ಗೆಳತಿ ಮತ್ತು ನಾನು ಯೋಜಿಸಿದಂತೆ ಎಲ್ಲವೂ ಸಿದ್ದ ಮಾಡಿಕೊಂಡೆವು, ಆಕೆಯ ಅಣತಿಯಂತೆ ನಾನು ಒಪ್ಪಿದೆ, ಒಂದು ವೇಳೆ ಈಗ ಯೋಜಿಸಿದಂತೆ ಆಗದಿದ್ದರೆ ಗೆಳೆಯರ ಸಹಾಯದೊಂದಿಗೆ ಬೇರೊಂದು ಕಾರ್ಯ ಮಾಡೋಣವೆಂದಳು, ಈಗ ನಾವು ಎಲ್ಲವನ್ನೂ ಸಿದ್ದವಾಗಿಸಿಕೊಂಡು ಸೀದಾ ವರದರಾಜ್ ಮನೆಗೆ ಹೋದೆವು. ಮನೆ ಬಾಗಿಲು ಬಡಿದೆ, ಸುನಿತಾ ಬಂದು ಬಾಗಿಲು ತೆಗೆದು ನೋಡಿದಳು, ಬೇರೆ ದಿನಾ ನೋಡಿದಾಗ ಕಾಣುವ ಆತ್ಮೀಯತೆ ಇಂದು ಅವಳ ಮೊಗದಲ್ಲಿ ಕಾಣಲಿಲ್ಲ, ಏಕೆ ಬಂದರೋ ಎಂಬ ಭಾವವಿತ್ತು, ನಾನು ಇಲ್ಲೇ ಶಾಪಿಂಗ್ಗೆ ಬಂದಿದ್ದೆ, ಹಾಗೇ ಅಪ್ಪಾಜಿ ಊರಿಂದ ಬಂದಿದ್ದಾರೆಂದು ನೋಡಿ ಹೋಗಲು ಬಂದೆ ಎಂದೆ, ಆಕೆ ಅಪ್ಪಾಜಿ ಇನ್ನೂ ಬಂದಿಲ್ಲ, ಇನ್ನೂ ಎರಡು ದಿನವಾಗುತ್ತೆ ಬರೋದು, ಅಲ್ಲಿ ಅವರ ಸಹೋದರನಿಗೆ ಹುಷಾರಿಲ್ಲ ಯಾವುದಕ್ಕೂ ಖಚಿತವಾಗಿ ಹೇಳುವುದು ಕಷ್ಟ ಎಂದಳು, ನಾನು ಕುಡಿಯಲು ಸ್ವಲ್ಪ ನೀರು ಕೊಡಿ ಎಂದೆ, ಅವಳು ತರಲು ಒಳ ಹೋದಳು. ಕೂಡಲೇ ನಾನು ಟಿ.ವಿ ಪಕ್ಕದಲ್ಲಿದ್ದ ಗಾಜಿನ ಕುಂಡವನ್ನು ಮೊದಲೇ ಯೋಜಿಸಿದಂತೆ ಜೋರಾಗಿ ಬೀಳಿಸಿದೆ, ಬಿದ್ದ ಶಬ್ದಕ್ಕೆ ಎರಡು ಜನ ರೂಮಿನಿಂದ ಬುಲೆಟ್ ನಿಂದ ಬಿದ್ದ ಗುಂಡಿನಂತೆ ಹೊರ ಓಡಿಬಂದರು, ಬಂದವರು ಕುಮಾರ್ ಮತ್ತು ವರದರಾಜ್, ಕೂಡಲೇ ನಾವು ನಮ್ಮ ಬಳಿ ಇದ್ದ ಪೆಪ್ಪರ್ ಸ್ಪ್ರೆಯ್ ಮತ್ತು ಸುಣ್ಣದ ಪೌಡರ್ ಅವರ ಕಣ್ಣಿಗೆರೆಚಿದೆವು, ಈ ಕಡೆ ಇಂದ ಓಡಿ ಬಂದ ಸುನಿತಾಳಿಗೂ ಪೆಪ್ಪರ್ ಸ್ಪ್ರೆಯ್ ಮಾಡಿ ಕೂಡಲೇ ಮುಂಬಾಗದ ಬಾಗಿಲು ಎಳೆದೆವು. ಎಲ್ಲರೂ ಏನಾಯಿತೆಂಬ ಗಾಬರಿಯಲ್ಲಿದ್ದಾಗಲೇ ಬೇಗನೇ ಅವರಿಗೆ ಕೂಗಿದರೆ ಕೈಯಲ್ಲಿರುವ ಬ್ಲೇಡ್ ನಿಂದ ಗಂಟಲು ಕತ್ತರಿಸುತ್ತೇವೆ, ನಮ್ಮ ಮಾನಕ್ಕಿಂತ ನಿಮ್ಮ ಜೀವ ದೊಡ್ಡದಲ್ಲವೆಂದು ಬಾಯಿ ಮುಚ್ಚಿಸಿದೆವು.
ಕೂಡಲೇ ಅವರನ್ನು ಕೋಣೆಯಲ್ಲಿ ಕೂಡಿ ಹಾಕಿ ನಮ್ಮ ಬಳಿ ಇದ್ದ ಹಗ್ಗದಿಂದ ಅವರ ಕೈಕಾಲುಗಳನ್ನು ಕಟ್ಟಿಹಾಕಿದೆವು, ಬಾಯಿಗೆ ಬಟ್ಟೆ ತುರುಕಿದೆವು, ಕಣ್ಣಿಲ್ಲದೇ ಎಲ್ಲದಕ್ಕೂ ಬೆಂಡಾಗುವುದು ಈಗ ಅವರದಾಯಿತು, ನಾನು ಎರಡು ದಿನದಿಂದ ಸರಿಯಾಗಿ ಊಟವಿಲ್ಲದಿದ್ದರೂ ಆನೆ ಬಲದಂತೆ ಎರಗಿದೆ, ಛಲವೆಚ್ಚಿಸಿಕೊಂಡು ಹೋರಾಡತೊಡಗಿದೆ, ಅವರು ಕಣ್ಣಿಗೆ ಪೆಪ್ಪರ್ ಸ್ಪ್ರೆಯ್ ಮತ್ತು ಸುಣ್ಣ ಎರಡೂ ಬಿದ್ದಿದ್ದರಿಂದ ಏನೆಂದು ಅರಿಯದೇ ಭಯದಲ್ಲಿ ನಡುಗುತ್ತಿದ್ದರು, ಮೊದಲು ಕುಮಾರ್ನನ್ನ ಕೇಳತೊಡಗಿದೆವು, ವೀಡಿಯೋ ಮಾಡಿದ್ದು ಯಾರು, ಹೇಗೆ ಇದರಲ್ಲಿ ಯಾರೆಲ್ಲಾ ಇದ್ದೀರ, ಮೊದಲು ವೀಡಿಯೋ ಎಲ್ಲಿದೆ ಹೇಳು ಇಲ್ಲದಿದ್ದರೆ ನಿನ್ನ ಗಂಟಲನ್ನು ನಮ್ಮ ಕೈಲಿರುವ ಬ್ಲೇಡ್ ನಿಂದ ಕತ್ತರಿಸಿ ಹಾಕುತ್ತೇವೆ, ನಮ್ಮ ಮಾನಕ್ಕಿಂತ ನಿಮ್ಮ ಜೀವ ದೊಡ್ಡದಲ್ಲವೆಂದೆವು, ಆತ ನಡುಗಲಾರಂಭಸಿದ, ಆತನನ್ನು ಪಕ್ಕದ ರೂಂಗೆ ತಂದು ವಿಚಾರಿಸಿದೆವು, ಎಲ್ಲವನ್ನೂ ಹೇಳಿದ, ಬೇಗನೇ ಅವನ ಬಾಯಿಗೆ ಬಟ್ಟೆ ತುರುಕಿದೆವು, ಈಗ ಸುನಿತಾಳನ್ನು ಕರೆತಂದು ಕೇಳಿದೆವು, ಎಲ್ಲಾ ಹೇಳುತ್ತೀಯ ಎಂದೆ, ತಲೆಯಾಡಿಸಿದಳು, ಕೂಡಲೇ ಅವಳ ಬಾಯಿಯಿಂದ ಬಟ್ಟೆ ತೆಗೆದೆವು, ಅವಳು ಹೇಳ ತೊಡಗಿದಳು, ಎಲ್ಲರೂ ಸೇರಿ ಮಾಡಿದ್ದು, ವೀಡಿಯೋ ಹಿಡ್ಡನ್ ಕ್ಯಾಮರಾದಲ್ಲಿ ರೆಕಾರ್ಡ ಮಾಡಿ ಕಂಪ್ಯೂಟರ್ನಲ್ಲಿ ಲೋಡ್ ಮಾಡಿದ್ದೇವೆಂದಳು, ರೂಮಿನಿಂದ ಸುನಿತಾಳನ್ನು ಹೊರತಂದು ಯಾವ ಯಾವ ರೂಮಲ್ಲಿ ಎಲ್ಲಿದೆ, ಏನಿದೆಯೆಂದು ಒನ್ನೊಂದೇ ವಶಪಡಿಸಿಕೊಳ್ಳುತ್ತಾ ನಡೆದೆವು, ಕೊನೆಗೆ ಎಲ್ಲರ ಮೊಬೈಲ್ನ್ನು ಪರಿಶೀಲಿಸಿ ಎಲ್ಲವನ್ನು ನಮ್ಮ ವಶಕ್ಕೆ ಪಡೆದೆವು, ಅವರು ಯಾರೊಂದಿಗೆ ಮಾತಾಡಿದ್ದಾರೆ ಎಲ್ಲವನ್ನೂ ನೋಡಿದೆವು, ಅವರಿಂದ ಯಾರಿಗಾದರೂ ವೀಡೋಯೋ ಹೋಗಿದೆಯೋ ಪರಿಶೀಲಿಸಿದೆ, ಯಾರಿಗೂ ಹೋಗಿರಲಿಲ್ಲ, ನನಗೆ ಮಾತ್ರವೇ ಆಗಿತ್ತು, ನಂತರ ಸುನಿತಾಳ ಬಾಯಿಗೆ ಬಟ್ಟೆ ತುರುಕಿ ಅವಳನ್ನು ಪುನಃ ರೂಂ ನಲ್ಲಿ ಕೂರಿಸಿ, ಈಗ ವರದರಾಜ್ ನನ್ನು ರೂಂ ಹೊರಗೆ ತಂದು ಹೇಳಲು ಕೇಳಿದೆವು, ಆತನೂ ಸುನಿತಾಳಂತೆಯೇ ಹೇಳಿದ, ನಂತರ ಕುಮಾರ್ನನ್ನು ಎಳೆತಂದೆವು, ಕಂಪ್ಯೂಟರ್ ಇ ಮೇಲ್ ಎಲ್ಲವನ್ನು ತಡಕಾಡುತ್ತಾ ಮಧ್ಯೆ ರಾತ್ರಿ ಜಾರುತ್ತಿತ್ತು, ಆದರೂ ಹಸಿದ ಹುಲಿಗಳಂತೆ ದುಷ್ಟರ ಮೇಲೆ ಎರಗುತ್ತಾ ಅವರ ಬಳಿ ಇರುವ ದಾಖಲೆಗಳನ್ನೆಲ್ಲಾ ಸಂಗ್ರಹಿಸತೊಡಗಿದೆವು.
ಅನೇಕ ಜನ ಹೆಣ್ಣುಮಕ್ಕಳಿಗೂ ಇದೇ ರೀತಿ ಇವರು ಮಾಡುವುದು ಇವರ ದಂದೆ ಎಂಬುದು ನಮಗರಿವಾಯಿತು, ಕುಮಾರ್ ಕೆಲವರನ್ನು ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿ ಮೋಸ ಮಾಡಿದರೆ, ವರದರಾಜ್ ಕೆಲವರನ್ನು ತನ್ನ ಸೆಂಟಿಮೆಂಟ್ನ ಬಲೆಯಲ್ಲಿ ಬೀಳಿಸಿಕೊಳ್ಳುತಿದ್ದ. ಇನ್ನೂ ಸುನಿತಾ ಹನಿಟ್ರಾಪ್ ನಲ್ಲಿ ಬೀಳಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಳು, ಇವರಾರು ಕವಿ, ಸಾಹಿತಿ, ಬುದ್ಧಿಜೀವಿ, ನಾಡು ನುಡಿಯ ಹೋರಾಟಗಾರರಲ್ಲ, ಯಾವುದೇ ಸಂಘಟನೆಯ ಪದಾಧಿಕಾರಿಗಳೂ ಅಲ್ಲ, ಆದರೆ ಎಲ್ಲಿ ಜನಸೇರುತ್ತಾರೋ ಅಲ್ಲಿ ಹೋಗಿ ನಟನೆ ಮಾಡುವುದು ಇವರ ಕಾರ್ಯ. ಒಟ್ಟಾರೆ ಇದೊಂದು ವ್ಯವಸ್ತಿತ ದಂದೆಯೆಂಬುದು ಅರ್ಥವಾಯಿತು.
