Friday, 27 April 2018

ಮೌನಿಯಾಗಿಸಿದೆ ನೀ

ಗೆಳೆಯಾ..
ಕಪ್ಪಿರುಳು ಘಳಿಗೆಯಲಿ
ಬೆಳಕಾಗಿ ಬಂದವನೆ
ಒಲವ ದೀಪವಾದವನೆ
ಇಂದೇಕೆ ಮರೆಯಾದೆ ನೀ

ಕಾನನದ ಹಾದಿಯಲಿ
ಕೈಹಿಡಿದು ನಡೆಸಿದವನೆ
ಅಭಯದ ಉಲ್ಲಾಸವಾದವನೆ
ಇಂದೇಕೆ ಬರಬಾರದೆ

ಬಿಸಿಲು ಹಾದಿಯಲಿ
ಒಲವ ತಂಗಾಳಿಯಾದವನೆ
ಮನ ರಮಿಸಿ ತಣಿಸಿದವನೆ
ಇಂದೆಲ್ಲಿ ನೆಲೆಯಾದೆ ನೀ

ಅನುರಾಗದ ಪದಗಳಲಿ
ಒಲವಗೀತೆ ಹಾಡಿದವನೆ
ಒಲವಿಗೆ ಸ್ವರವಾದವನೆ
ಇಂದೇಕೆ ಮೌನಿಯಾದೆ ನೀ

ಕಾಡುವ ನೆನಪುಗಳಲಿ
ಹೃದಯ ಬಂಧಿಸಿದವನೆ
ಮನಸು ಮೌನಿಯಾಗಿಸಿದವನೆ
ಇಂದೇಕೆ ದೂರವಾದೆ ನೀ

ರಾಮಚಂದ್ರ ಸಾಗರ್