ದಿನವೂ ನಿತ್ಯ ಶುಭೋದಯ ಅವರಿಂದಲೇ, ಅದೂ ಅವರು ಸೆರೆಹಿಡಿದ ಛಾಯಚಿತ್ರದ ಸುಂದರ ಚಿತ್ರದೊಂದಿಗೆ, ಮುಂಜಾನೆಯ ಸೊಬಗು ಇನ್ನಷ್ಟು ಸುಂದರವಾಯಿತು, ನಿತ್ಯ ನನ್ನ ಒಡನಾಟದ ಭಾಗವಾಗತೊಡಗಿದರು, ಆ ಹಿರಿಯ ಜೀವದ ಫ್ರೊಫೈಲ್ ಪಿಕ್ಚರ್ ನೋಡುತಿದ್ದಂತೆ ಏನೋ ಮುಗ್ದತೆಯ ಭಾವ, ಏನೋ ಸರಳ ಸಜ್ಜನಿಕೆಯ ಮೂರ್ತಿಯ ರೂಪಕದಂತೆ ಭಾಸ, ಮನದ ತುಂಬ ಮೆತ್ತನೇ ಆ ಹಿರಿಯರು ಪೂಜನೀಯ ಸ್ಥಾನದಲ್ಲಿ ಆಸೀನರಾಗತೊಡಗಿದರು, ನನಗೆ ಊಟ, ನಿದ್ದೆ, ಕೆಲಸ ಎಲ್ಲದರಲ್ಲೂ ಮಗಳೇ ಜಾಗರೂಕ, ಇದು ಬೆಂಗಳೂರು ಅಲ್ಲಿ ನೋಡು ಮೊನ್ನೆಯ ದಿವಸ ಏನೆಲ್ಲಾ ಆಯಿತು ಮಗಳೇ..ದಯಮಾಡಿ ಆ ರಸ್ತೆಯಲ್ಲಿ ನೀನು ಸಾಗಬೇಡ, ಆ ಹೋಟೆಲ್ನಲ್ಲಿ ಫುಡ್ ಸರಿಯಿರಲ್ಲ, ಬೀದಿ ಬದಿಯ ಊಟ ಬೇಡವೇ ಬೇಡ, ದಯವಿಟ್ಟು ಮನೆಯಿಂದಲೇ ಏನನ್ನಾದರೂ ತೆಗೆದುಕೊಂಡು ಹೋಗು, ಆರೋಗ್ಯದ ಕಡೆ ಗಮನಿಸು, ಒಂದು ವೇಳೆ ಸಾಧ್ಯವಾಗದಿದ್ದರೆ ಮಗಳೇ ಹೋಟೆಲ್ನಲ್ಲಿ ನೀನು ಜ್ಯೂಸ್ ಕುಡಿ, ಟೀ ಬೇಡ, ಬೆಳಿಗ್ಗೆ ತಪ್ಪದೇ ದೇವಸ್ತಾನಕ್ಕೆ ಹೋಗು, ನಿರ್ಮಲ ಮನದಿಂದ ಬೇಡು, ನಿನಗೂ ನಿನ್ನ ಕುಟುಂಬಕ್ಕೂ ಆ ದೇವರು ಕಂಡಿತಾ ಒಳಿತನ್ನು ಮಾಡುತ್ತಾನೆ, ಹೀಗೆಲ್ಲಾ ಅವರ ಆರೈಕೆ ಅವರ ಚಡಪಡಿಕೆ ನೋಡಿ ನನಗಿದೂ ಯಾವುದೋ ಜನ್ಮದಲ್ಲಿ ಇವರು ನನಗೆ ಕಂಡಿತಾ ತಂದೆಯಾಗಿದ್ದವರು, ಇವರು ನನಗೆ ಮುಂದಿನ ಜನ್ಮದಲ್ಲಿ ಕಂಡಿತಾ ತಂದೆಯಾಗಲಿ ಎಂಬ ಬಯಕೆಯಂತೂ ಕಾಡುತ್ತಿತ್ತು, ದಿನ ಕಳೆದಂತೆ ನಮ್ಮಿಬ್ಬರ ನಡುವೆ ಅಗಾಧವಾದ ಸಂಬಂಧವು ನೆಲೆಯಾಯಿತು. ನಾನು ನನ್ನ ಮನೆಯ ಬಗ್ಗೆ ಎಲ್ಲವನ್ನೂ ಮುಚ್ಚುಮರೆಯಿಲ್ಲದೇ ಅವರಲ್ಲಿ ಹೇಳಿದೆ. ಅವರೂ ನಾನು ನಿಮ್ಮೊಂದಿಗಿದ್ದೇನೆ, ನೀನು ನನಗೆ ಮಗಳಲ್ಲವೇ, ಏಕೆ ಅಂಜಿಕೆ ಎನ್ನುತಿದ್ದಂತೆ ನನ್ನ ಕಣ್ಣಲ್ಲಿ ಕಾರಣ ನುಡಿಯದೇ ಹನಿಗಳು ಉದುರಲಾರಂಭಿಸಿದವು, ಎಲ್ಲವೂ ಆ ಹಿರಿಯ ಜೀವದ ಕರುಣಾಭಾವದ ಒಲುಮೆ, ಎಲ್ಲವೂ ನಾ ಪಡೆದ ಪುಣ್ಯವೆಂದು ದೇವರಿಗೆ ದಿನವೂ ಧನ್ಯವಾದ ಮನದಲ್ಲಿ ನುಡಿಯತೊಡಗಿದೆ. ದೇವಸ್ತಾನಕ್ಕೆ ಅವರ ಅಣತಿಯಂತೆ ನಿತ್ಯವೂ ಹೋಗತೊಡಗಿದೆ, ಆ ದೇವರಲ್ಲಿ ನಾನೀಗ ಬೇಡುತ್ತಿರುವೆ, ದೇವರೇ ನನ್ನ ಕುಟುಂಬದ ಜೊತೆ ಈ ಹಿರಿಯರನ್ನು ಚೆನ್ನಾಗಿಡು, ನಿನ್ನಿಂದಲೇ ದೊರೆತ ರತ್ನ ಇವರು, ದೇವರೇ ನಾ ನಿನಗೆ ನಿತ್ಯ ಋಣಿ, ಎಂದಿಗೂ ಮಾಸದ ವರವವಾಗಿ ವರದರಾಜ್ರವನ್ನು ನೀನು ನಮ್ಮ ಕುಟುಂಬಕ್ಕೆ ಕರುಣಿಸಿದೆ, ಇದು ನಮ್ಮ ಪಾಲಿನ ವರ.
ಒಂದು ದಿನ ಆ ಹಿರಿಯರು ನನಗೆ ತಮ್ಮ ಮನೆಗೆ ಆಮಂತ್ರಿಸಿದರು, ಈಗ ನಾನವರಿಗೇ ಅಪ್ಪಾಜಿ ಎಂದು ನಾನು ಬಾಯಿ ತುಂಬ ಕರೆದಾಗ ಅವರಿಗದುವೇನೋ ನೆಮ್ಮದಿ, ನನಗೂ ಅಷ್ಟೇ ಅವರನ್ನ ಅಪ್ಪಾಜಿ ಎಂದು ಕರೆದರೆ ಒಂದೊತ್ತು ಊಟಕ್ಕಿಂತ ಹೆಚ್ಚು, ಒಂದೊಮ್ಮ ನಾನು ಮನೆಗೆ ಕರೆಮಾಡಿ ಮಾತನಾಡುವುದನ್ನು ಮರೆತರೂ ನನ್ನ ಈ ಅಪ್ಪನನ್ನ ನಾನು ಮರೆಯುತ್ತಿರಲಿಲ್ಲ, ಅವರು ಮತ್ತು ನನ್ನ ನಡುವೆ ಅದೇನೋ ಹಾಲು ಜೇನಿನಂತ ಮಧುರ ಸಂಬಂಧ ಏರ್ಪಟ್ಟಿತ್ತು, ಅವರ ಕೋರಿಕೆಯಂತೆ ಅವರ ಮನೆಗೆ ಹೋದೆ. ಅಲ್ಲಿ ಅವರು ತಮ್ಮ ಮಗಳು ಸುನೀತಾಳನ್ನು ಪರಿಚಯಿಸಿದರು, ವರದರಾಜ್ ರವರ ಮಡದಿಯು ತೀರಿ ಅನೇಕ ವರ್ಷಗಳಾಗಿತ್ತು, ಮಗಳು ಸುನೀತಾಳಿಗೆ ತಂದೆ ವರದರಾಜ್ ರವರೇ ಅಪ್ಪ, ಅಮ್ಮ ಎಲ್ಲವೂ ಆಗಿದ್ದರು, ಅವರ ಒಬ್ಬನೇ ಮಗ ಅಮೇರಿಕಾದಲ್ಲಿದ್ದಾನಂತೆ, ಅಲ್ಲಿ ಅವನು ಒಬ್ಬ ಒಳ್ಳೆಯ ಸಾಫ್ಟವೇರ್ ಇಂಜಿನೀಯರ್ ಎಂದು ಅವನ ಫೋಟೋ ಎಲ್ಲವನ್ನು ನನಗೆ ತೋರಿಸಿದರು. ಅವನು ಅಲ್ಲೇ ಮದುವೆಯಾಗಿ ಉಳಿಯುವುದಾಗಿ ನಿರ್ಧರಿಸಿದ್ದಾನೆಂದು ಭಾವುಕರಾದರು, ಅವರ ಮುಖ ನೋಡಿ ನನಗೂ ಕಣ್ಣಲ್ಲಿ ನೀರು ಹನಿದಂತೆ, ಆದರೂ ತೋರಿಸಿಕೊಳ್ಳದೇ ಅವರನ್ನು ಸಮಾದಾನಿಸಿದೆ. ಅವರ ಮಗಳು ಸುನೀತಾ ಕನ್ನಡದಲ್ಲಿ ಎಂ.ಎ ಮಾಡಿದವರು, ಜಯನಗರ ಕಾಲೇಜ್ನಲ್ಲಿ ಗೆಸ್ಟ್ ಲೆಕ್ಚರ್ ಆಗಿ ಕೆಲಸಮಾಡುತ್ತಾರೆಂದು ತಿಳಿದೆ, ಅವರಿಗೆ ಕನ್ನಡ ಸಾಹಿತ್ಯವೆಂದರೆ ವಿಪರೀತ ಪ್ರೀತಿ. ಅವರ ಸ್ನೇಹವನ್ನು ಸಂಪಾದಿಸಿದೆ. ಅದೂ ನನಗೆ ದೊರೆತ ಇನ್ನೊಂದು ರತ್ನವೆನಿಸಿತು, ಮಧ್ಯಾಹ್ನದ ಊಟ ಅವರ ಮನೆಯಲ್ಲೇ, ನನಗೆ ದೇವತಾ ಮನುಷ್ಯ ಚಿತ್ರದಲ್ಲಿನ ಅಣ್ಣಾವ್ರು ಸುದಾರಾಣಿ ಅಭಿನಯದ ನಿನ್ನಂತ ಅಪ್ಪಾ ಇಲ್ಲ ... ಒಂದೊಂದು ಮಾತು ಬೆಲ್ಲಾ..ಹಾಡು ಮನದಲ್ಲಿ ನನ್ನ ಅರಿವಿಲ್ಲದೇ ಗುನುಗತೊಡಗಿತು, ಅದರಲ್ಲಿ ವರದರಾಜ್ ತಂದೆಯಾಗಿ ನಾನು ಮಗಳಾಗಿ ನಲಿದಂತೆ, ಮೆತ್ತನೆ ಸೋನೆ ಮಳೆ ಸುರಿದಂತೆ, ಅನುಭೂತಿ.
