ಧನ್ಯಾ ಬೆಂಗಳೂರಿನಲ್ಲಿ ಸಾಫ್ಟೆವೇರ್ ಕಂಪನಿಯೊಂದರಲ್ಲಿ ಈಗ ಕೆಲಸಮಾಡುತ್ತಿದ್ದಾಳೆ. ಬಹಳ ಬುದ್ಧಿವಂತೆ, ಅಷ್ಟೇ ನಯವಂತೆ, ಪಾರಂಗತ ಚೆಲುವೆ. ಇವಳ ಊರು ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ ಬಳಿಯ ಸುರಭಿಪುರ. ಇವಳೇ ಈ ಕಥೆಯ ನಾಯಕಿ. ಈಕೆ ಓದಿದ್ದು ಪಿ.ಯು.ಸಿವರೆಗೆ ಸಾಗರದಲ್ಲಿ. ಆ ನಂತರ ತನ್ನಿಚ್ಚೆಯಂತೆ ಕಂಪ್ಯೂಟರ್ ಸೈನ್ಸ್ನಲ್ಲಿ ಇಂಜಿನೀಯರಿಂಗ್ ಮುಗಿಸಿದ್ದು ಶಿವಮೊಗ್ಗದ ಪ್ರತಿಷ್ಟಿತ ಇಂಜಿನೀಯರಿಂಗ್ ಕಾಲೇಜಿನಲ್ಲಿ. ಈಗ ಈಕೆಗೆ ಸುಮಾರು ಮೂವತ್ತು ವರ್ಷ. ಮನೆಯಲ್ಲಿ ಎಲ್ಲರಿಗೂ ಈಕೆಗೆ ಮದುವೆ ಮಾಡಬೇಕೆನ್ನುವಾಸೆ. ಆದರೆ ಧನ್ಯಾ ಮಾತ್ರ ಒಪ್ಪದೇ ಹಾಗೇ ತನ್ನ ಹೃದಯದ ದನಿಗೆ ಮನಸ್ಸು ಗಟ್ಟಿಗೊಳಿಸಿ ಜೀವನದಲ್ಲಿ ಅಂದುಕೊಂಡ ಕನಸು ನನಸಾಗುತ್ತದೆ ಎನ್ನುತ್ತಾ ನಿತ್ಯವೂ ಲಕ್ಷಣನಿಗಾಗಿ ಕಾದ ಊರ್ಮಿಳೆಯಂತೆ ತನ್ನ ಬಾಳಿಗೆ ಹೂ ಮುಡಿಸಿದ ವಿನಯನಿಗಾಗಿ ಕಾಯುತ್ತಾ ದಿನ ದೂಡುತ್ತಿದ್ದಾಳೆ..ನೆನಪುಗಳ ಸುಳಿಯಲ್ಲಿ ಬಂಧಿಯಾಗಿ ನರಳುತ್ತಿರುವ ಕೋಮಲೆಯಾಗಿದ್ದಾಳೆ.
ಧನ್ಯಾ ನಗುತಾ ತುಸು ಹೆಜ್ಜೆ ಹಾಕಿ ಸುರುಭೀಪುರದ ಹಾದಿಯಲ್ಲಿ ಸಾಗಿದರೆ ಹಾದಿಯ ಎರಡೂ ಬದಿಯ ಹಸಿರು ಸಿರಿಯ ಇಕ್ಕೆಲದಲ್ಲಿ ಅರಳಿ ತಂಗಾಳಿಗೆ ನಗುತ ನಲಿವ ಹೂಲತೆಗೂ ಇವಳಂದಕೆ ವಿಸ್ಮಿತವಾದಭಾವ. ಎಂತಹ ಚೆಲುವೆ ಎಂದು ಮನದಲ್ಲಿ ಹೂಲತೆಗಳು ರೋದಿಸಿದ ಭಾಸ, ತುಸುವೂ ಸಪ್ಪಳವಿಲ್ಲದ ವೇಳೆಯಲ್ಲಿ ಈಕೆ ಮೆಲು ದನಿಯಲಿ ನಕ್ಕರೆ ಮಧುರ ದನಿಯೇ ಅಲೆ ಅಲೆಯಾಗಿ ಬೀಸಿದಂತೆ, ಅನುರಾಗದ ಸಾಗರವೇ ಉದಿಸಿದಂತೆ. ಈಕೆ ದೇವಗುಡಿಯ ಮುಂದೆ ಹೂಬುಟ್ಟಿ ಹಿಡಿದು ದುಂಡು ಮಲ್ಲಿಗೆಯ ಮುಡಿದು ನಗುತ ಬಂದರೆ ಚೆಲುವ ದೇವತೆಯೇ ಭುವಿಗಿಳಿದು ಬಂದಂತೆ..ದೇವಗುಡಿಯ ಮುಂದೆ ಮೇಳೈಸಿದ ಚೆಲುವ ದೇವತೆಯಂತೆ.
ತನ್ನ ಇಂಪಾದ ಕಂಠ ಸಿರಿಯಲ್ಲಿ ಪದಗಳ ಗುನುಗಿ ಹಾಡಾಗಿಸಿದರೆ ಎಂತಹ ನೋವನ್ನು ಕರಗಿಸಿ ಮನ ನಲಿಸಿ ಸಂಭ್ರಮಿಸುವ ಪಾರಂಗತೆ ಈ ಧನ್ಯಾ. ಇನ್ನೂ ನೃತ್ಯದಲ್ಲಿ ಭರತ ನಾಟ್ಯವೆಂದರೆ ಈಕೆಗೆ ಬಹಳ ಅಚ್ಚುಮೆಚ್ಚು, ಹತ್ತಿರದಲ್ಲೇ ಇರುವ ಹೊನ್ನೆಮರಡು ನದಿ ತೀರದಲ್ಲಿ ಹೋಗಿ ಮುಸ್ಸಂಜೆಯಲ್ಲಿ ಹೆಜ್ಜೆಹಾಕಿದರೆ ಇವಳ ಹೆಜ್ಜೆಗಳ ಮೋಡಿಗೆ ಮುಸ್ಸಂಜೆಯಲ್ಲಿ ನದಿಯ ಕಿನಾರೆಯು ಇನ್ನಷ್ಟು ರಂಗೇರಿ ಹೊನ್ನೆ ಬಂಡೆಗಳಿಗೂ ಸಂತೃಪ್ತಿಯ ಪುಳಕವು ಲಭಿಸಿದಂತ ಅನುಭೂತಿಯು..
ಇಂತಹ ಕೋಮಲೆಯು ಈ ನನ್ನ ಕಥೆಯ ಕಥಾ ನಾಯಕಿ ಧನ್ಯಾ..
ಇನ್ನೂ ಈ ಕಥೆಯ ಕಥಾ ನಾಯಕನೂ ಇದೇ ಊರಿನವನು, ಹೆಸರು, ವಿನಯ್, ಬಹಳ ಸೌಮ್ಯದ ಸ್ವಭಾವದವನು. ಈತನೂ ಧನ್ಯಾಳೊಂದಿಗೆ ಬಾಲ್ಯದಿಂದಲೇ ಜೊತೆಯಲ್ಲಿ ಆಡಿ ಬೆಳೆದವನು. ಆತ್ಮೀಯ ಸ್ನೇಹಿತ, ಕಾಲೇಜಿನಲ್ಲಿ ಪಿ.ಯು.ಸಿವರೆಗೂ ಧನ್ಯಾಳೊಂದಿಗೆ ಒಟ್ಟಿಗೇ ಓದಿದವನು. ನಂತರ ಧನ್ಯಾ ಶಿವಮೊಗ್ಗಕ್ಕೆ ಇಂಜಿನೀಯರಿಂಗ್ ಹೋದಲು ಹೋಗುತ್ತಾಳೆ. ಆದರೆ ವಿನಯನಿಗೆ ಮನೆಯಲ್ಲಿದ್ದ ಪರಿಸ್ಥಿತಿಗೆ ಓದನ್ನು ಅನಿವಾರ್ಯವಾಗಿ ಮುಂದುವರೆಸಲು ಆಗುವುದೇ ಇಲ್ಲ. ವಿಧಿಯಿಲ್ಲದೇ ಓದನ್ನು ನಿಲ್ಲಿಸಿ ಮನೆಯಲ್ಲೇ ಉಳಿಯುತ್ತಾನೆ..ಈಗ ಎಲ್ಲಿದ್ದಾನೆ? ಏನು ಮಾಡುತ್ತಾನೆ? ಮುಂದೆ ಕಥೆಯಲ್ಲಿ ಹೇಳುವೆ..
