Thursday, 31 October 2024

ದೀಪಾವಳಿ...

 

ಎಲ್ಲಾ ಸಹೋದರ ಬಂಧುಗಳಿಗೂ ದೀಪಾವಳಿಯ ಶುಭಾಶಯಗಳು.

"ಬೆಳಕಿನ ಹಬ್ಬ ಎಲ್ಲರ ಬದುಕನ್ನು ಬೆಳಗಲಿ, ಅಂಧಕಾರ ಕರಗಿ ಹರುಷದ ದೀಪದ ಬೆಳಕಲ್ಲಿ ಸಂತಸ ಮೂಡಲಿ,  ಎಲ್ಲರ ಬದುಕಲ್ಲಿ ಕನುಸಗಳು ನನಸಾಗಿ ಒಲುಮೆಯ ಜಗವಾಗಲಿ" ಎನ್ನುವ ಆಶಯದೊಂದಿಗೆ ನಾ ಬರೆದ "ದೀಪಾವಳಿ" ಕವಿತೆಯನ್ನು ಪೋಸ್ಟ್‌ ಮಾಡುತ್ತಿದ್ದೇನೆ. ಎಲ್ಲರಿಗೂ ಮತ್ತೊಮ್ಮೆ ಬೆಳಕಿನ ಹಬ್ಬದ ಶುಭಾಶಯಗಳು.

ದೀಪಾವಳಿ...

ದಿಗಂತದ ತುದಿಯಲಿ

ಚಿಮ್ಮಿದಾ ಬೆಳಕಲಿ

ನವ್ಯತೆಯ ಭಾವದಲಿ

ಭವ್ಯತೆಯ ದೀಪಾವಳಿ....

ಎಲ್ಲರೆದೆಯ ಬೆಸುಗೆಯಲ್ಲಿ

ಸಹೋದರತ್ವ ಬಂಧದಲ್ಲಿ

ದೀನತೆಯ ಅಂತ್ಯದಲ್ಲಿ

ಹರುಷದಾ ದೀಪಾವಳಿ...

ಶ್ರಮದಾನದ ಕಾಯದಲ್ಲಿ

ಶ್ರಮದ ಹನಿಗಳ ನಗುವಿನಲ್ಲಿ

ನೊಂದ ದನಿಯ ಗೆಲುವಿನಲ್ಲಿ

ಚೈತನ್ಯದ ದೀಪಾವಳಿ..

ಬಡತನದ ಅಳಿವಿನಲ್ಲಿ

ಅಸಹಾಯಕರ ನಗುವಿನಲ್ಲಿ

ನಿಸ್ವರ‍್ಥ ಮನಗಳ ಅಕ್ಷಯದಲಿ

ಅಕ್ಷಯ ದೀಪಾವಳಿ...

ಜ್ಞಾನ ದೀವಟಿಗೆ ಬೆಳಗಿನಲ್ಲಿ

ಅಜ್ಞಾನ ಅಂಧಕಾರಗಳ ದಹನದಲ್ಲಿ

ಹೊಸ ಗುರಿಗಳ ಕನಸಿನಲ್ಲಿ

ಜ್ಞಾನದ ದೀಪಾವಳಿ...

ರಾಮಚಂದ್ರ ಸಾಗರ್

Sunday, 21 January 2024

ಶ್ರೀ ರಾಮ...

 

ಅಯೋಧ್ಯೆಯ ರಂಗದಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ಮುಹೂರ್ತದ ಶುಭದ ಘಳಿಗೆಗೆ ಧನ್ಯತೆಯಲ್ಲಿ ಕೈ ಮುಗಿದು ಪ್ರಾರ್ಥಿಸುತ್ತಾ ಈ ಅವಿಸ್ಮರಣೀಯ ಪಾವನ ಕಾರ್ಯವು ನಾಡಿಗೆ ಸಕಲ ಹೆಮ್ಮೆಯ ಸಂಗತಿಯಾಗಿದೆ.  ಸತ್ಯದ ಪಥದಲಿ ಮಿಥ್ಯದ ಜಗವ ಸೋಲಿಸಿದ ನನ್ನ ಮನದ ದೇವ ಶ್ರೀ ರಾಮನ ನೆನೆಯುತ್ತಾ ಈ ಕ್ಷಣದಲ್ಲಿ “ಶ್ರೀ ರಾಮ” ಕವಿತೆ ಬರೆದಿದ್ದೇನೆ. ಎಲ್ಲರೂ ಒಂದಾಗಿ ಶ್ರೀ ರಾಮನ ಪ್ರಾರ್ಥಿಸೋಣ ಬನ್ನಿ. ನಿಜ ರಾಮ ರಾಜ್ಯ ನಮ್ಮೆಲ್ಲರ ಗುರಿಯಾಗಲಿ. ಪ್ರೀತಿ, ಶಾಂತಿ, ಸ್ನೇಹ, ಸೌಹಾರ್ದತೆ, ಸಹಿಷ್ಣುತೆಗಳು ಎಲ್ಲರೆದೆಯ ಉಸಿರಾಗಲಿ. ಎಂದೆAದಿಗೂ ಸತ್ಯದ ಗುಡಿಯಲಿ ಆರಾಧನೆಗೆ ಅರ್ಹನು ನಮ್ಮೆಲ್ಲರ ಶ್ರೀ ರಾಮನೇ..


