Thursday, 16 January 2020

ಪ್ರತಿಲಿಪಿಯ ಉಡುಗೊರೆಯೊಂದಿಗೆ ಮೇಳೈಸಿದ ಸಂಕ್ರಾಂತಿ

ಈ ವರ್ಷದ ಮೊದಲ ಬಹುಮಾನ ಪ್ರತಿಲಿಪಿ ಕನ್ನಡದಿಂದ ಒಲಿದು ಬಂದಿದೆ. ಅದು ಕೂಡ ಸಂಕ್ರಾಂತಿಯ ಸಂಭ್ರಮದ ಜೊತೆಗೆ ಒಗ್ಗೂಡಿದ್ದು ನನಗೆ ಇನ್ನಷ್ಟು ಖುಷಿಗೆ ಕಾರಣವಾಗಿದೆ. ಇವೆಲ್ಲವೂ ಅಕ್ಕರೆಯ ಓದುಗರ ಹಾರೈಕೆಯೆನ್ನುವುದು ನನ್ನ ಮನದ ಇಂಗಿತ. ನನ್ನ ಬರಹಗಳನ್ನು ಪ್ರೀತಿಯಿಂದ ಓದಿ ಹಾರೈಸುವವರ ಆಶೀರ್ವಾದ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ನನಗೆ ಬಹುಮಾನಗಳಿಗೆ ಕೊರತೆಯಿಲ್ಲ ಎನ್ನುವುದು ನನ್ನ ನಂಬಿಕೆ. ಈ ಸುಸಮಯಕ್ಕೆ ಕಾರಣವಾದ "ಪ್ರತಿಲಿಪಿ ಕನ್ನಡ" ಹಾಗೂ ಪ್ರತಿಲಿಪಿ ಸಿಬ್ಬಂದಿಗಳಿಗೂ ಧನ್ಯವಾದಗಳನ್ನು ಅರ್ಪಿಸುವೆ..

ರಾಮಚಂದ್ರ ಸಾಗರ್