Friday, 26 January 2018

"ಭಾರತೀಯನೆಂದು ಹೆಮ್ಮೆಯಿಂದ ಬೀಗು"

ಎಲ್ಲ ದೇಶಾಭಿಮಾನಿಗಳಿಗೂ ಗಣರಾಜ್ಯೋತ್ವದ ಶುಭಾಶಯಗಳು, ಈಸುಸುಮಯದಲ್ಲಿ ನಾ ಬರೆದ ಕವಿತೆ, "ಭಾರತೀಯನೆಂದು ಹೆಮ್ಮೆಯಿಂದ ಬೀಗು"

ಭಾರತೀಯನೆಂದು ಹೆಮ್ಮೆಯಿಂದ ಬೀಗು
ಕೋಟ್ಯಾಂತರ ಜೀವಿಗಳ ಉಸಿರು
ಸೌಹಾರ್ದ ಸಮ್ಮೇಳನದ ಬೀಡು
ವೈವಿಧ್ಯತೆಮಯ ಸಂಸ್ಕೃತಿಯ ತೇರು
ಭರತ ಭೂತಾಯ ಮಡಿಲು ...


ಜ್ಞಾನಸೆಲೆಯ ಅಮೃತ ಸಿಂಚನವು
ಸಹಿಷ್ಣುತೆ ಸಂದೇಶ ಸಾಗರವು
ಶಾಂತಿಯ ಸತ್ವದ ದೀವಟಿಗೆಯು
ಭರತ ಭೂತಾಯ ನೆಲೆಯು..


ಜಗಕೆ ಶಾಂತಿ ಬೋಧಿಸಿದ ನಾಡು
ಜಗಕೆ ಜ್ಞಾನದ ಕೊಡುಗೆಯ ಬಟ್ಟಲು
ಜಗದ ಸಿರಿವಂತ ಸಂಸ್ಕøತಿಯ ಕಣಜ
ಜನಿಸಿದ ಎಲ್ಲರ ಪುಣ್ಯಧಾಮ..


ಭರತ ತಾಯ ಮಡಿಲಲಿ ಜನನವೆ
ಪ್ರತಿ ಭಾರತೀಯನ ಹೆಮ್ಮೆ
ಉಸಿರಿನ ಪ್ರತಿ ಘಳಿಗೆ ಮುಡಿಪಾಗಿಡು
ದೇಶ ಗಟ್ಟಿಗೊಳಿಸಲು, ಪ್ರಕಾಶಿಸಲು..


ಭರತ ತಾಯಿ ನೆಲದಲಿ ಜನ್ಮವು
ಸಾವಿರ ಜನ್ಮಕು ತೀರದ ಋಣವು
ದಿವ್ಯ ನಾಡಿನ ದಾರ್ಶನಿಕರ ವಚನದಲಿ
ಪುಣ್ಯ ಪುರುಷರ ಜ್ಞಾನ ಸೆಲೆಯಲಿ
ಜಳಪಿಸುವ ಶಕ್ತಿಯಲಿ ನೀ ಬೆಳಗು..


ಭಾರತೀಯತೆಯ ಉಸಿರು ಜೀವಸೆಲೆಯಾಗಿರಲು
ಭಾರತೀಯನೆಂದು ಹೆಮ್ಮೆಯಿಂದ ಬೀಗು
ನಿನ್ನೆದೆಯ ಪ್ರತಿ ಬಡಿತದಲ್ಲು
ಭಾರತೀಯನೆಂಬ ಸದ್ದಿನ ದನಿ ಕೇಳು
ಪುಣ್ಯನಾಡನು ಆರಾಧಿಸು..ಪ್ರೀತಿಸು..


       ರಾಮಚಂದ್ರ ಸಾಗರ್