ಶ್ರೀ ರಾಮ...


ಸತ್ಯದ ಪಥದಲಿ ಜಗವ ಜಯಿಸಿದ ವೀರನೇ

ಸಭ್ಯತೆಯ ನಡೆಯಲಿ ಉದಯಿಸಿದ ಶೂರನೇ 

ಸಚ್ಚರಿತ ಮನದಲಿ ಸಂಭ್ರಮಿಸಿದ ಧೀರನೇ

ಸಜ್ಜನಿಕೆಯ ಸಿರಿತನದಲಿ ದೊರೆಯಾದ ದೇವನೇ 

ಶ್ರೀ ರಾಮ..


ಸದ್ಗತಿಯ ಮನಗಳಲಿ ಮಂದಿರವಾದವನೇ

ಸತ್ಕಾರದ ಭಾವನೆಗಳಲಿ ದೇವರಾದವನೇ

ಸಂಕಲ್ಪ ಕಾಯಕದಿ ಜಗಕೆ ಬೆಳಕಾದವನೇ

ಸಂಯಮದ ಸತ್ರದಲಿ ಸುಯೋಗವಾದವನೇ

ಶ್ರೀ ರಾಮ..


ಸದ್ಗುಣಗಳ ಗಗನದಲಿ ಶುಭದ ಮಳೆಯಾದವನೇ

ಸಂಪನ್ನ ಸತ್ವಗಳಲಿ ಧರಿತ್ರಿಯಲಿ ಹೆಸರಾದವನೇ

ಸಂಭಾವಿತರ ಸಖ್ಯದಲಿ ಸನ್ಮಾರ್ಗ ತೋರಿದವನೇ

ಸವಿನಯ ಪರಿವಾರದಲಿ ಸೌಜನ್ಯ ಮೆರೆದವನೇ

ಶ್ರೀ ರಾಮ..


ಸಹನೆಯಲಿ ಸಫಲತೆಯ ಸಂಕೀರ್ತನೆಯಾದವನೇ

ಸಹಿಷ್ಣುತೆಯ ಗುಣದಲಿ ಜಗಕೆ ಮುನ್ನುಡಿಯಾದವನೇ

ಶಾಂತಿ ದೇಗುಲದ ಶಾಂತೆಯ ಸಹೋದರನೇ

ಶಾಂತ ಸೌಧದ ಜಗಕೆ ಉಸಿರಾದವನೇ

ಶ್ರೀ ರಾಮ...

ರಚನೆ: ರಾಮಚಂದ್ರ ಸಾಗರ್


Monday, 15 January 2024

ಸಂಕ್ರಮಣವಾಗಲಿ..

 

ನನ್ನೆಲ್ಲಾ ಮುಖಪುಟದ ಸಹೋದರ ಬಂಧುಗಳಿಗೂ ಸಂಕ್ರಾಂತಿಯ ಶುಭಾಶಯಗಳು..ಈ ರ‍್ಷದ ಮೊದಲ ಹಬ್ಬ ಸಂಕ್ರಾಂತಿಯು ನಿಮ್ಮೆಲ್ಲರ ಬಾಳಲಿ ಪ್ರಗತಿಯನ್ನು ಸಿಂಚಿಸಿ, ಹೊಸತನವನ್ನು ಮೂಡಿಸಲೆಂದು ದೇವರಲ್ಲಿ ಪ್ರರ‍್ಥಿಸುತ್ತಾ...."ಸಂಕ್ರಮಣವಾಗಲಿ "ಕವಿತೆ ಪೋಸ್ಟ್ ಮಾಡುತ್ತಿರುವೆ..ಎಲ್ಲರಿಗೂ ಮತ್ತೊಮ್ಮೆ ಸಂಕ್ರಾಂತಿಯ ಶುಭಾಶಯಗಳು..

