Wednesday, 12 September 2018

ಜೈ ಗಣೇಶ

ನನ್ನೆಲ್ಲ ಸಹೋದರ ಬಂಧುಗಳಿಗೆ ಗೌರಿ ಮತ್ತು ಗಣೇಶ ಹಬ್ಬದ ಶುಭಾಷಯಗಳು..ದೇವರು ಎಲ್ಲರಿಗೂ ಒಳಿತನ್ನು ಮಾಡಲಿ...ಬಾಳಲಿ ಸಮೃದ್ಧಿ ನೆಲೆಯಾಗಲಿ...ನಿಮಗಾಗಿ ಈ ಕವಿತೆ ಜೈ ಗಣೇಶ..

ಜೈ ಗಣೇಶ

ಸಹೋದರತೆಯ ಪ್ರತೀಕ ಗಣೇಶ
ಭಾವೈಕ್ಯತೆಯ ಬಂಧುವು ಗಣೇಶ
ದುಗುಡ ನಿವಾರಕ ಗಣೇಶ
ವಿಘ್ನ ನಾಶಕ ಗಣೇಶ
ಮಮತೆಯ ರೂಪಕ ಗಣೇಶ..

ಮನಗಳ ಬೆಸೆಯುವನು ಗಣೇಶ
ಒಪ್ಪಿದವರ ಹರಸುವನು ಗಣೇಶ
ನೊಂದವರ ಸಲಹುವನು ಗಣೇಶ
ಬೇಡಿದವರ ಕಾಪಿಡುವನು ಗಣೇಶ..

ಸತ್ಯವನು ಗೆಲ್ಲಿಸುವನು ಗಣೇಶ
ಕಪಟಿಯನು ಸೋಲಿಸುವನು ಗಣೇಶ
ನಂಬಿದವರನು ನಲಿಸುವನು ಗಣೇಶ
ಜ್ಞಾನವನು ವೃದ್ದಿಸುವನು ಗಣೇಶ..

ನಗುವು ನೀಡುವನು ಗಣೇಶ
ನೋವು ಮರೆಸುವನು ಗಣೇಶ
ತಂದೆ ತಾಯಿ ಜಗವೆಂದವನು
ಶಕ್ತಿಗಿಂತ ಬುದ್ಧಿ ಮೇಲೆಂದವನು
ಗಣೇಶ...ಜೈ ಗಣೇಶ...

ರಾಮಚಂದ್ರ ಸಾಗರ್