Wednesday, 21 December 2016

ಕಾದಿರುವೆ ನಿನಗಾಗಿ..

ಕಾತರಿಸುತಿದೆ ಮನವಿಂದು
ಮುಸ್ಸಂಜೆ ಕಡಲತಡಿಯಲಿ
ನಿನ್ನ ಗುಣಗಾನ ಮಾಡಲೆಂದು
ನೀ ಬರುವೆಯೇನು..

ಅಲೆಗಳ ಸಾವರಿಸಿದ 
ತಂಗಾಳಿಯ ಹಿತದಲ್ಲಿ
ನೀ ಜೊತೆಯಿರದ
ಕೊರಗಿನ ನೋವಲ್ಲಿ
ಕಾದಿರುವೆನು ನಿನಗಾಗಿ ನಾ ನೊಂದು..

ತಡಿಯ ಅಪ್ಪುವ 
ಅಲೆಗಳಿಗು ವ್ಯಸನವು
ತಣಿವು ತುಂಬಿದ
ತಂಗಾಳಿಯೂ ತಣಿವೆನಿಸದು
ನೀ ಕಾಡುತಿರಲು ಒಂಟಿ
ನನ್ನ ಮನಕೆ..

ಬಾಳ ನಾವೆಯಲ್ಲಿ
ಜೊತೆಯಾದ ನೀನು
ಮುಸ್ಸಂಜೆ ರಂಗಲ್ಲಿ
ಒಲವ ರಂಗೋಲಿ
ಹಾಕುವೆನು ನಿನಗಾಗಿ
ನೀ ಬರುವೆಯೇನು..

ಕನವರಿಕೆಯ ಕಾರ್ಮೋಡವನು
ನೀ ಕರಗಿಸುವೆಯೇನು
ಕಾತರಿಸುವ ಮನಕೆ
ನೀ ರಮಿಸುವೆಯೇನು..

ಕಾದಿರುವೆನು ನಿನಗಾಗಿ
ಕಡಲತಡಿಯಲಿಂದು...
      
       ರಾಮಚಂದ್ರ ಸಾಗರ್