ಸಂಕ್ರಮಣವಾಗಲಿ..

ಎಳ್ಳು ಎಂಬ ಸ್ನೇಹವು
ಬೆಲ್ಲ ಎಂಬ ಪ್ರೀತಿಯು
ಮನ ಮನಗಳ ಬೆಸೆಯಲಿ
ಸಹೋದರತೆಯ ಬಂಧದಲಿ
ಈ ಸಮಯದೀ
ಸೌಹರ‍್ದ ಸಂಕ್ರಮಣವು ಸಂಭ್ರಮಿಸಲಿ..

ವಿರಸದ ಮನಸು ಮರೆಯಾಗಲಿ
ಕಹಿ ಘಳಿಗೆಯು ಕಾಡದಿರಲಿ
ವಿಮೋಹ ದುರಾಸೆ ದೂರಾಗಲಿ
ಈ ಸಮಯದೀ
ಸಂಪನ್ನ ಮನಗಳ ಸಂಕ್ರಮಣವಾಗಲಿ..

ದ್ವೇಷ ಅಸೂಯೆಗಳು ದೂರಾಗಲಿ
ಸ್ನೇಹ ಎಲ್ಲರೆದೆಯ ಗೂಡಾಗಲಿ
ಸಖ್ಯ ಸಮಾಗಮ ಚಿರಾಯುವಾಗಲಿ
ಈ ಸುಸಮಯದೀ
ಗೆಳೆತನದ ಸಂಕ್ರಮಣವಾಗಲಿ..

ವಿಘ್ನ ಬದುಕಲಿ ಬಾರದಿರಲಿ
ಸವೆ ಬಾಳಲಿ ಕಾಡದಿರಲಿ
ಬವಣೆ ಯಾರನು ಮುಟ್ಟದಿರಲಿ
ರೋಧನೆ ಯಾರಿಗೂ ತಟ್ಟದಿರಲಿ
ಈ ಸಮಯದೀ
ಸಂತಸದ ಸಂಕ್ರಮಣವಾಗಲಿ..

ಬಾಂಧವ್ಯಗಳು ಚಿಗುರೊಡೆಯಲಿ
ಬಂಧುರ ಜಗದ ವಿಕ್ರಮವಾಗಲಿ
ಇನನ ಹೊಳಪಿನಲಿ
ವಸುಂಧರೆಯ ಮಡಿಲು
ಈ ಸುಸಮಯದೀ
ಪ್ರೀತಿಯ ಸಂಕ್ರಮಣವಾಗಲಿ..

ರಚನೆ: ರಾಮಚಂದ್ರ ಸಾಗರ್

Saturday, 23 September 2023

ಸರ್ವ ಪೌರಕಾರ್ಮಿಕರಿಗೂ ಪೌರಕಾರ್ಮಿಕ ದಿನಾಚರಣೆಯ ಶುಭಾಶಯಗುಳು;

 

ಈ ಸುದಿನ ಸೆಪ್ಟಂಬರ್ ಮಾಹೆಯ ೨೩ನೇ ದಿನ ಪೌರಕಾರ್ಮಿಕರ ದಿನಾಚರಣೆ. ನಮ್ಮ ನಗರವನ್ನು ಶುಚಿತ್ವವಾಗಿಟ್ಟು ನಮ್ಮ ಆರೋಗ್ಯದ ರಕ್ಷೆಯಲ್ಲಿ ಸದಾ ನಿರತರಾಗಿ ನಗರ ಆರೋಗ್ಯದ ರಕ್ಷೆಗಾಗಿ ಸದಾ ಹೋರಾಡುವ ಯೋಧರಾಗಿ ಶ್ರಮಿಸುವ ಎಲ್ಲಾ ಪೌರಕಾರ್ಮಿಕರಿಗೆ ನನ್ನ ನಮನಗಳು.

