Sunday, 1 November 2020

ಕನ್ನಡವೇ ಜಗವು

 


ಎಲ್ಲ ಕನ್ನಡದ ಮನಸ್ಸುಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಎಲ್ಲರ ಹೃದಯದಲ್ಲಿ ಕನ್ನಡವು ಅವರ ಬಾಳಿನುದ್ದಕ್ಕೂ ಸತ್ಕಾರದ ಹೊನಲಾಗಿ ಕಂಗೊಳಿಸಲಿ. ನವೆಂಬರ್ ಒಂದರಂದು ಮಾತ್ರವೇ ನೆಪಕ್ಕೆ ನಡೆಯುವ  ಸಂಭ್ರಮಾಚರಣೆಗಷ್ಟೇ ನಾವುಗಳು ಸೀಮಿತವಾಗಬಾರದು. ವರ್ಷದುದ್ದವೂ ಕನ್ನಡದ ಬಗೆಗಿನ ಕಾಳಜಿ, ಗೌರವ ಸದಾ ನಮ್ಮೆದೆಯಲಿ ಮೊಳಗಲಿ..ಆಗ ನಿಜವಾಗಿಯೂ ಕನ್ನಡದ  ಅಭಿವೃದ್ಧಿಯಾಗುತ್ತದೆ ಎನ್ನುವುದು ನನ್ನ ಸಣ್ಣ ಆಸೆ..


ಈ ಸುದಿನ ನಾನು "ಕನ್ನಡವೇ ಜಗವು" ಎನ್ನುವ ಕವಿತೆಯನ್ನು ಬರೆದಿರುವೆ ಬಂಧುಗಳೆ. ಕವಿತೆಯನ್ನು ಓದಿ ಹಾರೈಸಿ..


ಕನ್ನಡವೇ ಜಗವು


ಕನ್ನಡವೇ ವರವು ಕನ್ನಡವೇ ದೈವವು

ಕನ್ನಡವೇ ಉಸಿರು ಕನ್ನಡವೇ ಸಿರಿಯು

ಕನ್ನಡವೇ ಅಮೃತವು ಕನ್ನಡವೇ ಸಂಪನ್ನವು

ಕನ್ನಡವೇ ಸಂಸ್ಕಾರವು ಕನ್ನಡವೇ ವೈಭವವು


ಕನ್ನಡವೇ ಸುಯೋಗವು ಕನ್ನಡವೇ ಸತ್ಕಾರವು

ಕನ್ನಡವೇ ಸಂಭ್ರಮವು ಕನ್ನಡವೇ ಸತ್ರವು

ಕನ್ನಡವೇ ನಿಶ್ಚಯವು ಕನ್ನಡವೇ ನಿಬ್ಬೆರಗು

ಕನ್ನಡವೇ ಬೆಳಕು ಕನ್ನಡವೇ ಬೆಡಗು


ಕನ್ನಡವೇ ಉಲ್ಲಾಸವು ಕನ್ನಡವೇ ಉನ್ನತಿಕೆಯು

ಕನ್ನಡವೇ ಸೌಖ್ಯವು ಕನ್ನಡವೇ ಸೌಂದರ್ಯವು

ಕನ್ನಡವೇ ಕಾರುಣ್ಯವು ಕನ್ನಡವೇ ಕಾರುಬಾರು

ಕನ್ನಡವೇ ಕನಕವು ಕನ್ನಡವೇ ನಾಕವು


ಕನ್ನಡವೇ ದಿವ್ಯತೆಯು ಕನ್ನಡವೇ ದಿಗಂತವು

ಕನ್ನಡವೇ ದಿಟವು ಕನ್ನಡವೇ ದೀವಟಿಗೆಯು

ಕನ್ನಡವೇ ಹುರುಳು ಕನ್ನಡವೇ ಬಲವು

ಕನ್ನಡವೇ ಅಮರವು ಕನ್ನಡವೇ ಜಗವು


ಕನ್ನಡಿಗನೆ ಪುನೀತನು ಕನ್ನಡಗನೆ ಸಜ್ಜನನು

ಕನ್ನಡಿಗನೆ ಉದಾರಿಯು ಕನ್ನಡಿಗನೆ ಉದ್ಧಾರಕನು

ಕನ್ನಡಿಗನೆ ಉದಾತ್ತನು ಕನ್ನಡಿಗನೆ ಉಚ್ಛ್ರಾಯನು

ಕನ್ನಡಿಗನೆ ಸೌಹಾರ್ದನು ಕನ್ನಡಿಗನೆ ಸೌಷ್ಠವನು


ಕನ್ನಡ ನುಡಿಯೆ ಸ್ವಾರಸ್ಯದ ದನಿಯು

ಕನ್ನಡ ನುಡಿಯೆ ಜ್ಞಾನದ ಸಿದ್ಧಿಯು

ಕನ್ನಡ ನುಡಿಯೆ ಪಾವನ ಸ್ವರವು

ಕನ್ನಡ ನುಡಿಯೆ ಹೃದಯಕೆ ಘನತೆಯು


ರಚನೆ: ರಾಮಚಂದ್ರ ಸಾಗರ್