ಯಾಚನೆ ಎಂಬುದು ಕೊನೆಯಾಗುವುದೆ
ಹಸಿವಿನ ನೋವು ಮರೆಯಾಗುವುದೆ
ಪಾಮರನ ಎದೆಯಲಿ ದಯೆಯರಳುವುದೆ
ಬಡವನ ಮನೆಯಲಿ ಕಣ್ಣೀರು ಕರಗುವುದೆ?
ಹಸಿವು ಎಂಬುದಕ್ಕೆ ಜಾತಿಯಲ್ಲಿದೆ
ಅನ್ನ ನೀರು ಗಾಳಿಗೆ ಬೇದವೆಲ್ಲಿದೆ
ಶ್ರಮಿಕ ತನುವಿಗೆ ನಲಿವೆಲ್ಲಿದೆ
ಬೇಡುವ ಜೀವಕೆ ರಕ್ಷೆಯೆಲ್ಲಿದೆ!
ಬೇಡಿದ್ದೆಲ್ಲ ಜಗದೊಳು ದಕ್ಕರೆ
ದುಡಿದಿದ್ದೆಲ್ಲ ಜೋಳಿಗೆ ತುಂಬಿದರೆ
ಭಾಗ್ಯದ ಉಡುಗೊರೆ ಅರ್ಹನಿಗೆ ಒಲಿದರೆ
ನೀರು ಸುರಿಸುವ ಕಣ್ಣಿಗೆ ಕೆಲಸವಿಲ್ಲಿದೆ?
ಕೃಪಣದ ಮನವು ದಹನವಾಗುವುದೆ
ಸೊರಗಿದ ಜೀವಗಳು ನಗುವುದೆ
ನಿತ್ರಾಣ ಎಂಬುದು ಕೊನೆಯಾಗುವುದೆ
ಸಂಭ್ರಮವು ಜಗದಲಿ ನೆಲೆಯಾಗುವುದೆ?
ಧನಹೀನನ ಧನವಂತನು ಅಪ್ಪುವುದೆಂದು
ಯಾಚಕ ನಾಯಕನಾಗುವುದೆಂದು
ಹತಾಶೆಯ ಮಳೆ ನಿಲ್ಲುವುದೆಂದು
ಬಡವನ ಗುಡಿಸಿಲಲಿ ದೀಪಾವಳಿಯೆಂದು?
ರಾಮಚಂದ್ರ ಸಾಗರ್
ಹಸಿವಿನ ನೋವು ಮರೆಯಾಗುವುದೆ
ಪಾಮರನ ಎದೆಯಲಿ ದಯೆಯರಳುವುದೆ
ಬಡವನ ಮನೆಯಲಿ ಕಣ್ಣೀರು ಕರಗುವುದೆ?
ಹಸಿವು ಎಂಬುದಕ್ಕೆ ಜಾತಿಯಲ್ಲಿದೆ
ಅನ್ನ ನೀರು ಗಾಳಿಗೆ ಬೇದವೆಲ್ಲಿದೆ
ಶ್ರಮಿಕ ತನುವಿಗೆ ನಲಿವೆಲ್ಲಿದೆ
ಬೇಡುವ ಜೀವಕೆ ರಕ್ಷೆಯೆಲ್ಲಿದೆ!
ಬೇಡಿದ್ದೆಲ್ಲ ಜಗದೊಳು ದಕ್ಕರೆ
ದುಡಿದಿದ್ದೆಲ್ಲ ಜೋಳಿಗೆ ತುಂಬಿದರೆ
ಭಾಗ್ಯದ ಉಡುಗೊರೆ ಅರ್ಹನಿಗೆ ಒಲಿದರೆ
ನೀರು ಸುರಿಸುವ ಕಣ್ಣಿಗೆ ಕೆಲಸವಿಲ್ಲಿದೆ?
ಕೃಪಣದ ಮನವು ದಹನವಾಗುವುದೆ
ಸೊರಗಿದ ಜೀವಗಳು ನಗುವುದೆ
ನಿತ್ರಾಣ ಎಂಬುದು ಕೊನೆಯಾಗುವುದೆ
ಸಂಭ್ರಮವು ಜಗದಲಿ ನೆಲೆಯಾಗುವುದೆ?
ಧನಹೀನನ ಧನವಂತನು ಅಪ್ಪುವುದೆಂದು
ಯಾಚಕ ನಾಯಕನಾಗುವುದೆಂದು
ಹತಾಶೆಯ ಮಳೆ ನಿಲ್ಲುವುದೆಂದು
ಬಡವನ ಗುಡಿಸಿಲಲಿ ದೀಪಾವಳಿಯೆಂದು?
ರಾಮಚಂದ್ರ ಸಾಗರ್
