ಈ ದಿವಸ ಜಗತ್ತು ಕಂಡ ಮಹಾನ್ ಮಾನವತಾವಾದಿ, ಸುಜ್ಞಾನದ ಸಾಗರ, ಸಮಾಜಮುಖಿ ಚಿಂತನೆಯ ಹರಿಕಾರ, ಜ್ಷಾನದ ಬೆಳಕಿನ ಸೂರ್ಯ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 135 ನೇ ಜಯಂತೋತ್ಸವ. ಈ ಸುದಿನ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗಾಗಿ ಧಾರೆಯೆರೆದ ಜ್ಞಾನದ ಬೆಳಕನ್ನು ಸಮಾಜದ ಸರ್ವತೋಮುಖ ಶ್ರೇಯಕ್ಕಾಗಿ ನಿತ್ಯವೂ ಸಶಕ್ತವಾಗಿ ಬಳಸಿಕೊಳ್ಳಲು ಪಣತೊಡುತ್ತೇವೆ ಎನ್ನುವ ಆಶಯದೊಂದಿಗೆ ಎಲ್ಲರಿಗೂ ಶ್ರೀಯುತರ 132ನೇ ಜಯಂತೋತ್ಸವದ ಶುಭಾಶಯಗಳನ್ನು ಕೋರುತ್ತಾ ನಾ ಬರೆದ "ಮಹಾನಾಯಕ" ಕವಿತೆಯನ್ನು ಪೋಸ್ಟ್ ಮಾಡುತ್ತಿರುವೆ..
ವಂದನೆಗಳೊಂದಿಗೆ...
ಮಹಾನಾಯಕ
ಜಾತಿ ಧರ್ಮಗಳ ಸಂಕೋಲೆಯನು
ವಿಮುಕ್ತಿಗೊಳಿಸಿದ ಮಹಾನಾಯಕನು
ವರ್ಣ ದ್ವೇಷಗಳ ಜ್ವಾಲೆಯನು
ಆರಿಸಿದ ದಿವ್ಯ ಯೋಗಿಯು..
ಸಂವಿಧಾನ ರಚಿಸಿದ ಶಿಲ್ಪಿಯು
ಭವ್ಯ ದೇಶ ಬೆಳಗಿದ ಕಿಡಿಯು
ದೀನ ದಲಿತರ ದೀವಟಿಗೆಯು
ಶ್ರಮಿಕ ಕಾಯಕೆ ಸ್ಪೂರ್ತಿಯು..
ಶಿಕ್ಷಣ ಜ್ಞಾನವು ಬೆಳಕೆಂದರು
ಬವಣೆಗಳ ಪರಿಹರಿಸಿಕೊಳ್ಳಲು
ಸಂಘಟನೆಯೆ ಪರಿಹಾರವೆಂದರು
ಒಂದಾಗಿ ನಡೆವುದೆ ಬಾಳೆಂದರು..
ಮಾನವೀಯತೆ ಸಹಬಾಳ್ವೆ
ಪ್ರೀತಿ ವಿಶ್ವಾಸಗಳನು ಆರಾಧಿಸೆಂದರು
ಬೇದವೆಣಿಸದ ಕುಲಕೇಳದ ನಾಡು
ಎಲ್ಲರೆದೆಯ ಗುರಿಯಾಗಲೆಂದರು...
ದಾರಿದ್ರ್ಯ ಬಡತನ ಕೊನೆಯಾಗಿಸಲು
ಜೀವಮಾನವನು ಸವೆಸಿದರು
ಜೀವದುಸಿರಿನ ಕೊನೆವರೆಗು
ಬುದ್ಧ ನುಡಿಯನು ನುಡಿದವರು..
ಜಗದ ಇತಿಹಾಸ ಪುಟದಲಿ
ಪದಗಳಿಗೆ ಸೀಮಿತಗೊಳ್ಳದ ಮಹಾನಾಯಕನು
ನಮ್ಮೆಲ್ಲರ ಹೃದಯದಲ್ಲಿ
ನಿತ್ಯ ಬೆಳಗುವ ದೇವನು...
ರಚನೆ: ರಾಮಚಂದ್ರ ಸಾಗರ್