ಅಷ್ಟರಲ್ಲೇ ಕುಮಾರ್ ಮೊಬೈಲ್ಗೆ ಕರೆಬಂತು, ಕೂಡಲೇ ಕಟ್ ಮಾಡಿದೆ, ತಕ್ಷಣ ಮೆಸೆಜ್ ಬಂತು, ನೀನು ಕಳಿಸಿದ ಚಿತ್ರದ ಹುಡುಗಿ ಇನ್ನೂ ಬಂದಿಲ್ಲ, ಆಗ ಮತ್ತೆ ನಾನು ಗೆಳತಿ ಯೋಚಿಸತೊಡಗಿದೆವು, ಇವರು ಕಳಿಸಿದ ಚಿತ್ರದ ಮೇಲೆ ಮತ್ತೆ ನಮಗೆ ತೊಂದರೆ ಕಂಡಿತಾ ಎಂಬುದು ಅರಿವಾಯಿತು, ಮೊತ್ತೊಂದು ಕರೆಬಂದಿತು, ರೂಂನಿಂದ ಹೊರಹೋಗಿ ಸ್ವೀಕರಿಸಿದೆ, ಆ ಕಡೆಯಿಂದ ಒಬ್ಬಳು ಹುಡುಗಿ ನೀನು ಕೇಳಿದ ಬಂಗಾರವೆಲ್ಲವನ್ನು ಮನೆಯಿಂದ ಕದ್ದಿದ್ದೇನೆ, ನಾಳೆಯೇ ಕೊಡುತ್ತೇನೆ, ದಯಮಾಡಿ ವೀಡಿಯೋ ಪಬ್ಲಿಕ್ ಮಾಡಬೇಡ, ನಿಮ್ಮ ಕಾಲಿಗೆ ಬೀಳುತ್ತೇನೆ, ಎಂದು ಒಂದೇ ಸಮನೆ ಅಳುತಿದ್ದಳು, ಮನಕ್ಕೆ ತುಂಬಾ ನೋವಾಯಿತು, ಇಂತಹ ಹೆಣ್ಮಕ್ಕಳ ಬಾಳು ಎಷ್ಟು ಕೊಂದಿದ್ದಾರೋ ಇವರನ್ನು ಬಿಡುವುದು ಉಚಿತವೇ ಎನಿಸಿತು, ಅಷ್ಟರಲ್ಲಿ ಮತ್ತೆ ಇನ್ನೊಂದು ಕರೆ ಸುನಿತಾಳ ಮೊಬೈಲ್ಗೆ ಬಂತು, ಮತ್ತೇನೊ ಎಂದು ಕಟ್ ಮಾಡಿದೆ, ಮತ್ತೆ ಮತ್ತೆ ಬರುತ್ತಿತ್ತು, ಆಗ ಮೆಸೆಜ್ ಬಂತು, ನೀನು ಹೇಳಿದಂತೆ ನನ್ನ ಹೆಂಡತಿಗೆ ಗೊತ್ತಾಗದಂತೆ ಅವಳ ಬಂಗಾರವನ್ನೆಲ್ಲಾ ಕದ್ದಿರುವೆ, ನಾಳೆ ಕೊಡುವೆ, ಜೊತೆಗೆ 50 ಲಕ್ಷ ಕೊಡುತ್ತೇನೆ, ದಯಮಾಡಿ ವೀಡಿಯೋ ಪಬ್ಲಿಕ್ ಮಾಡಬೇಡ, ಇದನ್ನು ಸ್ವೀಕರಿಸುತ್ತಾ ಕೂತರೆ ಮಾಡುವ ಕೆಲಸ ಮುಗಿಯುವುದಿಲ್ಲವೆಂದು ಮೊಬೈಲ್ಗಳನ್ನೆಲ್ಲ ಸ್ವಿಚ್ ಆಫ್ ಮಾಡಿದೆವು. ಒಂದೂ ಇವರು ಶಾಶ್ವತ ಕುರುಡರಾಗಬೇಕು ಇಲ್ಲವೇ ಇವರು