ಮುಸ್ಸಂಜೆ ರಂಗು ನಮಗೆ ಹೊನ್ನೆಂದು ನಕ್ಕವನು
ಜಗದ ಸೊಬಗು ರಮ್ಯತೆಯ ಗೂಡಾಗಿರಲು
ಹೊಳೆವ ಸೊಬಗಿನ ಹಾದಿಯಲಿ ನಡೆಸಿದವನು
ಮನದ ದುಗುಡ ಮರೆಸಿ ನಲಿಸಿದವನು
ಬಿರುಗಾಳಿ ಬೀಸುವಾಗ ಅಭಯದಾ ಬೆಸುಗೆಯಲಿ
ಕೈಹಿಡಿದು ಜಗವ ಮುದ್ದಾಗಿ ತೋರಿದ ಜೀವಾತ್ಮನು
ಕಾಂತಾರದ ದುರ್ಗಮದಲಿ ಅಳುಕಿನ ಹಾದಿಯಲ್ಲಿ
ಕೈದೀಪವಾಗಿ ದಾರಿ ತೋರಿದ ಚಂದ್ರಮನು
ಕಿರುಬೆರಳಿಗೆ ನಗುತ ಸಾಂಗತ್ಯ ನೀಡಿ
ಮುಳುಗುವ ರವಿಯು ಮತ್ತೆ ಬರುವನು
ಕಹಿ ಕರಗಿ ಸಂತಸ ಸಡಗರ ತರುವನು
ದುಗುಡವಡಗಿಸಿ ಬೆಳಗು ಮೂಡಿಸುವನು
ನೀ ಅಳುಕದಿರು ಎಂದವನು
ಇಳೆ ತಬ್ಬುವ ಕಪ್ಪಿರುಳು ಛಾಯೆಯಲಿ
ಛಲದ ಮಾತಗಳಲಿ ಎಳೆಮನ ಬಲಿಸಿದವನು
ನೋವೆಂಬುದು ಅಪ್ಪುವ ಆರ್ಭಟದಲು
ನಗುವೆ ಉತ್ತರವಾಗಿಸಿ ಛಲದ ಚೈತನ್ಯವಾದವನು
ನೋವಿನ ಹನಿಗಳು ಕರಗುವುದು
ಬದುಕಿನ ಕನಸು ಅರಳುವುದು
ನೋವುಂಡ ಜೀವಕೆ ಗೆಲುವೆಂದು
ಶಕ್ತ ಬಾಳಿಗೆ ಮುನ್ನುಡಿ ಬರೆದವನು
ನೀನೆ ಜೀವದ ಜೀವಾತ್ಮನು
ರಾಮಚಂದ್ರ ಸಾಗರ್
ಜಗದ ಸೊಬಗು ರಮ್ಯತೆಯ ಗೂಡಾಗಿರಲು
ಹೊಳೆವ ಸೊಬಗಿನ ಹಾದಿಯಲಿ ನಡೆಸಿದವನು
ಮನದ ದುಗುಡ ಮರೆಸಿ ನಲಿಸಿದವನು
ಬಿರುಗಾಳಿ ಬೀಸುವಾಗ ಅಭಯದಾ ಬೆಸುಗೆಯಲಿ
ಕೈಹಿಡಿದು ಜಗವ ಮುದ್ದಾಗಿ ತೋರಿದ ಜೀವಾತ್ಮನು
ಕಾಂತಾರದ ದುರ್ಗಮದಲಿ ಅಳುಕಿನ ಹಾದಿಯಲ್ಲಿ
ಕೈದೀಪವಾಗಿ ದಾರಿ ತೋರಿದ ಚಂದ್ರಮನು
ಕಿರುಬೆರಳಿಗೆ ನಗುತ ಸಾಂಗತ್ಯ ನೀಡಿ
ಮುಳುಗುವ ರವಿಯು ಮತ್ತೆ ಬರುವನು
ಕಹಿ ಕರಗಿ ಸಂತಸ ಸಡಗರ ತರುವನು
ದುಗುಡವಡಗಿಸಿ ಬೆಳಗು ಮೂಡಿಸುವನು
ನೀ ಅಳುಕದಿರು ಎಂದವನು
ಇಳೆ ತಬ್ಬುವ ಕಪ್ಪಿರುಳು ಛಾಯೆಯಲಿ
ಛಲದ ಮಾತಗಳಲಿ ಎಳೆಮನ ಬಲಿಸಿದವನು
ನೋವೆಂಬುದು ಅಪ್ಪುವ ಆರ್ಭಟದಲು
ನಗುವೆ ಉತ್ತರವಾಗಿಸಿ ಛಲದ ಚೈತನ್ಯವಾದವನು
ನೋವಿನ ಹನಿಗಳು ಕರಗುವುದು
ಬದುಕಿನ ಕನಸು ಅರಳುವುದು
ನೋವುಂಡ ಜೀವಕೆ ಗೆಲುವೆಂದು
ಶಕ್ತ ಬಾಳಿಗೆ ಮುನ್ನುಡಿ ಬರೆದವನು
ನೀನೆ ಜೀವದ ಜೀವಾತ್ಮನು
ರಾಮಚಂದ್ರ ಸಾಗರ್