ಇಡೀ ಊರಿನ ಜನರೆಲ್ಲ ಸವಿ ನಿದ್ರೆಯಲ್ಲಿ ಜಾರಿರುವ ಮುಂಜಾನೆಯ ಸಮಯದಲ್ಲಿ ಬೇಗನೇ ಎದ್ದು ಕರ್ತವ್ಯದ ಶ್ರದ್ಧೆಯೊಂದಿಗೆ ಎಲ್ಲರೂ ಕೈಜೋಡಿಸಿ ಊರಿನ ನೈರ್ಮಲೀಕರಣ, ನೀರು ಸರಬರಾಜು ಕಾರ್ಯಗಳಲ್ಲಿ ಮಗ್ನರಾಗಿ ನಮ್ಮೆಲ್ಲರ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಆ ಎಲ್ಲಾ ಕಾಯಕ ಚೇತನಗಳಿಗೆ ಈ ದಿನ ಗೌರವಿಸುವ ಸುಸಮಯ. ಬನ್ನಿ ಎಲ್ಲರೂ ಸೇರಿ ಅವರನ್ನು ತುಂಬು ಹೃದಯದಿಂದ ಗೌರವಿಸೋಣ. ಈ ದಿನವನ್ನು ನಮ್ಮ ಬಾಳಲ್ಲಿ ಅರ್ಥಪೂರ್ಣವಾಗಿಸೋಣ.

ಊರಿನ ಯಾವುದೇ ಸಮಸ್ಯೆಯಿರಲಿ ಮೊದಲು ನೆನಪಾಗುವುದು ನಮ್ಮೂರಿನ ಪೌರಸಭೆ. ಮನುಷ್ಯನ ಜನನದಿಂದ ಹಿಡಿದು ಆತನ ಮರಣದವರೆಗೂ ಇಲ್ಲಿನ ಸೇವೆಗಳು ಅಗತ್ಯ. ಜನನ ಪ್ರಮಾಣ, ಮರಣ ಪ್ರಮಾಣ ಪತ್ರಗಳೇ ಈಗ ಮನುಷ್ಯನ ಜನನ, ಅವಸಾನದ ದಾಖಲೆಗಳಾಗಿವೆ. ಊರಿನ ಯಾವುದೇ ಭಾಗದಲ್ಲಿ ಯಾವುದೇ ನೈರ್ಮಲೀಕರಣ ಸಮಸ್ಯೆ, ನೀರಿನ ಸಮಸ್ಯೆ, ರಸ್ತೆ, ಚರಂಡಿ, ಬೀದಿ ದೀಪ, ಸಾಂಕ್ರಾಮಿಕ ರೋಗಗಳ ಸಮಯದಲ್ಲಿ ಪೌರಸಭೆಗಳ ಪಾತ್ರ ಪ್ರಮುಖ. 

ಇತ್ತೀಚೆಗೆ ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಪೌರಸಭಾ ಸಿಬ್ಬಂದಿಗಳ ಸೇವೆ ಅನನ್ಯ. ಕೋವಿಡ್ ಸಮಯದಲ್ಲಿ ಎಷ್ಟೋ ಜನ ಅಸುನೀಗಿದಾಗ ಅವರ ವಾರಸುದಾರರು ಶವ ಸಂಸ್ಕಾರ ಮಾಡದೇ ಕೆಲವೊಮ್ಮೆ ಕೆಲವರು ಪಲಾಯನ ಮಾಡಿದ್ದುಂಟು.  ಆಸ್ತಿಗಾಗಿ ಬಡಿದಾಡುವವರು ಕೋವಿಡ್ ಹೆಮ್ಮಾರಿಗೆ ಬೆದರಿ ಉಸಿರಿನ ಸಂಬAಧಕ್ಕೆ ತಿಲಾಂಜಲಿ ಹೇಳಿದ್ದರು. ಅಂತಹ ಸಮಯದಲ್ಲಿ ಪೌರಸಭೆಗಳ ಕಾರ್ಮಿಕರು ಕೋವಿಡ್ ನಿಂದ ಮೃತಪಟ್ಟವರ ಶವÀ ಸಂಸ್ಕಾರ ಮಾಡಿ ಅಸುನೀಗಿದವರ ಆತ್ಮಕ್ಕೆ ಗೌರವಿಸಿದ್ದಾರೆ. ಕೋವಿಡ್ ಕಾಲಘಟ್ಟದಲ್ಲಿ ನಮ್ಮ ಅನೇಕ ಜನ ಕಾರ್ಮಿಕರು ತಮ್ಮ ನಿಸ್ವಾರ್ಥ ಸೇವೆಯಲ್ಲಿ ಬಲಿದಾನವಾಗಿದ್ದಾರೆ. ಅಂತವರೆಲ್ಲರ ಸೇವೆಯನ್ನು ಯಾವುದೇ ಪರಿಹಾರದ ಮೌಲ್ಯದಿಂದ ಅಳತೆಗೋಲಾಗಿಸಲು ಸಾಧ್ಯವೇ..? ಒಂದು ಕ್ಷಣ ಪೌರಕಾರ್ಮಿಕರಿಲ್ಲದ ನಿಮ್ಮ ಬದುಕು, ನಗರವನ್ನು ಕಲ್ಪಿಸಿಕೊಳ್ಳಿ. ಮನಸಾರೆ ಎಲ್ಲವನ್ನು ಅವಲೋಖಿಸಿದಾಗ ಮಾತ್ರವೇ ನೈಜತೆಯ ಮೌಲ್ಯ ಅರ್ಥವಾಗುತ್ತದೆ. ಇನ್ನೊಬ್ಬರ ಶ್ರಮಹ ಹನಿಗಳ ಮೌಲ್ಯ ಅರಿವಾಗುತ್ತದೆ.