ಚಿನ್ಮಯ್-ಧನ್ಯಾಳ ಅಣ್ಣಾ. ಅನಂತ್ ರಾಮ್ ಧನ್ಯಾಳ ತಂದೆ. ಸುಮಿತ್ರಾ ಧನ್ಯಾಳ ತಾಯಿ. ಆರಭಿ-ಧನ್ಯಾಳ ಸ್ನೇಹಿತೆ. ಸುನಿಧಿ-ಧನ್ಯಾಳ ಇನ್ನೊಬ್ಬಳು ಸ್ನೇಹಿತೆ..ಇನ್ನೂ ಕೆಲವು ಪಾತ್ರಗಳನ್ನು ಸಂದರ್ಭಕ್ಕೆ ತಕ್ಕಂತೆ ಪರಿಚಯಿಸುವೆ..
ಈಗ ಶನಿವಾರ ಮತ್ತು ಭಾನುವಾರ ಈಕೆಗೆ ವಾರಾಂತ್ಯದ ರಜೆ. ಈ ಎರಡು ದಿವಸಗಳನ್ನು ಕಳೆಯಲು ಬೆಂಗಳೂರು-ತಾಳಗುಪ್ಪ ರೈಲಿನಲ್ಲಿ ಶುಕ್ರವಾರ ರಾತ್ರಿ ಬಂದವಳು, ಮತ್ತೆ ಭಾನುವಾರ ರಾತ್ರಿ ಅದೇ ರೈಲಿನಲ್ಲಿ ಹೊರಟು ಸೋಮವಾರ ಬೆಳಿಗ್ಗೆ ಬೆಂಗಳೂರು ಸೇರುತ್ತಾಳೆ. ಹೀಗೆ ಊರಿಗೆ ಬಂದವಳು ಈಗ ಎರಡು ದಿನಗಳನ್ನು ಮನೆಯಲ್ಲಿ ಎಲ್ಲರೊಂದಿಗೆ ಕಳೆದಿದ್ದಾಳೆ.
ಸುರಭಿಪುರದ ಹಾದಿಯಲ್ಲಿ ಓಡಾಡಿ ತನ್ನ ಹಳೆಯ ನೆನಪುಗಳನ್ನು ಮತ್ತೆ ಮತ್ತೆ ನೆನೆದು ಕಾಡುವ ನೆನಪುಗಳನ್ನು ಎದೆಗಟ್ಟಿಕೊಂಡಿದ್ದಾಳೆ. ದನಿಸುವ ಎದೆಯ ಪದಗಳಿಗೆ ಉತ್ತರ ಅರಸುತ್ತಾ ಹಾದಿಯ ಇಕ್ಕೆಲದ ಹಸಿರು ಸಿರಿಯಲ್ಲಿ ಅರಳಿದ ಹೂಗಳ ಲಾಲಿತ್ಯಕ್ಕೂ ಮನದ ಭಾವವು ನಲಿಯದೇ ಸೊರಗಿದ ಮೊಗದಲ್ಲೇ ಮನೆಗೆ ಹಿಂತಿರುಗಿದ್ದಾಳೆ..ಅಂತೂ ಈಗ ಊರಿನಲ್ಲಿ ಎರಡು ದಿನಗಳು ಕಳೆದು ಮತ್ತೆ ಕೆಲಸಕ್ಕೆಂದು ಬೆಂಗಳೂರಿನತ್ತು ಪ್ರಯಾಣಕ್ಕೆ ಸಿದ್ದವಾಗಿದ್ದಾಳೆ. ಕೆಲಸಕ್ಕೆ ಎನ್ನುವುದಕ್ಕಿಂತ ಮನದ ನೋವನ್ನು ಮತ್ತೆ ಮತ್ತೆ ಕೆಣಕಿ ಕಾಡುವ ಪ್ರೀತಿಯ ಸೆಲೆಯನ್ನು ಒತ್ತಡದ ಕೆಲಸದಲ್ಲಿ ತಲ್ಲೀನವಾಗಿ ಎಲ್ಲವನ್ನು ಮರೆಯಲೇಬೇಕೆನ್ನುವ ಹಠ..ಒಟ್ಟಾರೆ ಅದೇ ಹಠವನ್ನೇ ಹೊದ್ದು ಭಾರವಾದ ಮನದಲ್ಲಿ ಸಾಗುತ್ತಿರುವ ಚೆಲುವ ಕನ್ನಿಕೆಯಾಗಿ ಉಳಿದಿದ್ದಾಳೆ, ಸಿಗದ ಪ್ರೀತಿಗಾಗಿ ನಿತ್ಯ ಹಂಬಲಿಸುವ ತಪಸ್ವಿನಿಯಾಗಿದ್ದಾಳೆ.
ಕಾಣದ ಕಡಲನು ಹಂಬಲಿಸಿ ಓಡುವ ನದಿಯಂತೆ ಧನ್ಯಾಳ ಹೃದಯವಂತೂ ನಿತ್ಯವೂ ವಿನಯನಿಗಾಗಿ ದನಿಸಯುತಿದೆ.. ಈ ಹುಡುಗಿಯ ಹೃದಯದ ದನಿಯೇ ವಿನಯ್ ಆಗಿ ಹೋಗಿದ್ದಾನೆ..ಬಾಳಿಗೆ ಜೊತೆಯಾಗಿ ಮುನ್ನಡೆಸುವವನೂ ಎನ್ನುವವನು ಏನಾದರೂ ಈ ಬಾಳಿಗೆ ಬಂದರೆ ಅದು ವಿನಯ್ ಮಾತ್ರವೇ ಎಂದು ಧನ್ಯಾ ಶಪತಮಾಡಿಯಾಗಿದೆ.. ಇನ್ನೇನಿದ್ದರೂ ಆ ದೇವನಿಚ್ಚೆ! ಏನೋ ಎಂತೋ? ಅಂತೂ ಈಕೆ ಮಾತ್ರ ಮದುವೆಯನ್ನು ಮನೆಯಲ್ಲಿ ಏನೋ ಕಾರಣವೇಳುತ್ತಾ ಮುಂದೂಡುತ್ತಲೇ ಬಂದಿದ್ದಾಳೆ. ಮನೆಯಲ್ಲಿ ಮಗಳಿಗೆ ವಯಸ್ಸಾಗುತ್ತಿದೆ ಎನ್ನುವ ನೋವು ಕಾಡುತ್ತಿದೆ, ಮಗಳ ಮದುವೆಗೆ ಕಾತುರದ ಕಣ್ಣಿನಿಂದ ಕಾಯುತ್ತಿದ್ದಾರೆ. ಆದರೆ ಅದೂ ಧನ್ಯಾಳ ಹೃದಯ ನಿವೇದನೆಯ ಸಫಲದ ಮೇಲೆ ನಿತ್ತಿದೆ!
ಈಗ ಧನ್ಯ ಬೆಂಗಳೂರಿಗೆ ಹೊರಡಲು ತಯಾರಾಗಿ ನಿಂತಿದ್ದಾಳೆ. ಅಪ್ಪ ರೈಲು ನಿಲ್ದಾಣಕ್ಕೆ ಬಿಡಲು ಸಿದ್ದವಾಗಿದ್ದಾರೆ. ಒಳಗಡೆ ಅಮ್ಮನಿಗೆ ನುಡಿದು ಆಶೀರ್ವಾದ ಪಡೆದು, ಅತ್ತಿಗೆಗೆ ಆತ್ಮೀಯತೆಯಿಂದ ವಿದಾಯ ಹೇಳಿ, ಇನ್ನೂ ತೋಟದಿಂದ ಮನೆಗೆ ಬಾರದ ಅಣ್ಣನಿಗೆ ಹೇಳುವಂತೆ ನುಡಿದು ಹೊರಗಡೆ ಕೈಲಿ ಬ್ಯಾಗ್ ಹಿಡಿದುಕೊಂಡು ನೋಡುತ್ತಾಳೆ. ಸುರಿವ ಮಳೆ ಹನಿಗಳು ತುಸು ಜೋರಾಗಿ ಸುರಿಯಲಾರಂಭಿಸಿವೆ. ಬಿರು ಮಳೆಯು ಆವರಿಸುವ ಎಲ್ಲಾ ಲಕ್ಷಣಗಳು ಸೂಚ್ಯವಾಗಿ ಕಾಣುತ್ತಿದೆ. ಇತ್ತ ಆಗಲೇ ಸಂಜೆ 6.30ರ ಸಮಯವಾಗುತ್ತಿದೆ, ರೈಲು ಹೊರಡಲು ಇನ್ನೂ ಅರ್ಧ ತಾಸು ಸಮಯವಿದೆ. ಮನೆಯಿಂದ ರೈಲ್ವೇ ನಿಲ್ದಾಣಕ್ಕೆ ಹೋಗಲು ಆ ಸಮಯ ಬೇಕಾಗುತ್ತದೆ. ಈಗ ಸುರಿವ ಮಳೆಯ ನಡುವೆಯೇ ಅಪ್ಪನ ಟಿ.ವಿ.ಎಸ್ನಲ್ಲಿ ಬ್ಯಾಗ್ ಹಿಡಿದುಕೊಂಡು ಕುಳಿತುಕೊಂಡಳು. ಅಪ್ಪಾ, ಅನಂತ್ ರಾಮ್ ಮಳೆ ಜೋರಾದರೆ ಕಷ್ಟ ಎನ್ನುತ್ತಾ ಮಗಳನ್ನು ಕರೆದುಕೊಂಡು ಅಂತೂ ಬೇಗನೇ ತಾಳಗುಪ್ಪ ರೈಲ್ವೇ ನಿಲ್ದಾಣಕ್ಕೆ ಬಂದರು..
ರೈಲು ಹೊರಡುವುದಕ್ಕೆ ಇನ್ನೈದು ನಿಮಿಷವಿದೆ, ಆದರೆ ಪ್ರತಿ ಬಾರಿಯು ಮಗಳನ್ನು ಬೀಳ್ಕೊಡಲು ಅಪ್ಪ ಅನಂತ್ ರಾಮ್ ಅವರೇ ಬರುತ್ತಾರೆ. ಮನೆಯಲ್ಲಿ ಅಮ್ಮ ಸುಮಿತ್ರಾರಂತೂ ತಪ್ಪದೇ ಮಗಳಿಗೆ ಮದುವೆಯ ಬಗ್ಗೆಯಂತೂ ಕೇಳಿಯೇ ಇರುತ್ತಾರೆ. ಇತ್ತ ಅಪ್ಪ ಕೂಡ ಮಗಳು ರೈಲು ಹತ್ತುವ ಕೆಲವೇ ಸಮಯವಿದ್ದಾಗ ಬೇಡವೆಂದರೂ ತಂದೆಯ ಹೃದಯ ಕೇಳಬೇಕಲ್ಲವೇ? ಎಷ್ಟೇ ಆದರೂ ತಂದೆಗೆ ತನ್ನ ಮಗಳ ಸುಂದರ ಬಾಳನ್ನು ನೋಡಲೇಬೇಕೆನ್ನುವ ಖುಷಿ ಎನ್ನುವುದಕ್ಕಿಂತಲೂ ಅವರು ತನ್ನ ಜೀವನದಲ್ಲಿ ತಾವು ನೆಮ್ಮದಿಯಿಂದ ಇಹಲೋಕದಿಂದ ಮರೆಯಾಗುವ ಮುನ್ನ ತಾವೇ ಬೆಳೆಸಿ ಪೋಷಿಸಿದ ಮಗಳ ಮೊಗದಲ್ಲಿ ನಿಜವಾದ ನಗುವನ್ನು ನೋಡಬೇಕು. ಆಕೆಯು ಖುಷಿಯ ಕಡಲಲ್ಲಿ ನಲಿಯಬೇಕು, ಆ ಖುಷಿಯ ಬೆಳಕಲ್ಲಿ ಇವರ ಮನವು ಸಂಭ್ರಮಿಸಬೇಕು. ಇದೇ ಇರಾದೆಯಲ್ಲಿ ಇಂದಂತೂ ವಿಧಿಯಿಲ್ಲದೇ ಧನ್ಯಾಳಿಗೆ ಕೇಳಿದರು.
ಮಗಳೇ ಧನ್ಯಾ, ಎಷ್ಟು ದಿನವಂತ ಮದುವೆಯನ್ನು ಮುಂದೂಡುವೆ, ನನಗೂ ಮತ್ತು ನಿನ್ನ ಅಮ್ಮನಿಗೂ ವಯಸ್ಸಾಗಿದೆ. ನಮ್ಮಿಬ್ಬರ ಜೀವದಾ ಆಸೆಯೆ ನಿನ್ನ ಮದುವೆಯನ್ನು ನೋಡುವುದು. ನೀನು ನಗುತಾ ಹೊಸ ಬಾಳ್ವೆಯನ್ನು ಅಪ್ಪಬೇಕು. ದಯವಿಟ್ಟು ನಮಗೆ ಆ ಸುಯೋಗ ಘಳಿಗೆಯನ್ನು ಕರುಣಿಸು ಮಗಳೇ. ಮದುವೆಯನ್ನು ಮುಂದಕ್ಕೆ ಹಾಕುತ್ತಾ ಹಠ ಮಾಡಬೇಡ. ಇನ್ನೂ ಎಷ್ಟು ದಿನವಂತಾ ಹೀಗೆ ಮಾಡುವೆ. ಹೀಗೆ ಅನಂತ್ ರಾಮ್ ಹೇಳುತ್ತಿದ್ದಾರೆ. ಅವರ ಮತಿನ ನಡುವೆಯೇ ಅವರ ಕಣ್ಣಾಲಿಗಳಲ್ಲಿ ಸದ್ದಿಲ್ಲದೇ ಒಂದೆರಡು ಹನಿಗಳು ಸುರಿದಿವೆ. ಕಾರಣವನ್ನು ಮತ್ತೆ ಹೇಳಬೇಕಿಲ್ಲ.
ಇತ್ತ ಮಗಳು ಧನ್ಯಾಳಿಗೂ ಮನದಲ್ಲಿ ವಿಶಾಲ ಕಡಲಿಗಿಂತ ನೋವಿದ್ದರೂ ತಂದೆಯೆದುರು ಏನನ್ನೂ ತೋರಿಸಿಕೊಳ್ಳದೇ ಮತ್ತೆ ಅದೇ ನಗುಮೊಗದ ಮುಖವಾಡದಲ್ಲಿ ತಂದೆಯನ್ನು ಸಮಾಧಾನಿಸುತ್ತಾ, ಅಪ್ಪ, ಏನು ಮೂವತ್ತು ವರ್ಷಕ್ಕೇ ವಯಸ್ಸಾತು ಎನ್ನುವುದೇ? ಈಗ ನಲವತ್ತಕ್ಕೂ ಮದುವೆಯಾಗದೇ ಇದ್ದವರು ಎಷ್ಟು ಜನ ನನ್ನ ಕಂಪನಿಯಲ್ಲಿ ಇಲ್ಲ. ನನಗೂ ಏನೋ ಒಂದು ದೊಡ್ಡ ಸಾಧನೆ ಜೀವನದಲ್ಲಿ ಮಾಡಲೇಬೇಕೆನ್ನುವ ಛಲವಿದೆ. ಇನ್ನೇನು ಕೆಲವೇ ದಿನದಲ್ಲಿ ಅದು ಕೈಗೂಡುತ್ತದೆ, ಆ ನಂತರವೇ ನನ್ನ ಮದುವೆ.
