ಓ ನನ್ನ ಮನವೇ ನಿಧಾನವಾಗಿ ನೀನೊಮ್ಮೆ ಆಲಿಸು
ಅಸುರತೆಯ ದೂರಾಗಿರಲು ನೀನೊಮ್ಮೆ ಸಹಕರಿಸು
ಆಸೆದೋರಿ ಸುಡುವ ಬಾಳಿಗೆ ನೀನೊಮ್ಮೆ ಸಂತೈಸು
ಆಭಾರದ ಗುಣಗಳ ಜನನಕೆ ನೀನೊಮ್ಮೆ ಹರಸು..
ಓ ನನ್ನ ಮನವೇ ನೀನೊಮ್ಮೆ ಸಹಕರಿಸು
ನನ್ನ ದ್ವೇಷಕೆ ಬೆವರಿದವರಿಗೆ ನಾ ತಂಗಾಳಿಯಾಗಲು
ನನ್ನ ಕಿಚ್ಚಿಗೆ ಬೆಚ್ಚಿದವರಿಗೆ ನಾ ನೆರಳಾಗಳು
ನನ್ನ ಕೆನ್ನಾಲಿಗೆ ಬೂದಿಯಾದ ಗುಡಿಸಲು ನಾ ಕಟ್ಟಲು..
ಓ ನನ್ನ ಮನವೇ ನೀನೊಮ್ಮೆ ಬೆಳಗು
ನಾ ಆರಿಸಿದ ಮನೆಯ ದೀಪವ ಬೆಳಗಲು
ನಾ ಕಪ್ಪಾಗಿಸಿದ ಬೀದಿಗೆ ಬೆಳಕಿನ ಕಂಬವಾಗಲು
ನಾ ಬೆತ್ತಲಾಗಿಸಿದವರ ಬದುಕು ಹಸನಾಗಿಸಲು..
ಓ ನನ್ನ ಮನವೇ ನೀನೊಮ್ಮೆ ಸಂಪನ್ನತೆಯ ಸದನವಾಗು
ಸತ್ವ ತುಂಬಿದ ಮನದ ಕಣಜವಾಗು
ಸಹಬಾಳ್ವೆ ಸಂಕೇತದ ಸಂಕುಲವಾಗು
ಪಾಪದ ಸಂಕೋಲೆ ನೀ ಕಳಚಿಬಿಡು..
ಓ ನನ್ನ ತನುವೇ ನಿಧಾನವಾಗಿ ನೀ ಸಾಗು
ನಾ ನೋಯಿಸಿದವರ ನೋವು ಕರಗಿಸುವ ಸೇವಕನಾಗಲು
ನನ್ನ ದಾಸ್ಯದ ಬದುಕಿಗೆ ಬಲಿಯಾದವರ ಮೊಗದಲಿ ನಗು ಮೂಡಿಸಲು
ನನ್ನ ದಾರುಣತೆಗೆ ಬಳಲಿದವರ ಬಾಳಿಗೆ ಹೂವಾಗಲು
ಒಮ್ಮೆಯಾದರೂ ಕ್ಷಮೆಯ ಭಿಕ್ಷೆ ಬೇಡಲು..
ನನ್ನ ಕಿಚ್ಚಿಗೆ ಬೆಚ್ಚಿದವರಿಗೆ ನಾ ನೆರಳಾಗಬೇಕು
ನನ್ನ ಕೆನ್ನಾಲಿಗೆ ಬೂದಿಯಾದ ಗುಡಿಸಲು ನಾ ಕಟ್ಟಬೇಕು....
ರಾಮಚಂದ್ರ ಸಾಗರ್
ಅಸುರತೆಯ ದೂರಾಗಿರಲು ನೀನೊಮ್ಮೆ ಸಹಕರಿಸು
ಆಸೆದೋರಿ ಸುಡುವ ಬಾಳಿಗೆ ನೀನೊಮ್ಮೆ ಸಂತೈಸು
ಆಭಾರದ ಗುಣಗಳ ಜನನಕೆ ನೀನೊಮ್ಮೆ ಹರಸು..
ಓ ನನ್ನ ಮನವೇ ನೀನೊಮ್ಮೆ ಸಹಕರಿಸು
ನನ್ನ ದ್ವೇಷಕೆ ಬೆವರಿದವರಿಗೆ ನಾ ತಂಗಾಳಿಯಾಗಲು
ನನ್ನ ಕಿಚ್ಚಿಗೆ ಬೆಚ್ಚಿದವರಿಗೆ ನಾ ನೆರಳಾಗಳು
ನನ್ನ ಕೆನ್ನಾಲಿಗೆ ಬೂದಿಯಾದ ಗುಡಿಸಲು ನಾ ಕಟ್ಟಲು..
ಓ ನನ್ನ ಮನವೇ ನೀನೊಮ್ಮೆ ಬೆಳಗು
ನಾ ಆರಿಸಿದ ಮನೆಯ ದೀಪವ ಬೆಳಗಲು
ನಾ ಕಪ್ಪಾಗಿಸಿದ ಬೀದಿಗೆ ಬೆಳಕಿನ ಕಂಬವಾಗಲು
ನಾ ಬೆತ್ತಲಾಗಿಸಿದವರ ಬದುಕು ಹಸನಾಗಿಸಲು..
ಓ ನನ್ನ ಮನವೇ ನೀನೊಮ್ಮೆ ಸಂಪನ್ನತೆಯ ಸದನವಾಗು
ಸತ್ವ ತುಂಬಿದ ಮನದ ಕಣಜವಾಗು
ಸಹಬಾಳ್ವೆ ಸಂಕೇತದ ಸಂಕುಲವಾಗು
ಪಾಪದ ಸಂಕೋಲೆ ನೀ ಕಳಚಿಬಿಡು..
ಓ ನನ್ನ ತನುವೇ ನಿಧಾನವಾಗಿ ನೀ ಸಾಗು
ನಾ ನೋಯಿಸಿದವರ ನೋವು ಕರಗಿಸುವ ಸೇವಕನಾಗಲು
ನನ್ನ ದಾಸ್ಯದ ಬದುಕಿಗೆ ಬಲಿಯಾದವರ ಮೊಗದಲಿ ನಗು ಮೂಡಿಸಲು
ನನ್ನ ದಾರುಣತೆಗೆ ಬಳಲಿದವರ ಬಾಳಿಗೆ ಹೂವಾಗಲು
ಒಮ್ಮೆಯಾದರೂ ಕ್ಷಮೆಯ ಭಿಕ್ಷೆ ಬೇಡಲು..
ನನ್ನ ಕಿಚ್ಚಿಗೆ ಬೆಚ್ಚಿದವರಿಗೆ ನಾ ನೆರಳಾಗಬೇಕು
ನನ್ನ ಕೆನ್ನಾಲಿಗೆ ಬೂದಿಯಾದ ಗುಡಿಸಲು ನಾ ಕಟ್ಟಬೇಕು....
ರಾಮಚಂದ್ರ ಸಾಗರ್
