Thursday, 3 December 2020

ಘನ ನಾಯಕ


ಸರ್ವರಿಗೂ ಕೀರ್ತನಾ ಸಾಹಿತ್ಯದ ಹರಿಕಾರ ಭಕ್ತ ಕನಕದಾಸರ ಜಯಂತ್ಯೋತ್ಸವದ ಶುಭಾಷಯಗಳು..

ಈ ಪುಣ್ಯ ಪುರುಷರ ನೆನೆಯುತ್ತಾ ನಾ ರಚಿಸಿದ ಕವಿತೆ ಘನ ನಾಯಕ..

ಘನ ನಾಯಕ

ಕೀರ್ತನಾ ಸಾಹಿತ್ಯದ ಹರಿಕಾರ

ಬಾಂಧವ್ಯ ಬೆಸೆದ ದಂಡನಾಯಕ

ದಹಿಸಲು ಕುಲ ಕುಲದ ವೈಷಮ್ಯ

ಸಮರ ಸಾರಿದ ಘನ ನಾಯಕ


ಭಕ್ತಿ ಪಂಥದ ಭವ್ಯ ಸಾರಥಿ

ದಾಸ ಪಂಥದ ದಿವ್ಯ ಕೀರುತಿ

ವ್ಯಾಸರಾಯರ ಹೃದಯದ ಒಡೆಯ

ಮಾಧ್ವ ತತ್ವಶಾಸ್ತ್ರ ಪಾರಾಂಗತ


ಭಕ್ತಿಯಲಿ ಹರಿಯ ತಿರುಗಿಸಿದ ದಾಸ

ಕಾಗಿನೆಲೆಯಾದಿ ಕೇಶವನಾರಾಧಕ

ಆರಾಧನೆಯ ಸಂಪನ್ನ ನಾಯಕ

ದಾಸ್ಯ ದಹಿಸಿದ ಹಠನಾಯಕ


ಮೋಹನ ತರಂಗಿಣಿ ಕಾವ್ಯದ ಜನಕ

ನಳಚರಿತ್ರೆ ಶೃಂಗಾರದ ಚಿತ್ರಕ

ರಾಮಧಾನ್ಯ ಚರಿತೆಯಲಿ ರಾಗಿಯ

ಯೋಗ ಬೋಧಿಸಿದ ದಾರ್ಶನಿಕ

ಕನ್ನಡ ಸಾಹಿತ್ಯ ಸಿರಿಯಾಗಿಸಿದ ನಾಯಕ


ಶಾಂತಿ ಪ್ರೀತಿ ಬೆಳಗಿದ ನಾಯಕ

ಬಾಡಾ ಗ್ರಾಮದ ನಮ್ಮ ತಿಮ್ಮಪ್ಪ ನಾಯಕ

ಸಾಮರಸ್ಯದ ಬದುಕು ಸಾರುತಾ

ದಾರಿದ್ರ್ಯ ದಹಿಸಿದರು ನಾಡಿನಗಲ


ಹೆಸರಾದರು ಕನಕದಾಸರೆಂದು

ಕುಲ ಕುಲಗಳ ಬೆಸೆದವರೆಂದು


ರಾಮಚಂದ್ರ ಸಾಗರ್