ಅಯ್ಯೋ ಮಗಳೇ ಅದೇನೇ ಸಾಧನೆಯಿದ್ದರೂ ಮದುವೆಯಾಗಿ ಮಾಡಬಹುದಲ್ಲವೇ? ಏಕೆ ಹಠಮಾಡುತ್ತೀಯ?
ಅಪ್ಪ, ಹಾಗಲ್ಲ, ಮದುವೆನ್ನುವ ಬಂಧನದಲ್ಲಿ ಬಂಧಿಯಾಗಿ ಸಂಸಾರದ ನೌಕೆಯಲ್ಲಿ ನೆಲೆಯಾದರೆ ನಾನು ಅಂದುಕೊಂಡ ಜೀವದಾ ಕನಸು ನನಸಾಗಬೇಕಲ್ಲವೇ. ನನಗೂ ಜೀವನದಲ್ಲಿ ಸಾಧಿಸಲೇಬೇಕೆಂದು ಹಠತೊಟ್ಟ ಹಲವು ಗುರಿಗಳಿವೆ. ಅವೆಲ್ಲವೂ ಈಡೇರಲೇಬೇಕು, ಅಲ್ಲಿಯವರೆಗೂ ಮದುವೆಯಾಗುವುದಿಲ್ಲ. ಕೇವಲ ಮದುವೆಯಾಗಿ ಸಾಧಿಸುವುದೇನು? ಏನಾದರೂ ಬದುಕಿನಲ್ಲಿ ಸಾಧಿಸಿಯೇ ಸಿದ್ದಿಸಬೇಕು, ಹಾಗೆಯೇ ಜೀವನ ಮುಗಿಸಿದರೆ ಆ ಜೀನವನಕ್ಕೆ ಏನು ಸಾರ್ಥಕತೆ ತಾನೇ?
ನೀನು ಹೇಳುವುದೇನೋ ಸರಿಯೆಂದು ನಿನಗನ್ನಿಸಬಹುದು ಮಗಳೇ, ಸಾಧನೆ ಎನ್ನುವ ಛಲದಲ್ಲಿ ಬದುಕಿಗೆ ಸಂಸ್ಕಾರಕ್ಕೆ ಅಗತ್ಯವಾದ ಹಲವು ಮಜಲುಗಳಿವೆ. ಮನುಷ್ಯನಿಗೆ ಜೀವನದಲ್ಲಿ ಯಾವಾಗ ಏನು ಆಗುತ್ತದೋ ಅದು ಆಗಲೇಬೇಕು. ಬಾಲ್ಯ, ಯೌವ್ವನ, ಮದುವೆ, ಮಕ್ಕಳು, ಬಾಳ್ವೆ, ಹೀಗೆ ಸಾಗುತ್ತಾ ಹೋಗಲೇಬೇಕು. ಪ್ರಕೃತಿಯಲ್ಲಿ ಅನುಕರಣೀಯವಾಗಿದ್ದನ್ನು ಒಪ್ಪಿ ನಡೆಯಬೇಕು. ವಿರುದ್ದವಾಗಿ ಸಾಗಬಾರದು. ದಯವಿಟ್ಟು ಹಠ ಬೇಡ..
ಇತ್ತ ಹೀಗೆ ಅಪ್ಪ, ಮಗಳ ನಡುವೆ ಮಾತು ನಡೆಯುತ್ತಿದೆ, ಇಷ್ಟರಲ್ಲಿ ರೈಲು ಹೊರಡಲು ಸಿದ್ದವಾಗಿದೆ. ಎಲ್ಲರೂ ರೈಲು ಹತ್ತು ಕುಳಿತಿದ್ದಾರೆ. ಈಗ ಧನ್ಯಾ ಕೂಡ ಅಪ್ಪನಿಗೆ ಇನ್ನೊಮ್ಮೆ ಸಮಾಧಾನಿಸುತ್ತಾ ಭಾರವಾದ ಮನದಲ್ಲೇ ಇದ್ದರೂ ಏನೊಂದು ತೋರಿಸಿಕೊಳ್ಳದೇ ಮೆತ್ತನೇ ಕೈಲಿ ಬ್ಯಾಗ್ ಹಿಡಿದು ರೈಲಿನೊಳಗೆ ಕುಳಿತುಕೊಳ್ಳುತ್ತಾಳೆ. ಅಪ್ಪ ಹೊರಗಡೆಯಿಂದ ಕಿಟಕಿ ಬಳಿ ಕುಳಿತ ಮಗಳನ್ನೇ ನೋಡುತ್ತಾ ರೈಲ್ವೇ ಫ್ಲಾಟ್ ಫಾರಂನಲ್ಲಿ ನಿಂತಿದ್ದಾರೆ.. ಈಗ ಗ್ರೀನ್ ಸಿಗ್ನಲ್ ಬಿತ್ತು. ರೈಲು ಹೊರಡಲು ಕೊನೆ ಹಾರ್ನ್ ಆಯ್ತು. ಅಂತೂ ರೈಲು ಓಡಲಾರಂಭಿಸಿತು..ಇತ್ತ ಅನಂತ್ ರಾಮ್ ಕತ್ತಲೆಯಲ್ಲಿ ಮರೆಯಾದರು. ರೈಲಿನಲ್ಲಿ ಧನ್ಯಾ ಬೆಂಗಳೂರಿನತ್ತಾ ಸಾಗುತ್ತಿದ್ದಾಳೆ. ಮನದಲ್ಲಿ ತನ್ನ ಜೀವದ ಕನಸು ವಿನಯನನ್ನೇ ನೆನೆಯುತ್ತಿದ್ದಾಳೆ. ಈ ಬಾಳಿಗೆ ಬೆಂಗಾವಲಾಗಬೇಕಿದ್ದ ಆತನನ್ನೇ ಬಾಳಿಗೆ ಜೊತೆಯೆಂದು ನಿರ್ಧರಿಸಿದ್ದಾಳೆ. ಮದುವೆಯೆನ್ನುವುದಿದ್ದರೆ ಅದು ಈ ಬಾಳಲ್ಲಿ ವಿನಯನೊಂದಿಗೆ ಮಾತ್ರವೇ!
ಇಲ್ಲದಿದ್ದರೆ ಮದುವೆಯೇ ಬೇಡ, ಒಂಟಿಯಾಗಿಯೇ ಬೇಕಾದರೆ ಉಳಿದುಬಿಡುವೆ ಎಂದು ನಿರ್ಧರಿಸಿಯಾಗಿದೆ, ಆದರೆ ಒಂದೆಡೆ ಮನೆಯಲ್ಲಿ ಅಪ್ಪ, ಅಮ್ಮನ ಕಣ್ಣಲ್ಲಿ ನೀರು. ಏನೇ ಆದರೂ ವಿಧಿಯಿಲ್ಲದೇ ಅವರಿಗೂ ನೋವು ನೀಡಿ ತನ್ನ ಬದುಕಿನ ದಿನವನ್ನು ನೋವಿನಲ್ಲೇ ಕರಗಿಸುವ ಕಲಾವಿದೆಯಾಗಿ ಧನ್ಯಾ ಮಾರ್ಪಾಡಾಗಿದ್ದಾಳೆ. ಮೆತ್ತನೇ ಕಿಟಕಿಯಿಂದ ಹೊರ ನೋಡುತ್ತಾಳೆ. ಮಳೆ ನಿಂತಿದೆ, ಕಾರ್ಮೋಡ ಮರೆಯಾಗಿದೆ..ಆದರೆ ಈಕೆಯ ಎದೆಯಲ್ಲಿ ನೋವು ಹಾಗೆ ಗಟ್ಟಿಯಾಗಿ ಉಳಿದಿದೆ..
