Thursday, 22 December 2016

ವಚನ ಕೊಟ್ಟವರು ನಾವು..

ಗುಮಾನಿಯ ಸಣ್ಣ ಕುರುಹು 
ನಿನಗೆಂದೂ ಕಾಡದಿರಲಿ ಗೆಳತಿ 
ಲಭಿಸುವುದು  ನಮ್ಮೊಲವಲಿ  
ಗೆಲುವು ಇದು ದಿಟವೂ..
ಗೆಲ್ಲುವುದೇ ಬಾಳಿನಾ ಹಠವೂ..

ಜಗವೇನೋ ಗುಡುಗಲಿ ಗೆಳತಿ
ಜನರೇನೋ ಶಪಿಸಲಿ ಗೆಳತಿ
ಶರಧಿಯೇ ಉಕ್ಕಲಿ ಗೆಳತಿ
ಬಿರುಗಾಳಿಯೇ ನೂಕಲಿ ಗೆಳತಿ...

ಒಲವ ಕುರುಹು ಗುಂಡಿಗೆ ಗಟ್ಟಿಯಿರಲು
ಉಸಿರು ಉಸಿರಿನಲ್ಲಿ ಬೆರೆತನಾವು
ಪ್ರೀತಿ ನಾವೆಯಲ್ಲಿ ಪಯಣಿಗರು ನಾವು
ಸೋಲು ಕಾಣದ ಪ್ರೀತಿ ನಮ್ಮದು...

ಜೀವದಾ ಕರೆಯು ನೀನಾಗಿರಲು
ಒಲವ ಸೌಧವು ನಮ್ಮ ಗುಡಿಸಲು
ಪ್ರೀತಿ ಕಸೂತಿ ನಮ್ಮ ಕಾಯಕವು
ಜಗದ ಮಾತಿಗೆ ಕಿವುಡರೂ ನಾವು..

ಕಮನೀಯ ಹೃದಯದವರು ನಾವು
ಒಲವರಾಧನೆಯ ಆರಾಧಕರೂ ನಾವು
ಒಲವು ಕವಿಸಿದ ಮನದವರು ನಾವು
ಹೃದಯಕೆ ವಚನ ಕೊಟ್ಟವರು ನಾವು..

ಗೆಳತೀ..
ಗುಮಾನಿಯ ಸಣ್ಣ ಕುರುಹು ಕಾಡದಿರಲಿ
ನಮ್ಮೊಲವಿಗೇ ಜಯವೂ ಇದು ದಿಟವೂ
ಇದುವೇ ಬಾಳಿನಾ ಹಠವೂ...
ಹೃದಯಕೆ ವಚನ ಕೊಟ್ಟವರು ನಾವು..

          ರಾಮಚಂದ್ರ ಸಾಗರ್