Tuesday, 13 April 2021

ಯುಗಾದಿ..


ಎಲ್ಲಾ ಸಹೋದರ ಬಂಧುಗಳಿಗೂ ಯುಗಾದಿಯ ಶುಭಾಶಯಗಳು. ಚಂದ್ರಮಾನ ಯುಗಾದಿಯು ಎಲ್ಲರ ಬಾಳಲು ಆರೋಗ್ಯ, ನಗು, ಸಂಪತ್ತು, ಸಹಬಾಳ್ವೆಯನ್ನು ಕರುಣಿಸಲಿ..ಎಲ್ಲರ ಬಾಳು ಬೆಳಗಲಿ ಎಂದು ಆಶಿಸಿ ಯುಗಾದಿ ಕವಿತೆ ಪೋಸ್ಟ್ ಮಾಡುತ್ತಿರುವೆ...ಎಲ್ಲರಿಗು ಯುಗಾದಿಯ ಶುಭಾಶಯಗಳು..

ಯುಗಾದಿ..


ಕಹಿಯ ಬವಣೆ ಕರಗಲು

ಸಿಹಿಯ ಬದಕು ಅರಳಲು

ಮನ ಮನಗಳಲಿ ಯುಗಾದಿ

ಹಚ್ಚಬೇಕಿದೆ ಹೊಸ ದೀವಟಿ.. 


ಚೈತ್ರಮಾಸದ ಹೊಸದಿನ

ಕರೆತರಲಿ ಹೊಸತನ

ಎಲ್ಲರೆದೆಯ ಬೆಳಗಲು

ಉದಯಿಸಲಿ ಬಂಧುತ್ವ...


ರವಿ ಚಂದ್ರರ ಗತಿಯಲ್ಲಿ

ಬಾನು ಭುವಿಯ ಪರಿಧಿಯಲ್ಲಿ

ಬದಲಾಗುವ ಘಳಿಗೆಯಲ್ಲಿ 

ಮರೆಯಾಗಲಿ ಮತ್ಸರ

ಯುಗಾದಿ ತರಲಿ ಸಂತಸ ...


ಅರೆ ನಿಮಿಷವಾದರು 

ಅನ್ಯರ ಮನ ನೋಯಿಸದಿರು

ಕಹಿಯ ಮನಸು ದಹಿಸಿ

ಸಿಹಿಯ ಮನಸು ಅರಳಿಸಿ

ಹರುಷದ ಗೂಡಾಗು..


ವರುಷಗಳ ಆಯುಷ್ಯ 

ಕರಗದಿರಲಿ ವ್ಯರ್ಥ

ಅಂತ್ಯವಾಗುವ ಮುನ್ನ

ಗಳಿಸು ತುಸು ಸಂಪನ್ನತೆ

ಸಿಹಿಯಾದಿಯಾಗಲಿ ತನು ಮನ...


 ರಚನೆ: ರಾಮಚಂದ್ರ ಸಾಗರ್