ಮೋಡದ ಮರೆಯಲ್ಲಿ ಚಂದಿರ ಇಣುಕಿ ನೋಡುತ್ತಿದ್ದಾನೆ. ಮತ್ತೆ ವಿನಯ ಒಲವಿನ ದೊರೆಯಾಗಿ ಪ್ರೇಮದ ಸೂಜಿಯಾಗಿ ಹೃದಯಕ್ಕೆ ಚುಚ್ಚಿ ಧನ್ಯಾಳಿಗೆ ಕಾಡುತ್ತಿದ್ದಾನೆ, ನೋವಿನಲ್ಲೂ ಧನ್ಯಾಳ ಹೃದಯ ವಿನಯನನ್ನೇ ಬೇಡುತಾ ವಿನಯನ ಹೆಸರನೇ ದನಿಸುತಿದೆ..ಇತ್ತ ರೈಲು ಬೆಂಗಳೂರಿನತ್ತ ಸಾಗುತ್ತಿದೆ...ಧನ್ಯಾಳ ಮನದಾಸೆಯೆನ್ನುವ ನದಿಯು ವಿನಯ ಎನ್ನುವ ಕಡಲನು ಅಪ್ಪುವುದೇ?
ಕಥೆ ಮುಂದುವರೆಯುವುದು
ರಾಮಚಂದ್ರ ಸಾಗರ್
ಧನ್ಯಾ ನಗುತಾ ತುಸು ಹೆಜ್ಜೆ ಹಾಕಿ ಸುರುಭೀಪುರದ ಹಾದಿಯಲ್ಲಿ ಸಾಗಿದರೆ ಹಾದಿಯ ಎರಡೂ ಬದಿಯ ಹಸಿರು ಸಿರಿಯ ಇಕ್ಕೆಲದಲ್ಲಿ ಅರಳಿ ತಂಗಾಳಿಗೆ ನಗುತ ನಲಿವ ಹೂಲತೆಗೂ ಇವಳಂದಕೆ ವಿಸ್ಮಿತವಾದಭಾವ. ಎಂತಹ ಚೆಲುವೆ ಎಂದು ಮನದಲ್ಲಿ ಹೂಲತೆಗಳು ರೋದಿಸಿದ ಭಾಸ, ತುಸುವೂ ಸಪ್ಪಳವಿಲ್ಲದ ವೇಳೆಯಲ್ಲಿ ಈಕೆ ಮೆಲು ದನಿಯಲಿ ನಕ್ಕರೆ ಮಧುರ ದನಿಯೇ ಅಲೆ ಅಲೆಯಾಗಿ ಬೀಸಿದಂತೆ, ಅನುರಾಗದ ಸಾಗರವೇ ಉದಿಸಿದಂತೆ. ಈಕೆ ದೇವಗುಡಿಯ ಮುಂದೆ ಹೂಬುಟ್ಟಿ ಹಿಡಿದು ದುಂಡು ಮಲ್ಲಿಗೆಯ ಮುಡಿದು ನಗುತ ಬಂದರೆ ಚೆಲುವ ದೇವತೆಯೇ ಭುವಿಗಿಳಿದು ಬಂದಂತೆ..ದೇವಗುಡಿಯ ಮುಂದೆ ಮೇಳೈಸಿದ ಚೆಲುವ ದೇವತೆಯಂತೆ.
ತನ್ನ ಇಂಪಾದ ಕಂಠ ಸಿರಿಯಲ್ಲಿ ಪದಗಳ ಗುನುಗಿ ಹಾಡಾಗಿಸಿದರೆ ಎಂತಹ ನೋವನ್ನು ಕರಗಿಸಿ ಮನ ನಲಿಸಿ ಸಂಭ್ರಮಿಸುವ ಪಾರಂಗತೆ ಈ ಧನ್ಯಾ. ಇನ್ನೂ ನೃತ್ಯದಲ್ಲಿ ಭರತ ನಾಟ್ಯವೆಂದರೆ ಈಕೆಗೆ ಬಹಳ ಅಚ್ಚುಮೆಚ್ಚು, ಹತ್ತಿರದಲ್ಲೇ ಇರುವ ಹೊನ್ನೆಮರಡು ನದಿ ತೀರದಲ್ಲಿ ಹೋಗಿ ಮುಸ್ಸಂಜೆಯಲ್ಲಿ ಹೆಜ್ಜೆಹಾಕಿದರೆ ಇವಳ ಹೆಜ್ಜೆಗಳ ಮೋಡಿಗೆ ಮುಸ್ಸಂಜೆಯಲ್ಲಿ ನದಿಯ ಕಿನಾರೆಯು ಇನ್ನಷ್ಟು ರಂಗೇರಿ ಹೊನ್ನೆ ಬಂಡೆಗಳಿಗೂ ಸಂತೃಪ್ತಿಯ ಪುಳಕವು ಲಭಿಸಿದಂತ ಅನುಭೂತಿಯು..
ಇಂತಹ ಕೋಮಲೆಯು ಈ ನನ್ನ ಕಥೆಯ ಕಥಾ ನಾಯಕಿ ಧನ್ಯಾ..
ಇನ್ನೂ ಈ ಕಥೆಯ ಕಥಾ ನಾಯಕನೂ ಇದೇ ಊರಿನವನು, ಹೆಸರು, ವಿನಯ್, ಬಹಳ ಸೌಮ್ಯದ ಸ್ವಭಾವದವನು. ಈತನೂ ಧನ್ಯಾಳೊಂದಿಗೆ ಬಾಲ್ಯದಿಂದಲೇ ಜೊತೆಯಲ್ಲಿ ಆಡಿ ಬೆಳೆದವನು. ಆತ್ಮೀಯ ಸ್ನೇಹಿತ, ಕಾಲೇಜಿನಲ್ಲಿ ಪಿ.ಯು.ಸಿವರೆಗೂ ಧನ್ಯಾಳೊಂದಿಗೆ ಒಟ್ಟಿಗೇ ಓದಿದವನು. ನಂತರ ಧನ್ಯಾ ಶಿವಮೊಗ್ಗಕ್ಕೆ ಇಂಜಿನೀಯರಿಂಗ್ ಹೋದಲು ಹೋಗುತ್ತಾಳೆ. ಆದರೆ ವಿನಯನಿಗೆ ಮನೆಯಲ್ಲಿದ್ದ ಪರಿಸ್ಥಿತಿಗೆ ಓದನ್ನು ಅನಿವಾರ್ಯವಾಗಿ ಮುಂದುವರೆಸಲು ಆಗುವುದೇ ಇಲ್ಲ. ವಿಧಿಯಿಲ್ಲದೇ ಓದನ್ನು ನಿಲ್ಲಿಸಿ ಮನೆಯಲ್ಲೇ ಉಳಿಯುತ್ತಾನೆ..ಈಗ ಎಲ್ಲಿದ್ದಾನೆ? ಏನು ಮಾಡುತ್ತಾನೆ? ಮುಂದೆ ಕಥೆಯಲ್ಲಿ ಹೇಳುವೆ..
ಚಿನ್ಮಯ್-ಧನ್ಯಾಳ ಅಣ್ಣಾ. ಅನಂತ್ ರಾಮ್ ಧನ್ಯಾಳ ತಂದೆ. ಸುಮಿತ್ರಾ ಧನ್ಯಾಳ ತಾಯಿ. ಆರಭಿ-ಧನ್ಯಾಳ ಸ್ನೇಹಿತೆ. ಸುನಿಧಿ-ಧನ್ಯಾಳ ಇನ್ನೊಬ್ಬಳು ಸ್ನೇಹಿತೆ..ಇನ್ನೂ ಕೆಲವು ಪಾತ್ರಗಳನ್ನು ಸಂದರ್ಭಕ್ಕೆ ತಕ್ಕಂತೆ ಪರಿಚಯಿಸುವೆ..
