಿಗೂ ಕೊರಗು! ಈ ಒಂಟಿ ಹುಡುಗಿಯ ನೋವು ರವಿಗೂ ಅಯ್ಯೋ ಎನಿಸುತಿದ್ದೆ. ಕಡಲಲೆಗಳ ಸದ್ದಿನ ಗಾನದಲ್ಲೂ ಹಿತವಿಲ್ಲ. ಅಲ್ಲೂ ಶೋಕಗೀತೆಯಂತೆ ಮೌನಾಚರಣೆ.  ಒಂಟಿ ಹುಡುಗಿಯ ನೋವಿಗೆ ಅದಕೂ ಬೇಸರ. ಆದರೂ ನೀ ದೂರ ಉಳಿದಿರಲೇನು ಕಾರಣ? ದೂರದಲ್ಲಿ ನೀ ಕೈಸನ್ನೆ ಮಾಡಿ ಬಂದಂತೆ ಕಾಡುವ ಬಿಂಬ ಒತ್ತಾಸೆಯಾಗಿ ನಿಲ್ಲುವ ನಿನ್ನ ನಗು ಇಂದೇಕೋ ಅವಿರತ ಕಾಡಿಸುತ್ತಿದೆ. ಜೊತೆಗೆ ನನ್ನ ಮೊಗದಲ್ಲೂ ನಗು ಕದ್ದಿರುವೆ ಗೆಳೆಯಾ..ಇದೆಲ್ಲಾ ಹೃದಯ ಕದ್ದ ನಿನ್ನದೇ ಕೃತ್ಯವು, ನಿನ್ನದೇ ಪಾರುಪತ್ಯವು. ಅಂದು ಕಡಲತಡಿಯಲ್ಲಿ ನನ್ನ ಹಾಡಿ ಹೊಗಳುತಿದ್ದ ನಿನ್ನ ದನಿ ಎಲ್ಲಿ..? ‘ಕಡಲತಡಿಯಲ್ಲಿ ನವಿರು ನಡಿಗೆಯಲ್ಲಿ ನಡೆವ ಚೆಲುವ ಬೊಂಬೆ’ ಎಂದು ನನ್ನ  ಕೊಂಡಾಡುತ್ತಿದ್ದ ಪೋರ ನೀ ಎಲ್ಲಿ ಮರೆಯಾದೆ..? ಸಂಪತ್ತಿನ ಅಂತಸ್ತಿಗೆ ಬೆಲೆ ನೀಡದ ಹುಡುಗಿ ನಾನು. ಮರು ಮಾತಿಲ್ಲದೇ ಬಂದು ಬಿಡು. ಬಂದವನೇ ನನ್ನ ಒಪ್ಪಿ ಅಪ್ಪಿ ಬಿಡು. ಅಂಜಿಕೆಯ ಬಿಟ್ಟು ಬೇಗನೇ ಆಗಮಿಸು.
ಆಸೆಗಳ ರಾಶಿಯಲ್ಲಿ ನನ್ನ ಮನಸು ಭಾರವಾಗಿದೆ. ಭಾರ ಇಳಿಸುವ ನಿನ್ನ ಸಾಂಗತ್ಯ, ನಿನ್ನ ತುಸು ನಗು, ಬಾಹು ಬಂಧನವಿಲ್ಲದೆ ನಾನು ಉರಿ ಬಿಸಿಲಲ್ಲಿ ಧಗೆಗೆ ಸೊರಗುವ ಹೂವಂತೆ  ಬಾಡುತ್ತಿದ್ದೇನೆ. ಬಾಡುವ ಮುಗ್ದ ಹುಡುಗಿಗೆ ನೀ ಬಂದು ಎಂದು ಸಂತೈಸುವೆ ಗೆಳೆಯ?..ನಾ ಕಣ್ಣಗಲಿಸಿ ನೋಡಿದಲ್ಲೆಲ್ಲಾ ನೀ ಕೈಸನ್ನೆ ಮಾಡಿ ನನ್ನ ಕರೆದಂತೆ! ನಿನ್ನ ಪ್ರೀತಿಯ ಮಾಯೆ ನನ್ನ ಬಾಳನ್ನೇ ಆವರಿಸಿ ಎಲ್ಲವೂ ಪ್ರೇಮದ ಕಡಲಿಗೆ ಮನ ಹಂಬಲಿಸಿದಂತೆ. ಕ್ಷಣ ಕ್ಷಣವೂ ನಿನ್ನದೇ ನಾಯ ನನ್ನೆದೆಯ ಗಾನವಾಗಿದೆ ಗೆಳೆಯ. ಅಂಜಿಕೆಯ ಬಿಟ್ಟು ಬೇಗನೇ ಆಗಮಿಸು...ನಿನ್ನೊಲವಿಗೆ ಪರಿತಪಿಸಿದ ಕೋಮಲೆಯ ಮನ ತಣಿಸು...