ಗೆಳತೀ..
ಅಮವಾಸ್ಯೆ ರಾತ್ರಿಯಲಿ ನೀ ನಗುತಿರಲು
ನೀನೊಂದು ಬೆಳುದಿಂಗಳು ಬೊಂಬೆಯು
ಚೂರಾದ ಮನದಲ್ಲಿ ಆಸೆಯನ್ನು
ಬಿತ್ತಿ ಪೋಷಿಸುವ ಸುಕುಮಾರಿಯು ನೀನು..
ಎದೆಯಾಳದಲ್ಲಿ ಅವಿತ ಆಸೆಯನ್ನು
ಮೇಲೆತ್ತಿ ನಲಿಸಿ ಕೈ ಹಿಡಿವವಳು ನೀನು
ಮೌನದ ಹಾಡಿಗೆ ಪದಗಳನು
ಸ್ವರಮೇಳದಲಿ ಧಾರೆಯೆರೆವವಳು ನೀನು..
ತಲ್ಲಣದ ಮನದಲ್ಲಿ ರಮ್ಯತೆಯನು
ಮನ ರಮಿಸುತ ತಂದವಳು ನೀನು
ಮುಸ್ಸಂಜೆಯ ರಂಗನ್ನು ಸೆರೆಹಿಡಿದು
ಕನಸಿಗೆ ಲೇಪಿಸಿ ನಕ್ಕವಳು ನೀನು..
ಬೇಸರ ಎಂಬುದು ನಮಗೇಕೆ ಎಂದವಳು
ಚೇತರಿಕೆಯ ಬಲವನ್ನು ನನಸಾಗಿದವಳು
ವಿರಹವ ಮರೆಸುವ ರೂವಾರಿಯಾದವಳು
ಭಾವನೆಗಳ ಮೆರವಣಿಗೆಗೆ ಸಾರಥಿಯಾದವಳು..
ಕಪ್ಪಿರುಳು ವೇಳೆಯಲ್ಲು ಕಣ್ತುಂಬ
ಬಣ್ಣಗಳ ಚಿತ್ತಾರ ಮೂಡಿಸಿ
ಮೋಡಿ ಮಾಡುತಾ ಜೊತೆಯಾದವಳು
ಬೆಳುದಿಂಗಳು ಬೊಂಬೆಯಾಗಿ
ಜಗವೆಲ್ಲ ಬೆಳಗುವವಳು ನೀನು..
ರಾಮಚಂದ್ರ ಸಾಗರ್
ಅಮವಾಸ್ಯೆ ರಾತ್ರಿಯಲಿ ನೀ ನಗುತಿರಲು
ನೀನೊಂದು ಬೆಳುದಿಂಗಳು ಬೊಂಬೆಯು
ಚೂರಾದ ಮನದಲ್ಲಿ ಆಸೆಯನ್ನು
ಬಿತ್ತಿ ಪೋಷಿಸುವ ಸುಕುಮಾರಿಯು ನೀನು..
ಎದೆಯಾಳದಲ್ಲಿ ಅವಿತ ಆಸೆಯನ್ನು
ಮೇಲೆತ್ತಿ ನಲಿಸಿ ಕೈ ಹಿಡಿವವಳು ನೀನು
ಮೌನದ ಹಾಡಿಗೆ ಪದಗಳನು
ಸ್ವರಮೇಳದಲಿ ಧಾರೆಯೆರೆವವಳು ನೀನು..
ತಲ್ಲಣದ ಮನದಲ್ಲಿ ರಮ್ಯತೆಯನು
ಮನ ರಮಿಸುತ ತಂದವಳು ನೀನು
ಮುಸ್ಸಂಜೆಯ ರಂಗನ್ನು ಸೆರೆಹಿಡಿದು
ಕನಸಿಗೆ ಲೇಪಿಸಿ ನಕ್ಕವಳು ನೀನು..
ಬೇಸರ ಎಂಬುದು ನಮಗೇಕೆ ಎಂದವಳು
ಚೇತರಿಕೆಯ ಬಲವನ್ನು ನನಸಾಗಿದವಳು
ವಿರಹವ ಮರೆಸುವ ರೂವಾರಿಯಾದವಳು
ಭಾವನೆಗಳ ಮೆರವಣಿಗೆಗೆ ಸಾರಥಿಯಾದವಳು..
ಕಪ್ಪಿರುಳು ವೇಳೆಯಲ್ಲು ಕಣ್ತುಂಬ
ಬಣ್ಣಗಳ ಚಿತ್ತಾರ ಮೂಡಿಸಿ
ಮೋಡಿ ಮಾಡುತಾ ಜೊತೆಯಾದವಳು
ಬೆಳುದಿಂಗಳು ಬೊಂಬೆಯಾಗಿ
ಜಗವೆಲ್ಲ ಬೆಳಗುವವಳು ನೀನು..
ರಾಮಚಂದ್ರ ಸಾಗರ್