ಬದುಕಬಾರದು, ಏನು ಮಾಡುವುದೆಂದು ಗೆಳತಿಗೆ ಕೇಳಿದೆ, ಅದಕ್ಕೂ ಸಿದ್ದತೆ ನಡೆಸಿದೆವು, ಇವರನ್ನು ಕುರುಡರನ್ನಾಗಿ ಮಾಡಿ ನಡೆದರೆ ಇವರಲ್ಲಿರುವ ಹಣದಿಂದ ಮತ್ತೆ ಕಣ್ಣು ಕೂಡಿಸಿಕೊಳ್ಳುತ್ತಾರೆ, ಇವರನ್ನು ಇನ್ನಿಲ್ಲದಂತೆ ಮಾಡುವುದೇ ಸರಿ ಎನಿಸಿತು, ಕೂಡಲೇ ಗೆಳತಿ ಮತ್ತು ನಾನು ರೂಮಿನೊಳಗೆ ಬಂದೆವು, ಅವರ ಕೈಗಳನ್ನು ಬಿಚ್ಚಿದೆವು, ಯಾರು ಕುಡಿಯಲು ನೀರು ಕೇಳುತ್ತಾರೋ ಅವರಿಗೆ ನೀರಿನೊಂದಿಗೆ ವಿಷಬೆರೆಸಿ ಅವರ ಕೈಯಲ್ಲಿ ಕೊಟ್ಟೆವು, ಬೆಳಿಗ್ಗೆ ಎಲ್ಲರನ್ನು ಮುಗಿಸಿ, ಅದು ಆತ್ಮಹತ್ಯೆಯೆಂಬಂತೆ ಬಿಂಬಿಸಿ ರೂಂನಲ್ಲಿ ಕಾಣುವಂತೆ ಮಾಡಿಬಂದೆವು. ನಾವು ಉಪಯೋಗಿಸಿದ್ದ ಹ್ಯಾಂಡ್ ಗ್ಲೌಸ್, ಹಗ್ಗ, ಪೆಪ್ಪರ್ ಸ್ಪ್ರೇಯ್, ಸುಣ್ಣದ ಪುಡಿ, ಇತರೆ ಎಲ್ಲಾ ವಸ್ತುಗಳನ್ನು ಅರಕಾವತಿ ನದಿಯಲ್ಲಿ ಹಾಕಿ ನಡೆದೆವು.
ಎರಡು ದಿನ ಬಿಟ್ಟು ಪೇಪರ್ನಲ್ಲಿ ಮೂರು ಜನ ಮನೆಯಲ್ಲಿ ಆತ್ಮಹತ್ಯೆಯೆಂದು ಬಂತು..ನಾನು ಮತ್ತು ಗೆಳತಿ ಮೂರು ಜನರನ್ನು ಕೊಂದರೂ ಅದು ಸಾವಿರ ಜನರ ಮಾನ ಉಳಿಸಿದ ಪುಣ್ಯವೆಂದು ಹೆಮ್ಮೆಯಿಂದ ಬೀಗಿದೆವು..ನಮಗೆ ಯಾವುದೇ ಅಪರಾದ ಭಾವ ಕಾಡಲಿಲ್ಲ. ಅದು ಮುಂದೆಯೂ ಕಾಡುವುದಿಲ್ಲ...ಸಾವಿರಾರು ಜನರ ಮಾನ, ಪ್ರಾಣ ಉಳಿಸಿದ ಹೆಮ್ಮೆಯಂತೂ ಇದೆ,
ದುಷ್ಟರ ನಿಗ್ರಹವೇ ಧರ್ಮ...
ಸ್ವಾಭಿಮಾನದ ಹೆಣ್ಣು ತನ್ನ ಮಾನಕ್ಕಾಗಿ ಉಸಿರಿನ ಕೊನೆವರೆಗೂ ಹೋರಾಡುತ್ತಾಳೆ, ಇದು ದಿಟ...
ರಾಮಚಂದ್ರ ಸಾಗರ್