ಈಗ ಶನಿವಾರ ಮತ್ತು ಭಾನುವಾರ ಈಕೆಗೆ ವಾರಾಂತ್ಯದ ರಜೆ. ಈ ಎರಡು ದಿವಸಗಳನ್ನು ಕಳೆಯಲು ಬೆಂಗಳೂರು-ತಾಳಗುಪ್ಪ ರೈಲಿನಲ್ಲಿ ಶುಕ್ರವಾರ ರಾತ್ರಿ ಬಂದವಳು, ಮತ್ತೆ ಭಾನುವಾರ ರಾತ್ರಿ ಅದೇ ರೈಲಿನಲ್ಲಿ ಹೊರಟು ಸೋಮವಾರ ಬೆಳಿಗ್ಗೆ ಬೆಂಗಳೂರು ಸೇರುತ್ತಾಳೆ. ಹೀಗೆ ಊರಿಗೆ ಬಂದವಳು ಈಗ ಎರಡು ದಿನಗಳನ್ನು ಮನೆಯಲ್ಲಿ ಎಲ್ಲರೊಂದಿಗೆ ಕಳೆದಿದ್ದಾಳೆ.
ಸುರಭಿಪುರದ ಹಾದಿಯಲ್ಲಿ ಓಡಾಡಿ ತನ್ನ ಹಳೆಯ ನೆನಪುಗಳನ್ನು ಮತ್ತೆ ಮತ್ತೆ ನೆನೆದು ಕಾಡುವ ನೆನಪುಗಳನ್ನು ಎದೆಗಟ್ಟಿಕೊಂಡಿದ್ದಾಳೆ. ದನಿಸುವ ಎದೆಯ ಪದಗಳಿಗೆ ಉತ್ತರ ಅರಸುತ್ತಾ ಹಾದಿಯ ಇಕ್ಕೆಲದ ಹಸಿರು ಸಿರಿಯಲ್ಲಿ ಅರಳಿದ ಹೂಗಳ ಲಾಲಿತ್ಯಕ್ಕೂ ಮನದ ಭಾವವು ನಲಿಯದೇ ಸೊರಗಿದ ಮೊಗದಲ್ಲೇ ಮನೆಗೆ ಹಿಂತಿರುಗಿದ್ದಾಳೆ..ಅಂತೂ ಈಗ ಊರಿನಲ್ಲಿ ಎರಡು ದಿನಗಳು ಕಳೆದು ಮತ್ತೆ ಕೆಲಸಕ್ಕೆಂದು ಬೆಂಗಳೂರಿನತ್ತು ಪ್ರಯಾಣಕ್ಕೆ ಸಿದ್ದವಾಗಿದ್ದಾಳೆ. ಕೆಲಸಕ್ಕೆ ಎನ್ನುವುದಕ್ಕಿಂತ ಮನದ ನೋವನ್ನು ಮತ್ತೆ ಮತ್ತೆ ಕೆಣಕಿ ಕಾಡುವ ಪ್ರೀತಿಯ ಸೆಲೆಯನ್ನು ಒತ್ತಡದ ಕೆಲಸದಲ್ಲಿ ತಲ್ಲೀನವಾಗಿ ಎಲ್ಲವನ್ನು ಮರೆಯಲೇಬೇಕೆನ್ನುವ ಹಠ..ಒಟ್ಟಾರೆ ಅದೇ ಹಠವನ್ನೇ ಹೊದ್ದು ಭಾರವಾದ ಮನದಲ್ಲಿ ಸಾಗುತ್ತಿರುವ ಚೆಲುವ ಕನ್ನಿಕೆಯಾಗಿ ಉಳಿದಿದ್ದಾಳೆ, ಸಿಗದ ಪ್ರೀತಿಗಾಗಿ ನಿತ್ಯ ಹಂಬಲಿಸುವ ತಪಸ್ವಿನಿಯಾಗಿದ್ದಾಳೆ.
ಕಾಣದ ಕಡಲನು ಹಂಬಲಿಸಿ ಓಡುವ ನದಿಯಂತೆ ಧನ್ಯಾಳ ಹೃದಯವಂತೂ ನಿತ್ಯವೂ ವಿನಯನಿಗಾಗಿ ದನಿಸಯುತಿದೆ.. ಈ ಹುಡುಗಿಯ ಹೃದಯದ ದನಿಯೇ ವಿನಯ್ ಆಗಿ ಹೋಗಿದ್ದಾನೆ..ಬಾಳಿಗೆ ಜೊತೆಯಾಗಿ ಮುನ್ನಡೆಸುವವನೂ ಎನ್ನುವವನು ಏನಾದರೂ ಈ ಬಾಳಿಗೆ ಬಂದರೆ ಅದು ವಿನಯ್ ಮಾತ್ರವೇ ಎಂದು ಧನ್ಯಾ ಶಪತಮಾಡಿಯಾಗಿದೆ.. ಇನ್ನೇನಿದ್ದರೂ ಆ ದೇವನಿಚ್ಚೆ! ಏನೋ ಎಂತೋ? ಅಂತೂ ಈಕೆ ಮಾತ್ರ ಮದುವೆಯನ್ನು ಮನೆಯಲ್ಲಿ ಏನೋ ಕಾರಣವೇಳುತ್ತಾ ಮುಂದೂಡುತ್ತಲೇ ಬಂದಿದ್ದಾಳೆ. ಮನೆಯಲ್ಲಿ ಮಗಳಿಗೆ ವಯಸ್ಸಾಗುತ್ತಿದೆ ಎನ್ನುವ ನೋವು ಕಾಡುತ್ತಿದೆ, ಮಗಳ ಮದುವೆಗೆ ಕಾತುರದ ಕಣ್ಣಿನಿಂದ ಕಾಯುತ್ತಿದ್ದಾರೆ. ಆದರೆ ಅದೂ ಧನ್ಯಾಳ ಹೃದಯ ನಿವೇದನೆಯ ಸಫಲದ ಮೇಲೆ ನಿತ್ತಿದೆ!
ಈಗ ಧನ್ಯ ಬೆಂಗಳೂರಿಗೆ ಹೊರಡಲು ತಯಾರಾಗಿ ನಿಂತಿದ್ದಾಳೆ. ಅಪ್ಪ ರೈಲು ನಿಲ್ದಾಣಕ್ಕೆ ಬಿಡಲು ಸಿದ್ದವಾಗಿದ್ದಾರೆ. ಒಳಗಡೆ ಅಮ್ಮನಿಗೆ ನುಡಿದು ಆಶೀರ್ವಾದ ಪಡೆದು, ಅತ್ತಿಗೆಗೆ ಆತ್ಮೀಯತೆಯಿಂದ ವಿದಾಯ ಹೇಳಿ, ಇನ್ನೂ ತೋಟದಿಂದ ಮನೆಗೆ ಬಾರದ ಅಣ್ಣನಿಗೆ ಹೇಳುವಂತೆ ನುಡಿದು ಹೊರಗಡೆ ಕೈಲಿ ಬ್ಯಾಗ್ ಹಿಡಿದುಕೊಂಡು ನೋಡುತ್ತಾಳೆ. ಸುರಿವ ಮಳೆ ಹನಿಗಳು ತುಸು ಜೋರಾಗಿ ಸುರಿಯಲಾರಂಭಿಸಿವೆ. ಬಿರು ಮಳೆಯು ಆವರಿಸುವ ಎಲ್ಲಾ ಲಕ್ಷಣಗಳು ಸೂಚ್ಯವಾಗಿ ಕಾಣುತ್ತಿದೆ. ಇತ್ತ ಆಗಲೇ ಸಂಜೆ 6.30ರ ಸಮಯವಾಗುತ್ತಿದೆ, ರೈಲು ಹೊರಡಲು ಇನ್ನೂ ಅರ್ಧ ತಾಸು ಸಮಯವಿದೆ. ಮನೆಯಿಂದ ರೈಲ್ವೇ ನಿಲ್ದಾಣಕ್ಕೆ ಹೋಗಲು ಆ ಸಮಯ ಬೇಕಾಗುತ್ತದೆ. ಈಗ ಸುರಿವ ಮಳೆಯ ನಡುವೆಯೇ ಅಪ್ಪನ ಟಿ.ವಿ.ಎಸ್ನಲ್ಲಿ ಬ್ಯಾಗ್ ಹಿಡಿದುಕೊಂಡು ಕುಳಿತುಕೊಂಡಳು. ಅಪ್ಪಾ, ಅನಂತ್ ರಾಮ್ ಮಳೆ ಜೋರಾದರೆ ಕಷ್ಟ ಎನ್ನುತ್ತಾ ಮಗಳನ್ನು ಕರೆದುಕೊಂಡು ಅಂತೂ ಬೇಗನೇ ತಾಳಗುಪ್ಪ ರೈಲ್ವೇ ನಿಲ್ದಾಣಕ್ಕೆ ಬಂದರು..
