Saturday, 6 April 2019

ಯುಗಾದಿ

ಎಲ್ಲಾ ಸಹೋದರ ಬಂಧುಗಳಿಗೂ ಯುಗಾದಿಯ ಶುಭಾಶಯಗಳು. ಚಂದ್ರಮಾನ ಯುಗಾದಿಯು ಎಲ್ಲರ ಬಾಳಲು ಆರೋಗ್ಯ, ನಗು, ಸಂಪತ್ತು, ಸಹಬಾಳ್ವೆಯನ್ನು ಕರುಣಿಸಲಿ..ಎಲ್ಲರ ಬಾಳು ಬೆಳಗಲಿ ಎಂದು ಆಶಿಸಿ ಯುಗಾದಿ ಕವಿತೆ ಬರೆದಿರುವೆ..ಎಲ್ಲರಿಗು ಯುಗಾದಿಯ ಶುಭಾಶಯಗಳು..

ಯುಗಾದಿ

ಕಹಿಯ ಬವಣೆ ಕರಗಲು
ಸಿಹಿಯ ಬದುಕು ಅರಳಲು
ಮನ ಮನಗಳಲಿ ಯುಗಾದಿ
ಹಚ್ಚಬೇಕಿದೆ ಹೊಸ ದೀವಟಿ

ಚೈತ್ರಮಾಸದ ಹೊಸದಿನ
ಕರೆತರಲಿ ಹೊಸತನ
ಎಲ್ಲರೆದೆಯ ಬೆಳಗಲು
ಉದಯಿಸಲಿ ಬಂಧುತ್ಯ

ರವಿ ಚಂದ್ರರ ಗತಿಯಲಿ
ಬಾನು ಭುವಿಯ ಪರಿಧಿಯಲಿ
ಬದಲಾಗುವ ಘಳಿಗೆಯಲಿ
ಮರೆಯಾಗಲಿ ಮತ್ಸರ
ಯುಗಾದಿ ತರಲಿ ಸಂತಸ

ಅರೆ ನಿಮಿಷವಾದರು
ಅನ್ಯರ ಮನ ನೋಯಿಸದಿರು
ಕಹಿಯ ಮನಸು ಅರಳಿಸಿ
ಹರುಷದ ಗೂಡಾಗು
ಸ್ನೇಹದ ಜಗವಾಗು

ವರುಷಗಳ ಆಯುಷ್ಯ
ಕರಗದಿರಲಿ ವ್ಯರ್ಥ
ಅಂತ್ಯವಾಗುವ ಮುನ್ನ
ಗಳಿಸು ತುಸು ಸಂಪನ್ನತೆ
ಸಿಹಿಯಾದಿಯಾಗಲಿ ತನು ಮನ

ರಾಮಚಂದ್ರ ಸಾಗರ್