ಬರಡು ನಾಡಲ್ಲಿ ಹಸಿರು ಮೇಳೈಸಿದವನೇ
ಹಂದೆ ಮನದಲ್ಲಿ ಛಲುವು ಉಕ್ಕಿಸಿದವನೇ
ಅಳಲು ತುಂಬಿದವರಲ್ಲಿ ಸಂತಸವರಳಿಸಿದವನೇ
ದುಮ್ಮಾನದ ಬದುಕಲ್ಲಿ ಹೊಸತನ ತಂದವನೇ
ನಮ್ಮೀ ನಂದು ಎಂಬ ಬಂಧು..
ಕಾಠಿಣ್ಯದ ದಾರಿಯನು ಹೂವಾಗಿಸಿದವನು
ಆಗದು ಎಂಬುದನು ಆಗಿಸಿ ತೋರಿದವನು
ಶಿಲೆಯ ತಲೆಯಲ್ಲಿ ಹೂವರಳಿಸಿದ ಜಾದುಗಾರ
ಬರಡು ಮರದಲ್ಲಿ ಹೂ ತುಂಬಿದಾ ಮೋಡಿಗಾರ
ನಮ್ಮೀ ನಂದು ಎಂಬ ಬಂಧು..
ಯಾರಿಲ್ಲವೆಂದವರಿಗೆ ಸ್ನೇಹದ ಸೆಲೆಯಾಗಿ
ಊರಿಗೆಲ್ಲರಿಗೆ ಚೈತನ್ಯ ಧಾರೆಯಾಗಿ
ನಾಡಿನೆಲ್ಲರಿಗೆ ಮಾದರಿಯಾದವನೇ
ದುಡಿವ ಕೈಗಳಿಗೆ ದುಡಿಮೆ ನೀಡಿದವನೇ
ನಮ್ಮೀ ನಂದು ಎಂಬ ಬಂಧು..
ಭೂತಾಯ ಒಲುಮೆಯಲ್ಲಿ ವರ ಪಡೆದವನು
ಹಸಿರು ಕ್ರಾಂತಿಗೆ ಕೈ ಎತ್ತಿ ನಡೆವÀವನು
ದುರ್ಜನರ ದಮನಕೆ ಕೈಕಟ್ಟಿ ನಿತ್ತವನು
ನಮ್ಮೀ ನಂದು ಎಂಬ ಬಂಧು..
ಸ್ನೇಹ ಬೆಸೆವ ಬಂಧು..
ರಾಮಚಂದ್ರ ಸಾಗರ್
ಹಂದೆ ಮನದಲ್ಲಿ ಛಲುವು ಉಕ್ಕಿಸಿದವನೇ
ಅಳಲು ತುಂಬಿದವರಲ್ಲಿ ಸಂತಸವರಳಿಸಿದವನೇ
ದುಮ್ಮಾನದ ಬದುಕಲ್ಲಿ ಹೊಸತನ ತಂದವನೇ
ನಮ್ಮೀ ನಂದು ಎಂಬ ಬಂಧು..
ಕಾಠಿಣ್ಯದ ದಾರಿಯನು ಹೂವಾಗಿಸಿದವನು
ಆಗದು ಎಂಬುದನು ಆಗಿಸಿ ತೋರಿದವನು
ಶಿಲೆಯ ತಲೆಯಲ್ಲಿ ಹೂವರಳಿಸಿದ ಜಾದುಗಾರ
ಬರಡು ಮರದಲ್ಲಿ ಹೂ ತುಂಬಿದಾ ಮೋಡಿಗಾರ
ನಮ್ಮೀ ನಂದು ಎಂಬ ಬಂಧು..
ಯಾರಿಲ್ಲವೆಂದವರಿಗೆ ಸ್ನೇಹದ ಸೆಲೆಯಾಗಿ
ಊರಿಗೆಲ್ಲರಿಗೆ ಚೈತನ್ಯ ಧಾರೆಯಾಗಿ
ನಾಡಿನೆಲ್ಲರಿಗೆ ಮಾದರಿಯಾದವನೇ
ದುಡಿವ ಕೈಗಳಿಗೆ ದುಡಿಮೆ ನೀಡಿದವನೇ
ನಮ್ಮೀ ನಂದು ಎಂಬ ಬಂಧು..
ಭೂತಾಯ ಒಲುಮೆಯಲ್ಲಿ ವರ ಪಡೆದವನು
ಹಸಿರು ಕ್ರಾಂತಿಗೆ ಕೈ ಎತ್ತಿ ನಡೆವÀವನು
ದುರ್ಜನರ ದಮನಕೆ ಕೈಕಟ್ಟಿ ನಿತ್ತವನು
ನಮ್ಮೀ ನಂದು ಎಂಬ ಬಂಧು..
ಸ್ನೇಹ ಬೆಸೆವ ಬಂಧು..
ರಾಮಚಂದ್ರ ಸಾಗರ್