ರೈಲು ಹೊರಡುವುದಕ್ಕೆ ಇನ್ನೈದು ನಿಮಿಷವಿದೆ, ಆದರೆ ಪ್ರತಿ ಬಾರಿಯು ಮಗಳನ್ನು ಬೀಳ್ಕೊಡಲು ಅಪ್ಪ ಅನಂತ್ ರಾಮ್ ಅವರೇ ಬರುತ್ತಾರೆ. ಮನೆಯಲ್ಲಿ ಅಮ್ಮ ಸುಮಿತ್ರಾರಂತೂ ತಪ್ಪದೇ ಮಗಳಿಗೆ ಮದುವೆಯ ಬಗ್ಗೆಯಂತೂ ಕೇಳಿಯೇ ಇರುತ್ತಾರೆ. ಇತ್ತ ಅಪ್ಪ ಕೂಡ ಮಗಳು ರೈಲು ಹತ್ತುವ ಕೆಲವೇ ಸಮಯವಿದ್ದಾಗ ಬೇಡವೆಂದರೂ ತಂದೆಯ ಹೃದಯ ಕೇಳಬೇಕಲ್ಲವೇ? ಎಷ್ಟೇ ಆದರೂ ತಂದೆಗೆ ತನ್ನ ಮಗಳ ಸುಂದರ ಬಾಳನ್ನು ನೋಡಲೇಬೇಕೆನ್ನುವ ಖುಷಿ ಎನ್ನುವುದಕ್ಕಿಂತಲೂ ಅವರು ತನ್ನ ಜೀವನದಲ್ಲಿ ತಾವು ನೆಮ್ಮದಿಯಿಂದ ಇಹಲೋಕದಿಂದ ಮರೆಯಾಗುವ ಮುನ್ನ ತಾವೇ ಬೆಳೆಸಿ ಪೋಷಿಸಿದ ಮಗಳ ಮೊಗದಲ್ಲಿ ನಿಜವಾದ ನಗುವನ್ನು ನೋಡಬೇಕು. ಆಕೆಯು ಖುಷಿಯ ಕಡಲಲ್ಲಿ ನಲಿಯಬೇಕು, ಆ ಖುಷಿಯ ಬೆಳಕಲ್ಲಿ ಇವರ ಮನವು ಸಂಭ್ರಮಿಸಬೇಕು. ಇದೇ ಇರಾದೆಯಲ್ಲಿ ಇಂದಂತೂ ವಿಧಿಯಿಲ್ಲದೇ ಧನ್ಯಾಳಿಗೆ ಕೇಳಿದರು.
ಮಗಳೇ ಧನ್ಯಾ, ಎಷ್ಟು ದಿನವಂತ ಮದುವೆಯನ್ನು ಮುಂದೂಡುವೆ, ನನಗೂ ಮತ್ತು ನಿನ್ನ ಅಮ್ಮನಿಗೂ ವಯಸ್ಸಾಗಿದೆ. ನಮ್ಮಿಬ್ಬರ ಜೀವದಾ ಆಸೆಯೆ ನಿನ್ನ ಮದುವೆಯನ್ನು ನೋಡುವುದು. ನೀನು ನಗುತಾ ಹೊಸ ಬಾಳ್ವೆಯನ್ನು ಅಪ್ಪಬೇಕು. ದಯವಿಟ್ಟು ನಮಗೆ ಆ ಸುಯೋಗ ಘಳಿಗೆಯನ್ನು ಕರುಣಿಸು ಮಗಳೇ. ಮದುವೆಯನ್ನು ಮುಂದಕ್ಕೆ ಹಾಕುತ್ತಾ ಹಠ ಮಾಡಬೇಡ. ಇನ್ನೂ ಎಷ್ಟು ದಿನವಂತಾ ಹೀಗೆ ಮಾಡುವೆ. ಹೀಗೆ ಅನಂತ್ ರಾಮ್ ಹೇಳುತ್ತಿದ್ದಾರೆ. ಅವರ ಮತಿನ ನಡುವೆಯೇ ಅವರ ಕಣ್ಣಾಲಿಗಳಲ್ಲಿ ಸದ್ದಿಲ್ಲದೇ ಒಂದೆರಡು ಹನಿಗಳು ಸುರಿದಿವೆ. ಕಾರಣವನ್ನು ಮತ್ತೆ ಹೇಳಬೇಕಿಲ್ಲ.
ಇತ್ತ ಮಗಳು ಧನ್ಯಾಳಿಗೂ ಮನದಲ್ಲಿ ವಿಶಾಲ ಕಡಲಿಗಿಂತ ನೋವಿದ್ದರೂ ತಂದೆಯೆದುರು ಏನನ್ನೂ ತೋರಿಸಿಕೊಳ್ಳದೇ ಮತ್ತೆ ಅದೇ ನಗುಮೊಗದ ಮುಖವಾಡದಲ್ಲಿ ತಂದೆಯನ್ನು ಸಮಾಧಾನಿಸುತ್ತಾ, ಅಪ್ಪ, ಏನು ಮೂವತ್ತು ವರ್ಷಕ್ಕೇ ವಯಸ್ಸಾತು ಎನ್ನುವುದೇ? ಈಗ ನಲವತ್ತಕ್ಕೂ ಮದುವೆಯಾಗದೇ ಇದ್ದವರು ಎಷ್ಟು ಜನ ನನ್ನ ಕಂಪನಿಯಲ್ಲಿ ಇಲ್ಲ. ನನಗೂ ಏನೋ ಒಂದು ದೊಡ್ಡ ಸಾಧನೆ ಜೀವನದಲ್ಲಿ ಮಾಡಲೇಬೇಕೆನ್ನುವ ಛಲವಿದೆ. ಇನ್ನೇನು ಕೆಲವೇ ದಿನದಲ್ಲಿ ಅದು ಕೈಗೂಡುತ್ತದೆ, ಆ ನಂತರವೇ ನನ್ನ ಮದುವೆ.
ಅಯ್ಯೋ ಮಗಳೇ ಅದೇನೇ ಸಾಧನೆಯಿದ್ದರೂ ಮದುವೆಯಾಗಿ ಮಾಡಬಹುದಲ್ಲವೇ? ಏಕೆ ಹಠಮಾಡುತ್ತೀಯ?
ಅಪ್ಪ, ಹಾಗಲ್ಲ, ಮದುವೆನ್ನುವ ಬಂಧನದಲ್ಲಿ ಬಂಧಿಯಾಗಿ ಸಂಸಾರದ ನೌಕೆಯಲ್ಲಿ ನೆಲೆಯಾದರೆ ನಾನು ಅಂದುಕೊಂಡ ಜೀವದಾ ಕನಸು ನನಸಾಗಬೇಕಲ್ಲವೇ. ನನಗೂ ಜೀವನದಲ್ಲಿ ಸಾಧಿಸಲೇಬೇಕೆಂದು ಹಠತೊಟ್ಟ ಹಲವು ಗುರಿಗಳಿವೆ. ಅವೆಲ್ಲವೂ ಈಡೇರಲೇಬೇಕು, ಅಲ್ಲಿಯವರೆಗೂ ಮದುವೆಯಾಗುವುದಿಲ್ಲ. ಕೇವಲ ಮದುವೆಯಾಗಿ ಸಾಧಿಸುವುದೇನು? ಏನಾದರೂ ಬದುಕಿನಲ್ಲಿ ಸಾಧಿಸಿಯೇ ಸಿದ್ದಿಸಬೇಕು, ಹಾಗೆಯೇ ಜೀವನ ಮುಗಿಸಿದರೆ ಆ ಜೀನವನಕ್ಕೆ ಏನು ಸಾರ್ಥಕತೆ ತಾನೇ?
