ಭಂಡ ಬದುಕಲಿ ಗೌರವವೆಲ್ಲಿದೆ
ಭಗ್ನ ಮನದಲಿ ನೆಲೆಯೆಲ್ಲಿದೆ
ಭಟ್ಟಂಗಿ ಮಾತಿನಲಿ ಸತ್ಯವೆಲ್ಲಿದೆ
ಭಂಗುರ ಸುಖದಲಿ ಆತ್ಮತೃಪ್ತಿಯೆಲ್ಲಿದೆ
ಬನಿಯಿರದ ಸತ್ವಕೆ ಘನತೆಯೆಲ್ಲಿದೆ
ಬಯಕೆಯಿರದ ಬಾಳಿಗೆ ಗೆಲುವೆಲ್ಲಿದೆ
ಬಲಾತ್ಕಾರದ ಅಪ್ಪುಗೆಯಲಿ ಹಿತವೆಲ್ಲಿದೆ
ಬಯಸದಾ ಹೃದಯಕೆ ಚಾವಟಿಯಾಗದಿರು
ಭಕ್ತಿಯಿರದ ಆರಾಧನೆಯಲಿ ಸತ್ಕಾರವೆಲ್ಲಿದೆ
ಭರವಸೆ ಮೂಡದ ಮನದಲಿ
ಭವವಣೆಯ ಜಗದಲಿ ಸಿದ್ಧಿಯೆಲ್ಲಿದೆ?
ಭವಿತವ್ಯವ ಶಪಿಸಿ ಕೂರುವುದೇಕೆ?
ಭಗ್ನ ಮನದಲಿ ದಿನ ದೂಡದಿರು
ಭವಿಷ್ಯದ ದಿನಗಳಲಿ ಭರತಿ ಮಾನವನಾಗು
ಭವ್ಯ ಲೋಕದಲಿ ಜ್ಞಾನದ ಭವನವಾಗು
ಬಂಜರು ಕಣ್ಗಳಿಗೆ ಸತ್ಯದೋರು
ಬಳಲಿಕೆ ಸಮಾಜಕೆ ಚೈತನ್ಯದ ದಾರ್ಶನಿಕನಾಗು
ಬಾಂಧವ್ಯದ ತೇರೆಳೆವ ಸಾರಥಿಯಾಗು
ಬಾಧಕರ ಮನದಲಿ ಮಾನವೀಯ ಮೌಲ್ಯಗಳ
ಬಿತ್ತುವ ಬಂಧುವಾಗು
ಬಳಲಿದ ಜೀವಗಳ ಕೈಹಿಡಿವ ಭಟನಾಗು
ರಾಮಚಂದ್ರ ಸಾಗರ್
ಭಗ್ನ ಮನದಲಿ ನೆಲೆಯೆಲ್ಲಿದೆ
ಭಟ್ಟಂಗಿ ಮಾತಿನಲಿ ಸತ್ಯವೆಲ್ಲಿದೆ
ಭಂಗುರ ಸುಖದಲಿ ಆತ್ಮತೃಪ್ತಿಯೆಲ್ಲಿದೆ
ಬನಿಯಿರದ ಸತ್ವಕೆ ಘನತೆಯೆಲ್ಲಿದೆ
ಬಯಕೆಯಿರದ ಬಾಳಿಗೆ ಗೆಲುವೆಲ್ಲಿದೆ
ಬಲಾತ್ಕಾರದ ಅಪ್ಪುಗೆಯಲಿ ಹಿತವೆಲ್ಲಿದೆ
ಬಯಸದಾ ಹೃದಯಕೆ ಚಾವಟಿಯಾಗದಿರು
ಭಕ್ತಿಯಿರದ ಆರಾಧನೆಯಲಿ ಸತ್ಕಾರವೆಲ್ಲಿದೆ
ಭರವಸೆ ಮೂಡದ ಮನದಲಿ
ಭವವಣೆಯ ಜಗದಲಿ ಸಿದ್ಧಿಯೆಲ್ಲಿದೆ?
ಭವಿತವ್ಯವ ಶಪಿಸಿ ಕೂರುವುದೇಕೆ?
ಭಗ್ನ ಮನದಲಿ ದಿನ ದೂಡದಿರು
ಭವಿಷ್ಯದ ದಿನಗಳಲಿ ಭರತಿ ಮಾನವನಾಗು
ಭವ್ಯ ಲೋಕದಲಿ ಜ್ಞಾನದ ಭವನವಾಗು
ಬಂಜರು ಕಣ್ಗಳಿಗೆ ಸತ್ಯದೋರು
ಬಳಲಿಕೆ ಸಮಾಜಕೆ ಚೈತನ್ಯದ ದಾರ್ಶನಿಕನಾಗು
ಬಾಂಧವ್ಯದ ತೇರೆಳೆವ ಸಾರಥಿಯಾಗು
ಬಾಧಕರ ಮನದಲಿ ಮಾನವೀಯ ಮೌಲ್ಯಗಳ
ಬಿತ್ತುವ ಬಂಧುವಾಗು
ಬಳಲಿದ ಜೀವಗಳ ಕೈಹಿಡಿವ ಭಟನಾಗು
ರಾಮಚಂದ್ರ ಸಾಗರ್