ಎಲ್ಲಾ ಸಹೋದರ ಬಂಧುಗಳಿಗೂ ಯುಗಾದಿಯ ಶುಭಾಶಯಗಳು. ಚಂದ್ರಮಾನ ಯುಗಾದಿಯು ಎಲ್ಲರ ಬಾಳಲ್ಲೂ ಆರೋಗ್ಯ, ನಗು, ಸಂಪತ್ತು, ಪ್ರೀತಿ,
ಸ್ನೇಹ, ಸಹಬಾಳ್ವೆಯನ್ನು ಕರುಣಿಸಲಿ..
ಸಮಾಜ ಎನ್ನುವುದು
ಒಂದು ಸುಂದರ ಹೂಗಿಡ. ಆ ಗಿಡಕ್ಕೆ ಹಾನಿಮಾಡುವ ಎಲ್ಲಾ ಬಗೆಯ ಕೀಟಗಳು, ರೋಗಗಳು, ದುಷ್ಟ, ವಿಕೃತ ಮನಸ್ಸಗಳು
ಇನ್ನು ಮುಂಬರುವ ದಿನಗಳಲ್ಲಿ ಮರೆಯಾಗಲಿ ಆ ಹೂಗಿಡವು ಚೆಲುವನ್ನು ಕಂಗೊಳಿಸುತ್ತಾ ಸುಂದರವಾದ ಚೆಲುವನ್ನು
ಬೀರುತ್ತಾ ಸಮೃದ್ಧ ಹಾಗೂ ಸಂಪ್ರೀತಿಯ ಸಮಾಜವು ನಮ್ಮೆಲ್ಲರದಾಗಲಿ ಮುಂಬರುವ ವರ್ಷದುದ್ದಕ್ಕೂ ಎಲ್ಲರ
ಕಣ್ಣಲ್ಲೂ ಸ್ನೇಹ, ಸಹಬಾಳ್ವೆ, ಪ್ರೀತಿ, ವಿಶ್ವಾಸಗಳು ಸದಾ ಅರಳುತ್ತಾ ಅಲೆಯಾಗಿ ನೆಲೆಯಾಗಲಿ ಆದಷ್ಟು ಬೇಗನೇ ಈಗ ಕೂಡಿ ಬಂದಿರುವ ಸಕಾಲದಲ್ಲಿ
ವಿಕೃತ ಮನಸ್ಸುಗಳು ದಹನವಾಗಲಿ ಎಂದು ಆಶಿಸಿ ಯುಗಾದಿ ಕವಿತೆಯನ್ನು ಪೋಸ್ಟ್ ಮಾಡುತ್ತಿರುವೆ...ಎಲ್ಲರಿಗು ಯುಗಾದಿಯ ಹೊಸ ಹರುಷದ
ಸ್ವಾಗತವನ್ನು ಕೋರುತ್ತಾ ಮತ್ತೊಮ್ಮೆ ಎಲ್ಲಾ ಸಚ್ಚರಿತ ಮನಸ್ಸುಗಳಿಗೆ ಶುಭಾಶಯಗಳು..
ಯುಗಾದಿ..
ಕಹಿಯ ಬವಣೆ ಕರಗಲು
ಸಿಹಿಯ ಬದಕು ಅರಳಲು
ಮನ ಮನಗಳಲಿ ಯುಗಾದಿ
ಹಚ್ಚಬೇಕಿದೆ ಹೊಸ ದೀವಟಿ..
ಚೈತ್ರಮಾಸದ ಹೊಸದಿನ
ಕರೆತರಲಿ ಹೊಸತನ
ಎಲ್ಲರೆದೆಯ ಬೆಳಗಲು
ಉದಯಿಸಲಿ ಬಂಧುತ್ವ...
ರವಿ ಚಂದ್ರರ ಗತಿಯಲ್ಲಿ
ಬಾನು ಭುವಿಯ ಪರಿಧಿಯಲ್ಲಿ
ಬದಲಾಗುವ ಘಳಿಗೆಯಲ್ಲಿ
ಮರೆಯಾಗಲಿ ಮತ್ಸರ
ಯುಗಾದಿ ತರಲಿ ಸಂತಸ ...
ಅರೆ ನಿಮಿಷವಾದರು
ಅನ್ಯರ ಮನ ನೋಯಿಸದಿರು
ಕಹಿಯ ಮನಸು ದಹಿಸಿ
ಸಿಹಿಯ ಮನಸು ಅರಳಿಸಿ
ಹರುಷದ ಗೂಡಾಗು..
ಹರಕುಬಾಯಿ ಮೂಕವಾಗಲಿ
ವಿಕೃತ ಮನಸ್ಸು ದಹನವಾಗಲಿ
ಸಜ್ಜನನು ನಾಯಕನಾಗಲಿ
ಸಹಿಷ್ಣುತೆ ಮೆರೆದಾಡಲಿ..
ವರುಷದ ಆಯುಷ್ಯ
ಕರಗದಿರಲಿ ವ್ಯರ್ಥ
ಅಂತ್ಯವಾಗುವ ಮುನ್ನ
ಬೆಳಗುವ ದೀಪವಾಗು
ಸಿಹಿಯಾದಿಯಾಗಲಿ ತನು ಮನ...
ರಚನೆ: ರಾಮಚಂದ್ರ ಸಾಗರ್