ನೀನು ಹೇಳುವುದೇನೋ ಸರಿಯೆಂದು ನಿನಗನ್ನಿಸಬಹುದು ಮಗಳೇ, ಸಾಧನೆ ಎನ್ನುವ ಛಲದಲ್ಲಿ ಬದುಕಿಗೆ ಸಂಸ್ಕಾರಕ್ಕೆ ಅಗತ್ಯವಾದ ಹಲವು ಮಜಲುಗಳಿವೆ. ಮನುಷ್ಯನಿಗೆ ಜೀವನದಲ್ಲಿ ಯಾವಾಗ ಏನು ಆಗುತ್ತದೋ ಅದು ಆಗಲೇಬೇಕು. ಬಾಲ್ಯ, ಯೌವ್ವನ, ಮದುವೆ, ಮಕ್ಕಳು, ಬಾಳ್ವೆ, ಹೀಗೆ ಸಾಗುತ್ತಾ ಹೋಗಲೇಬೇಕು. ಪ್ರಕೃತಿಯಲ್ಲಿ ಅನುಕರಣೀಯವಾಗಿದ್ದನ್ನು ಒಪ್ಪಿ ನಡೆಯಬೇಕು. ವಿರುದ್ದವಾಗಿ ಸಾಗಬಾರದು. ದಯವಿಟ್ಟು ಹಠ ಬೇಡ..
ಇತ್ತ ಹೀಗೆ ಅಪ್ಪ, ಮಗಳ ನಡುವೆ ಮಾತು ನಡೆಯುತ್ತಿದೆ, ಇಷ್ಟರಲ್ಲಿ ರೈಲು ಹೊರಡಲು ಸಿದ್ದವಾಗಿದೆ. ಎಲ್ಲರೂ ರೈಲು ಹತ್ತು ಕುಳಿತಿದ್ದಾರೆ. ಈಗ ಧನ್ಯಾ ಕೂಡ ಅಪ್ಪನಿಗೆ ಇನ್ನೊಮ್ಮೆ ಸಮಾಧಾನಿಸುತ್ತಾ ಭಾರವಾದ ಮನದಲ್ಲೇ ಇದ್ದರೂ ಏನೊಂದು ತೋರಿಸಿಕೊಳ್ಳದೇ ಮೆತ್ತನೇ ಕೈಲಿ ಬ್ಯಾಗ್ ಹಿಡಿದು ರೈಲಿನೊಳಗೆ ಕುಳಿತುಕೊಳ್ಳುತ್ತಾಳೆ. ಅಪ್ಪ ಹೊರಗಡೆಯಿಂದ ಕಿಟಕಿ ಬಳಿ ಕುಳಿತ ಮಗಳನ್ನೇ ನೋಡುತ್ತಾ ರೈಲ್ವೇ ಫ್ಲಾಟ್ ಫಾರಂನಲ್ಲಿ ನಿಂತಿದ್ದಾರೆ.. ಈಗ ಗ್ರೀನ್ ಸಿಗ್ನಲ್ ಬಿತ್ತು. ರೈಲು ಹೊರಡಲು ಕೊನೆ ಹಾರ್ನ್ ಆಯ್ತು. ಅಂತೂ ರೈಲು ಓಡಲಾರಂಭಿಸಿತು..ಇತ್ತ ಅನಂತ್ ರಾಮ್ ಕತ್ತಲೆಯಲ್ಲಿ ಮರೆಯಾದರು. ರೈಲಿನಲ್ಲಿ ಧನ್ಯಾ ಬೆಂಗಳೂರಿನತ್ತಾ ಸಾಗುತ್ತಿದ್ದಾಳೆ. ಮನದಲ್ಲಿ ತನ್ನ ಜೀವದ ಕನಸು ವಿನಯನನ್ನೇ ನೆನೆಯುತ್ತಿದ್ದಾಳೆ. ಈ ಬಾಳಿಗೆ ಬೆಂಗಾವಲಾಗಬೇಕಿದ್ದ ಆತನನ್ನೇ ಬಾಳಿಗೆ ಜೊತೆಯೆಂದು ನಿರ್ಧರಿಸಿದ್ದಾಳೆ. ಮದುವೆಯೆನ್ನುವುದಿದ್ದರೆ ಅದು ಈ ಬಾಳಲ್ಲಿ ವಿನಯನೊಂದಿಗೆ ಮಾತ್ರವೇ!
ಇಲ್ಲದಿದ್ದರೆ ಮದುವೆಯೇ ಬೇಡ, ಒಂಟಿಯಾಗಿಯೇ ಬೇಕಾದರೆ ಉಳಿದುಬಿಡುವೆ ಎಂದು ನಿರ್ಧರಿಸಿಯಾಗಿದೆ, ಆದರೆ ಒಂದೆಡೆ ಮನೆಯಲ್ಲಿ ಅಪ್ಪ, ಅಮ್ಮನ ಕಣ್ಣಲ್ಲಿ ನೀರು. ಏನೇ ಆದರೂ ವಿಧಿಯಿಲ್ಲದೇ ಅವರಿಗೂ ನೋವು ನೀಡಿ ತನ್ನ ಬದುಕಿನ ದಿನವನ್ನು ನೋವಿನಲ್ಲೇ ಕರಗಿಸುವ ಕಲಾವಿದೆಯಾಗಿ ಧನ್ಯಾ ಮಾರ್ಪಾಡಾಗಿದ್ದಾಳೆ. ಮೆತ್ತನೇ ಕಿಟಕಿಯಿಂದ ಹೊರ ನೋಡುತ್ತಾಳೆ. ಮಳೆ ನಿಂತಿದೆ, ಕಾರ್ಮೋಡ ಮರೆಯಾಗಿದೆ..ಆದರೆ ಈಕೆಯ ಎದೆಯಲ್ಲಿ ನೋವು ಹಾಗೆ ಗಟ್ಟಿಯಾಗಿ ಉಳಿದಿದೆ..
ಮೋಡದ ಮರೆಯಲ್ಲಿ ಚಂದಿರ ಇಣುಕಿ ನೋಡುತ್ತಿದ್ದಾನೆ. ಮತ್ತೆ ವಿನಯ ಒಲವಿನ ದೊರೆಯಾಗಿ ಪ್ರೇಮದ ಸೂಜಿಯಾಗಿ ಹೃದಯಕ್ಕೆ ಚುಚ್ಚಿ ಧನ್ಯಾಳಿಗೆ ಕಾಡುತ್ತಿದ್ದಾನೆ, ನೋವಿನಲ್ಲೂ ಧನ್ಯಾಳ ಹೃದಯ ವಿನಯನನ್ನೇ ಬೇಡುತಾ ವಿನಯನ ಹೆಸರನೇ ದನಿಸುತಿದೆ..ಇತ್ತ ರೈಲು ಬೆಂಗಳೂರಿನತ್ತ ಸಾಗುತ್ತಿದೆ...ಧನ್ಯಾಳ ಮನದಾಸೆಯೆನ್ನುವ ನದಿಯು ವಿನಯ ಎನ್ನುವ ಕಡಲನು ಅಪ್ಪುವುದೇ?
ಕಥೆ ಮುಂದುವರೆಯುವುದು
ರಾಮಚಂದ್ರ ಸಾಗರ್