ಸುಂದರ ನಗರಕ್ಕೆ ಅರ್ಪಿತವಾಗುವ ಪ್ರಶಸ್ತಿ, ಪ್ರಶಂಸೆಗಳು ಕಾರ್ಮಿಕರ ಕೈಗೆ ಪ್ರಧಾನವಾದರೆ ಉತ್ತಮ. ಕಾರ್ಮಿಕರು ಶ್ರಮದಾನ ಮಾಡಿ ದುಡಿದ ಕಾರ್ಯವನ್ನು ತಮ್ಮ ಕಾರ್ಯವೆಂದು ಹೆಮ್ಮೆಪಡುವವರು, ಹಾರಹಾಕಿಸಿಕೊಳ್ಳುವವರು ಕಡಿಮೆಯಾಗಬೇಕು. ಎಲ್ಲವೂ ಸಾಧ್ಯವಾಗಿದ್ದು ಪೌರಕಾರ್ಮಿಕ ನಿಷ್ಠೆಯಿಂದ ಎನ್ನುವುದನ್ನು ಅವರನ್ನು ದುಡಿಸಿಕೊಳ್ಳುವವರು ಅರ್ಥೈಸಿಕೊಳ್ಳಬೇಕು. ಅವರಿಗೆ ಸರಿಯಾದ ಕಾಲದಲ್ಲಿ ಉತ್ತಮ ಆರೋಗ್ಯ ತಪಾಸಣೆ, ಭವಿಷ್ಯನಿಧಿ, ವಿಮೆಯ ಸೌಲಭ್ಯಗಳು ದೊರೆಯುವಂತೆ ನೋಡುವುದು ಅವರಿಂದ ಕೆಲಸ ತೆಗೆದುಕೊಳ್ಳುವವರ ಮತ್ತು ಅವರಿಗೆ ಕೆಲಸ ಹೇಳುವವರ ಜವಬ್ದಾರಿ ಎನ್ನುವದನ್ನು ಸಹಾ ಅಧಿಕಾರ ನಡೆಸುವವರಿಗೆ ಅರ್ಥವಾಗಬೇಕು. ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಕಾಯ್ದೆ, ನಿಯಮಗಳ ನಿಬಂಧನೆಗಳಿವೆ. ಅವೆಲ್ಲವೂ ಕೂಡ ಪಾರದರ್ಶಕವಾಗಿ ಜಾರಿಮಾಡುವುದು ಕಾರ್ಮಿಕರನ್ನು ದುಡಿಸಿಕೊಳ್ಳುವವರು ಕೆಲಸ. ಜೊತೆಗೆ ಪೌರಕಾರ್ಮಿಕರ ಸೇವೆ ಪಡೆಯುವ ಪ್ರತೀ ನಾಗರೀಕನ ಜವಬ್ದಾರಿಯೂ ಹೌದು ಎನ್ನುತ್ತಾ..ಈ ದಿನ ಪೌರಕಾರ್ಮಿಕರ ದಿನಾಚರಣೆ. ಅವರನ್ನು ಗೌರವಿಸುವ ಸುದಿನ. ಊರಿನ ಎಲ್ಲರೂ ಸಹಾ ಶ್ರಮದ ಜೀವಿಗಳಾದ ಪೌರಕಾರ್ಮಿಕರಿಗೆೆ ಒಂದಾಗಿ ಗೌರವಿಸಿ ಅಭಿನಂದಿಸೋಣ ಅಕ್ಕೆಯಿಂದ ಬನ್ನಿ..

ರಾಮಚಂದ್ರ ಸಾಗರ್