ಒಂದು ದಿನ ಅವರ ಮಗಳು ಸುನೀತ ನನಗೆ ಕರೆಮಾಡಿ ಭಾನುವಾರ ಸಂಜೆ ಒಂದು ಸುಂದರ ಸಮಾರಂಭ, ಅಲ್ಲಿ ಅನೇಕ ಜನ ಕವಿಗಳು ಬಂದು ಕವಿತೆ ವಾಚಿಸಿ ರಂಜಿಸಲಿದ್ದಾರೆ, ಬನ್ನಿ ಎಂದರು. ಜೊತೆಗೆ ಆ ಹಿರಿಯರಾದ ವರದರಾಜ್ ರವರು ಬರಲಿದ್ದಾರೆಂಬುದು ಇನ್ನೊಂದು ಹೆಮ್ಮೆ. ಆ ಸುಂದರ ಸಮಾರಂಭಕ್ಕೆ ನಾನು ಹೋದೆ. ಅಲ್ಲಿ ಅನೇಕ ಜನ ಕವಿಗಳು ರಾಜ್ಯದ ನಾನಾ ಮೂಲೆಯಿಂದ ಬಂದವರು. ಎಲ್ಲರೂ ಒಂದೊಂದು ಕವಿತೆಯನ್ನು ಓದಿದರು. ಅದರಲ್ಲಿ ಕುಮಾರ್ ಎಂಬುವವರು ‘ಅಪ್ಪನೆಂಬ ಅದ್ಭುತ’ ಎಂಬ ಕವಿತೆಯನ್ನು ಓದಿದರು, ಆ ಕವಿತೆಯ ಪ್ರತಿ ಸಾಲು ನನ್ನ ಮನದ ಮನೆಯನ್ನು ತಟ್ಟಿತು, ಅಪ್ಪನ ಕೊರಗನ್ನು ನೀಗಿತು,
“ಅಮ್ಮನೆಂದರೆ ಮಮತೆ
ಅಪ್ಪನೆಂದರೆ ಭದ್ರತೆ
ಸದಾ ಮಡದಿ-ಮಕ್ಕಳ
ಭವಿಷ್ಯಕ್ಕಾಗಿ ಬದುಕನೆ
ಮುಡುಪಿಟ್ಟು ಬೆಳಗುವ
ಕರ್ಪೂರದ ಹಣತೆ !....(ಇದು ರಮೇಶ್ ಗುಬ್ಬಿರವರ ಹೂವಾಡಿಗ ಕವನಸಂಕಲದ ಅಪ್ಪನೆಂದರೆ ಅದ್ಭುತ ಕವಿತೆ) ಇದನ್ನು ಓದುತ್ತಿದ್ದಂತೆ ಪಕ್ಕದಲ್ಲೇ ಕುಳಿತಿದ್ದ ಹಿರಿಯ ಚೇತನ ವರದರಾಜ್ರನ್ನು ನೋಡಿದೆ. ದೇವಾತಾ ಮುನುಷ್ಯರಾಗಿ ಕಂಡರು. ನಿಜವಾಗ್ಲೂ ಆ ಕವಿ ಕುಮಾರ್ ಓದಿದ ಕವಿತೆ ನನ್ನ ಫೇವರೀಟ್ ಕವಿತೆಯಾಯಿತು, ಆತ ಕವಿತೆ ಓದಿ ಮುಗಿಸಿ ಬಂದವನೇ ಪಕ್ಕದಲ್ಲಿದ್ದ ಅಪ್ಪಾಜಿಯವರ ಕಾಲಿಗೆ ಬಿದ್ದು ಅಪ್ಪಾಜಿ ಈ ಕವಿತೆ ನಿಮಗೆ ಅರ್ಪಣೆ ಎಂದ. ಆತ ಅರಿವಿಲ್ಲದೇ ನನಗೂ ಆತ್ಮೀಯನಾದ.